Bengaluru 18°C

ಮುಡಾ 50:50 ಅನುಪಾತದ ಸೈಟ್ ಹಂಚಿಕೆಯಲ್ಲಿ ಸಾವಿರಾರು ಕೋಟಿ ಅಕ್ರಮ: ಸ್ನೇಹಮಯಿ ಕೃಷ್ಣ

ಮುಡಾ 50:50 ಅನುಪಾತದ ಸೈಟ್ ಹಂಚಿಕೆಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ. ಆ ಹಣವನ್ನ ಅಧಿಕಾರಿಗಳು ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದು ನನ್ನ ಗಮನಕ್ಕೆ ಬಂದಿತ್ತು

ಮೈಸೂರು: ಮುಡಾ 50:50 ಅನುಪಾತದ ಸೈಟ್ ಹಂಚಿಕೆಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ. ಆ ಹಣವನ್ನ ಅಧಿಕಾರಿಗಳು ತಮ್ಮ ಕುಟುಂಬಸ್ಥರ ಹೆಸರಿನಲ್ಲಿ ಬೇರೆ ಬೇರೆ ಕಡೆ ಹೂಡಿಕೆ ಮಾಡಿದ್ದು ನನ್ನ ಗಮನಕ್ಕೆ ಬಂದಿತ್ತು. ಈ ಹಿಂದಿನ ಮುಡಾ ಆಯುಕ್ತ ನಟೇಶ್ ತಮ್ಮ ಪತ್ನಿ ರಶ್ಮಿಯನ್ನ ನಾಲ್ಕು ಕಂಪನಿಗಳಿಗೆ ಪಾಲುದಾರರಾಗಿ ಮಾಡಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.


ಬ್ಲೂ ಸ್ಟೋನ್ ವೆಂಚರಸ್ , ಕಾವೇರಿ ಗಂಗಾ ವೆಂಚರೆಸ್ ಕಂಪನಿ, ವಿಪಾಸನ ಹೆಲ್ತ್ ಕೇರ್,ಅಕಿನೋವ ಹೆಲ್ತ್ ಕೇರ್ ನಾಲ್ಕು ಕಂಪನಿಗಳಲ್ಲಿ ರಶ್ಮಿ ನಿರ್ದೇಶಕರಾಗಿದ್ದಾರೆ. ಅವರ ಹೆಂಡತಿ ಮೂಲಕ ಈ ಕಂಪನಿಗಳಿಗೆ ಹಣ ಹೂಡಿಕೆ ಮಾಡಿದ್ದಾರೆ. ಬ್ಲೂ ಸ್ಟೋನ್ ವೆಂಚರಸ್ ಕಂಪನಿ ಬೋಗಾದಿಯ ಅಪಾರ್ಟ್ಮೆಂಟ್ ನಲ್ಲಿ ಫ್ಲಾಟ್ ಖರೀದಿ ಮಾಡಿದ್ದಾರೆ.


ಇಲವಾಲ ಬಳಿ ಒಂದು ಎಕರೆ ಮೂತ್ತು ಕುಂಟೆ ಖರೀದಿ ಮಾಡಿದ್ದಾರೆ. ಈ ಬಗ್ಗೆ ನನಗೆ ದಾಖಲೆಗಳು ಸಿಕ್ಕ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದೇನೆ. ಈ ಆರೋಪ ಕಂಡು ಬಂದಲ್ಲಿ ಅವರನ್ನ ಆರೋಪಿಗಳಾಗಿ ಮಾಡುವಂತೆ ಮನವಿ ಮಾಡಿದ್ದೇನೆ. ಈ ವಿಚಾರವಾಗಿ ಜಾರಿ ನಿರ್ದೇಶನಾಲಯಕ್ಕೂ ದೂರು ಕೊಟ್ಟಿದ್ದೇನೆ.


ಹೈಕೋರ್ಟ್ ನಲ್ಲಿ ಸಿಎಂ ಮೇಲ್ಮನವಿ ಅರ್ಜಿ ವಿಚಾರಣೆ ವಿಚಾರವಾಗಿ ಉಚ್ಚ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಸಿಎಂ ಹಾಕಿರುವ ಮೇಲ್ಮನವಿ ಅರ್ಜಿ ವಜಾ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಮೇಲ್ಮನವಿ ಪರಿಗಣಿಸಬೇಕಾದ ಯಾವುದೇ ಅಂಶ ಆ ಅರ್ಜಿಯಲ್ಲಿ ಇಲ್ಲ.


ಸಿಬಿಐ ಗೆ ಪ್ರಕರಣ ವಹಿಸಬೇಕೆಂಬ ಅರ್ಜಿ ಸಲ್ಲಿಕೆ ವಿಚಾರವಾಗಿ ಇದೆ ತಿಂಗಳ 10 ರಂದು ಅರ್ಜಿ ವಿಚಾರಣೆ ಇದೆ. ಅರ್ಜಿ ವಿಚಾರಣೆ ಬಳಿಕ ನ್ಯಾಯಾಲಯ ಈ ಪ್ರಕರಣವನ್ನ ಸಿಬಿಐ ನೀಡುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾದ ಎಲ್ಲಾ ಸಾಕ್ಷಿಗಳು ನಮ್ಮ ಬಳಿ ಇವೆ. ಈ ಪ್ರಕರಣ ಸಿಬಿಐ ಯಾಕೆ ಕೊಡಬೇಕೆಂಬ ವಿಚಾರವನ್ನ ನಮ್ಮ ವಕೀಲರು ನ್ಯಾಯಾಲಯಕ್ಕೆ ತಿಳಿಸಲಿದ್ದಾರೆ. ನಮ್ಮ ಮನವಿ ಪರಿಗಣಿಸಿ ನ್ಯಾಯಾಲಯ ಸಿಬಿಐ ಗೆ ವಹಿಸುವ ಸಾಧ್ಯತೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.


ಇಡಿ ಇಲಾಖೆಯಿಂದ ಲೋಕಾಯುಕ್ತಕ್ಕೆ ಪತ್ರ ಬರೆದಿರುವ ವಿಚಾರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ನಾನು ಮಾಡಿದ್ದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರೋದು ಕಂಡು ಬಂದಿದೆ.


ಕಾನೂನು ಪ್ರಕಾರ ಸಿಎಂ ಪತ್ನಿಗೆ ಸೈಟ್ ನೀಡಿದ್ದೇವೆ ಎಂಬ ರಾಜೀವ್ ಹೇಳಿಕೆ ವಿಚಾರವಾಗಿ ಯಾವ ಕಾನೂನು ಪ್ರಕಾರ ಆಗಿದೆ, ಯಾವ ಕೋರ್ಟ್ ಆದೇಶ ಪ್ರಕಾರ ಎಂಬುದರ ಬಗ್ಗೆ ದಾಖಲೆ ಬಿಡುಗಡೆ ಮಾಡಲಿ. ಇದು ಅಕ್ರಮ ಎಂಬುದಕ್ಕೆ ನಾನು ಸಾಕಷ್ಟು ದಾಖಲೆ ಬಿಡುಗಡೆ ಮಾಡಿದ್ದೇನೆ. ಯಾರು ಕಾನೂನು ಪ್ರಕಾರ ಆಗಿದೆ ಎನ್ನುತ್ತಾರೆ ಅವರು ದಾಖಲೆ ನೀಡಲಿ. ಯಾವ ದಾಖಲೆಗಳು ಇಲ್ಲದೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಸಿಎಂ ಪತ್ನಿ ಪಾರ್ವತಿ 50:59 ಅನುಪಾತದಲ್ಲಿ ನಿವೇಶನ ಕೊಡಬೇಕೆಂದು ಎಲ್ಲಿಯೂ ಉಲ್ಲೇಖ ಇಲ್ಲ. ಜನರ ದಿಕ್ಕು ತಪ್ಪಿಸಲು ಈ ರೀತಿಯಾದ ಹೇಳಿಕೆ ನೀಡುತ್ತಿದ್ದಾರೆ.


ಸಿಎಂ ಪತ್ನಿಗೆ ಸೈಟ್ ನೀಡುವಾಗ ಸಿಎಂ ಪ್ರಭಾವ ಬೀರಿರುವ ವಿಚಾರವಾಗಿ ಲಿಖಿತವಾಗಿಯೇ ಸಾಕ್ಷಿ ಆಧಾರಗಳು ಇರಬೇಕೆಂದಿಲ್ಲ. ಮೌಖಿತ ಸಾಕ್ಷಿಗಳು ಇರಬೇಕೆಂದು ಹೇಳುತ್ತವೆ. ದ್ರುವಕುಮಾರ್ ರವರು ಈ ಬಗ್ಗೆ ಸಿಎಂ ಬಳಿ ಹೇಳುವಾಗ. ನನ್ನ ಅದಿಕಾರದ ಅವಧಿಯಲ್ಲಿ ಸೈಟ್ ನೀಡೋದು ಬೇಡ ಎಂದಿದ್ದೆ ಎಂದು ಸಿಎಂ ಅವರೇ ಹೇಳಿಕೊಂಡಿದ್ದಾರೆ. ಮೌಖಿಕವಾಗಿ ಅವರು ಪ್ರಭಾವ ಬೀರಿದ್ದಾರೆ ಎಂದು ತಿಳಿಸುತ್ತದೆ. ಕಾನೂನು ಮೌಖಿಕ ಆಧಾರಗಳನ್ನು ಕೆಲವೊಮ್ಮೆ ಪರಿಗಣಿಸುತ್ತದೆ. ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.


Nk Channel Final 21 09 2023