Bengaluru 27°C

ಮಣಿಪಾಲದಲ್ಲಿ ಕಾರಿನಲ್ಲೇ ಉಸಿರುಗಟ್ಟಿ ಚಾಲಕನೋರ್ವ ಮೃತ್ಯು

ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕನೋರ್ವ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.

ಉಡುಪಿ: ಕಾರಿನಲ್ಲೇ ಉಸಿರುಗಟ್ಟಿ ಕಾರು ಚಾಲಕನೋರ್ವ ಮೃತಪಟ್ಟ ಘಟನೆ ಮಣಿಪಾಲದಲ್ಲಿ ನಡೆದಿದೆ.


ಮೃತ ಚಾಲಕನನ್ನು ಚಿಕ್ಕಮಗಳೂರು ಮೂಲದ ಆನಂದ (37) ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರಿನ ಗುರುರಾಜ್ ಎಂಬವರು ಆ.14ರಂದು ರಾತ್ರಿ ಆನಂದ ಅವರ ಕಾರಿನಲ್ಲಿ ತನ್ನ ತಂದೆಯನ್ನು ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದರು.


ಗುರುರಾಜ್ ಅವರ ತಂದೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆ ಬಳಿಕ ಚಾಲಕ ಆನಂದ ಅವರು ಕೆಎಂಸಿ ಆಸ್ಪತ್ರೆಯ ಪಾರ್ಕಿಂಗ್‌ ಸ್ಥಳದಲ್ಲಿ ಪಾರ್ಕ್ ಮಾಡಿ ಕಾರಿನಲ್ಲೇ ಮಲಗಿದ್ದರು. ಆ.15ರಂದು ಬೆಳಿಗ್ಗೆ ನೋಡುವಾಗ ಆನಂದ‌ ಅವರು ಕಾರಿನಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Nk Channel Final 21 09 2023