ನವದೆಹಲಿ : ಮುಂಬರುವಂತೆ ಏಕ ದಿನ ಕ್ರಿಕೆಟ್ ಸರಣಿ ಹಾಗೂ ಟಿ20 ನಾಯಕರು ಯಾರಾಗಲಿದ್ದಾರೆ ಎನ್ನುವ ಬಗ್ಗೆ ತೀವ್ರ ಕುತೂಹಲವಿತ್ತು. ಈ ಕುತೂಹಲಕ್ಕೆ ತೆರೆ ಎಳೆದಿರುವಂತ ಭಾರತೀಯ ಕ್ರಿಕೆಟ್ ಮಂಡಳಿಯು, ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ.
ಈ ಸಂಬಂಧ ಇಂದು ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಸಭೆ ನಡೆಸಿ ಚರ್ಚಿಸಿದ ಬಳಿಕ ಮಾಹಿತಿ ಬಿಡುಗಡೆ ಮಾಡಿದ್ದು, ಮುಂಬರುವಂತ ಭಾರತೀಯ ಕ್ರಿಕೆಟ್ ತಂಡ ಏಕ ದಿನ ಹಾಗೂ ಟಿ20 ಪಂದ್ಯಾವಳಿಗೆ ನಾಯಕರನ್ನಾಗಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿರೋದಾಗಿ ತಿಳಿಸಿದೆ.
ಅಂದಹಾಗೇ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ನಡುವೆ ಯಾರನ್ನು ಟೀಂ ಇಂಡಿಯಾ ಏಕ ದಿನ ಮತ್ತು ಟಿ20 ಪಂದ್ಯಾವಳಿಗಳ ನಾಯಕರನ್ನಾಗಿ ಮಾಡುವ ಬಗ್ಗೆ ಚರ್ಚೆ ಎದ್ದಿತ್ತು. ಕೊನೆಗೂ ರೋಹಿತ್ ಶರ್ಮಾ ಟೀ ಇಂಡಿಯಾದ ಏಕ ದಿನ ಪಂದ್ಯಾವಳಿ ಹಾಗೂ ಟಿ20 ನಾಯಕರಾಗಿ ಆಯ್ಕೆಯಾಗಿದ್ದಾರೆ.