ಜಕಾರ್ತ: ಏಷ್ಯಾಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಭಾರತ ಹಾಕಿ ತಂಡದ ಕನಸು ನನಸಾಗಲಿಲ್ಲ. ಹಾಲಿ ಚಾಂಪಿಯನ್ ಭಾರತ ತಂಡವು ಮಂಗಳವಾರ, ಸೂಪರ್ 4 ಹಂತದ ಅಂತಿಮ ಹಣಾಹಣಿಯಲ್ಲಿ 4-4ರಿಂದ ದಕ್ಷಿಣ ಕೊರಿಯಾ ತಂಡದೊಂದಿಗೆ ಡ್ರಾ ಸಾಧಿಸಿತು.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಮಲೇಷ್ಯಾ ತಂಡವು 5-0ಯಿಂದ ಜಪಾನ್ಗೆ ಸೋಲುಣಿಸಿತು. ಇದರಿಂದಾಗಿ ಭಾರತ ತಂಡಕ್ಕೆ ಕೊರಿಯಾ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಮಲೇಷ್ಯಾ, ಭಾರತ ಮತ್ತು ದಕ್ಷಿಣ ಕೊರಿಯಾ ತಲಾ ಐದು ಪಾಯಿಂಟ್ಸ್ ಗಳಿಸಿದವು. ಆದರೆ ಗೋಲು ಗಳಿಕೆಯಲ್ಲಿ ಭಾರತ ಹಿಂದೆ ಬಿದ್ದಿತು. ಮಲೇಷ್ಯಾ ಮತ್ತು ಕೊರಿಯಾ ಪ್ರಶಸ್ತಿ ಸುತ್ತು ತಲುಪಿದವು. ಬೀರೇಂದ್ರ ಲಾಕ್ರಾ ಮುಂದಾಳತ್ವದ ಭಾರತ ಈ ಪಂದ್ಯದಲ್ಲಿ ಚುರುಕಿನ ಆಟದ ಮೂಲಕ ಗಮನಸೆಳೆಯಿತು. ಆದರೆ ಗೆಲುವು ಒಲಿಯಲಿಲ್ಲ.
ಭಾರತ ತಂಡದ ಪರ ನೀಲಂ ಸಂಜೀಪ್ ಕ್ಸೆಸ್ (9ನೇ ನಿಮಿಷ), ದಿಪ್ಸನ್ ಟಿರ್ಕಿ (21ನೇ ನಿ.), ಮಹೇಶ್ ಶೇಷೇಗೌಡ (22ನೇ ನಿ.) ಮತ್ತು ಶಕ್ತಿವೇಲ್ ಮರೀಶ್ವರನ್ (37ನೇ ನಿ.) ಕೈಚಳಕ ತೋರಿದರು.
ದಕ್ಷಿಣ ಕೊರಿಯಾ ತಂಡಕ್ಕಾಗಿ ಜಾಂಗ್ ಜಾಂಗ್ಯೂನ್ (13ನೇ ನಿ.), ಜೀ ವೂ ಚಿಯೊನ್ (18ನೇ ನಿ.), ಕಿಮ್ ಜಾಂಗ್ ಹೂ (28ನೇ ನಿ.) ಮತ್ತು ಜುಂಗ್ ಮಂಜೆ (44ನೇ ನಿ. ) ಗೋಲು ಹೊಡೆದರು.
ಬುಧವಾರ ನಡೆಯುವ ಮೂರನೇ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು ಜಪಾನ್ ತಂಡವನ್ನು ಎದುರಿಸಲಿದೆ.
ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…
ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.
ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…
ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…
ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…