ನವದೆಹಲಿ : ಈ ಬಾರಿಯ ಐಪಿಎಲ್ ಕೂಟ ಮಾ.26ಕ್ಕೆ ಆರಂಭವಾಗಲಿರುವುದು ಎಲ್ಲರಿಗೂ ಗೊತ್ತಿದೆ. ಹೊಸ ವಿಷಯವೇನೆಂದರೆ ಉದ್ಘಾಟನಾ ಪಂದ್ಯ ಚೆನ್ನೈ ಕಿಂಗ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್ ನಡುವೆ ನಡೆಯಲಿದೆ.
ಮುಂಬೈನ ಮೂರು ಮೈದಾನಗಳಲ್ಲಿ ಒಟ್ಟು 55 ಪಂದ್ಯ ನಡೆಯಲಿದೆ. 15 ಕ್ರಿಕೆಟ್ ಪಂದ್ಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಪುಣೆಯಲ್ಲಿ ನಡೆಯಲಿದೆ. ಪ್ಲೇಆಫ್ ಪಂದ್ಯಗಳು ಬಹುಶಃ ಅಹ್ಮದಾಬಾದ್ನಲ್ಲಿ ನಡೆಯಬಹುದು. ಅಷ್ಟಲ್ಲದೇ ಇನ್ನೊಂದು ವಿಶೇಷ ಸೌಲಭ್ಯವೂ ಆಟಗಾರರಿಗೆ ಲಭಿಸಲಿದೆ.
ಮುಂಬೈನಲ್ಲಿ ವಿಪರೀತ ಟ್ರಾಫಿಕ್ ಸಮಸ್ಯೆಯಿದೆ. ಒಂದು ವೇಳೆ ಅಲ್ಲಿ ಸಿಕ್ಕಿಕೊಂಡರೆ ಕೆಲವು ಗಂಟೆಗಳ ಕಾಲ ಒದ್ದಾಡಬೇಕಾದೀತು. ಇದಕ್ಕಾಗಿಯೇ ಮಹಾರಾಷ್ಟ್ರ ಸರ್ಕಾರ ಈ ಆಟಗಾರರಿಗೆ ವಿಐಪಿಗಳು, ಆಯಂಬುಲೆನ್ಸ್ ಗಳಿಗೆ ನೀಡುವ ವಿಶೇಷ ಸೌಲಭ್ಯವನ್ನು ಘೋಷಿಸಿದೆ. ಅಂದರೆ ಐಪಿಎಲ್ ತಂಡಗಳಿರುವ ಬಸ್ಗಳು ಬಂದಾಗ ಬೇಗಬೇಗ ಟ್ರಾಫಿಕ್ಕನ್ನು ತೆರವು ಮಾಡಲಾಗುತ್ತದೆ. ಇದಕ್ಕೆ ಮುಂಬೈ ನಾಗರಿಕರು ಹೇಗೆ ಪ್ರತಿಕ್ರಿಯಿಸುತ್ತಾರೆಂದು ಕಾದು ನೋಡಬೇಕು.
ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್ಗಳ…
ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…
ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…
ತಮಿಳುನಾಡಿನ ಖಾಸಗಿ ಟಿವಿ ಚಾನೆಲ್ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್ ಮುನಿಸ್ವಾಮಿ…
ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಹೌದು. .…
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್ಸಿಬಿ vs ಸಿಎಸ್ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…