ನವದೆಹಲಿ : ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪೋಟೋಗಳನ್ನ ಗೋವಾದಲ್ಲಿ ‘ಬಿಗ್ ಡ್ಯಾಡಿ’ ಎಂಬ ಕ್ಯಾಸಿನೊ ಪ್ರಚಾರ ಮಾಡಲು ಬಳಸಲಾಗಿತ್ತು. ಈ ದುರುಪಯೋಗಕ್ಕಾಗಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಸಚಿನ್ ಖಚಿತಪಡಿಸಿದ್ದರು.
ಇನ್ನು ‘ಸಾಮಾಜಿಕ ಮಾಧ್ಯಮದಲ್ಲಿ ದಾರಿ ತಪ್ಪಿಸುವ ಚಿತ್ರಗಳ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ವಿನಂತಿಸುವುದು. ನನ್ನ ಕಾನೂನು ತಂಡವು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿರುವಾಗ, ಈ ಮಾಹಿತಿಯನ್ನ ಎಲ್ಲರೊಂದಿಗೂ ಹಂಚಿಕೊಳ್ಳುವುದು ನನಗೆ ಮುಖ್ಯ ಎಂದು ನಾನು ಭಾವಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅನೇಕ ಜಾಹೀರಾತುಗಳನ್ನ ತೋರಿಸಲಾಗುತ್ತಿದೆ, ಮಾರ್ಫ್ ಮಾಡಿದ ಫೋಟೋದೊಂದಿಗೆ ನಾನು ಕ್ಯಾಸಿನೊವನ್ನ ಅನುಮೋದಿಸುತ್ತಿದ್ದೇನೆ ಎನ್ನಲಾಗ್ತರುವುದು ನನ್ನ ಗಮನಕ್ಕೆ ಬಂದಿದೆ’ ಎಂದಿದ್ದಾರೆ.
ಸಧ್ಯ ಈ ಕುರಿತು ನೋವು ವ್ಯಕ್ತ ಪಡಿಸಿದ ಕ್ರಿಕೆಟ್ ದೇವರು, ‘ನಾನು ಜೂಜಾಟ, ತಂಬಾಕು ಅಥವಾ ಮದ್ಯವನ್ನು ಎಂದಿಗೂ ಅನುಮೋದಿಸಿಲ್ಲ – ನೇರವಾಗಿ ಅಥವಾ ಪರೋಕ್ಷವಾಗಿ ಮತ್ತು ವೈಯಕ್ತಿಕವಾಗಿ. ಆದ್ರೆ, ಜನರನ್ನ ದಾರಿ ತಪ್ಪಿಸಲು ನನ್ನ ಚಿತ್ರಗಳನ್ನ ಬಳಸಲಾಗುತ್ತಿರುವುದನ್ನ ನೋಡಿ ನೋವಾಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
ಹೌದು, ಸಾಮಾಜಿಕ ಮಾಧ್ಯಮದಲ್ಲಿ ತೆಂಡೂಲ್ಕರ್ ತಮ್ಮ ಅಭಿಮಾನಿಗಳಿಗಾಗಿ ಸಂದೇಶವನ್ನ ಪೋಸ್ಟ್ ಮಾಡಿದ್ದು, ಜೂಜಾಟ, ತಂಬಾಕು ಅಥವಾ ಆಲ್ಕೋಹಾಲ್ʼನೊಂದಿಗೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಖಚಿತಪಡಿಸಿದ್ದಾರೆ. ಜನರನ್ನ ದಾರಿ ತಪ್ಪಿಸಲು ತನ್ನ ಚಿತ್ರಗಳನ್ನ ತಪ್ಪು ರೀತಿಯಲ್ಲಿ ಬಳಸುತ್ತಿರುವುದು ನನಗೆ ನೋವನ್ನುಂಟು ಮಾಡ್ತಿದೆ ಎಂದು ಬಹಿರಂಗ ಪಡಿಸಿದರು.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…
ಮನೆಯ ಹೊರಗೆ ಆಟಾವಾಡುತ್ತಿದ್ದ ನಾಲ್ಕು ವರ್ಷದ ಮಕ್ಕಳ ಮೇಲೆ ಬೀದಿ ನಾಯಿಗಳ ಗ್ಯಾಂಗ್ ಏಕಾಏಕಿ ದಾಳಿ ಮಾಡಿದ ಘಟನೆ ಪಟ್ಟಣದ…
ಬಸವಣ್ಣನವರ ವಿಚಾರಗಳು ಕೇವಲ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ಅವು ಇಡೀ ನಮ್ಮ ರಾಷ್ಟ್ರದಾದ್ಯಂತ ಇಂದು ಪ್ರಸ್ತುತ ಇವೆ ಎಂದು ಜಿಲ್ಲಾ…
ಸ್ಯಾಂಡಲ್ವುಡ್ ನಟಿ, ನಿರ್ದೇಶಕಿ ರೂಪಾ ಅಯ್ಯರ್ ಅವರಿಗೆ ಆನ್ ಲೈನ್ ಕಳ್ಳರು ಕಾಟ ಕೊಟ್ಟಿದ್ದಾರೆ. ಸಿಸಿಬಿ ಸಿಸಿಬಿ ಅಧಿಕಾರಿಗಳೆಂದು ಕಾಲ್…