Bengaluru 17°C

ಕಲ್ಲು ಎಸೆದು ಅಂಬೇಡ್ಕರ್ ನಾಮಫಲಕ ಡ್ಯಾಮೇಜ್ ಪ್ರಕರಣ: ಗ್ರಾಮಕ್ಕೆ‌ ಶಾಸಕ ಜಿಟಿ ದೇವೇಗೌಡ ಭೇಟಿ

ಲ್ಲು ಎಸೆದು ಅಂಬೇಡ್ಕರ್ ನಾಮಫಲಕ ಡ್ಯಾಮೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ‌ಶಾಸಕ ಜಿಟಿ ದೇವೇಗೌಡ ಭೇಟಿ ನೀಡಿದರು.

ಮೈಸೂರು : ಕಲ್ಲು ಎಸೆದು ಅಂಬೇಡ್ಕರ್ ನಾಮಫಲಕ ಡ್ಯಾಮೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಕ್ಕೆ‌ಶಾಸಕ ಜಿಟಿ ದೇವೇಗೌಡ ಭೇಟಿ ನೀಡಿದರು. ಅಂಬೇಡ್ಕರ್ ನಾಮಪಲಕಕ್ಕೆ ಅಪಮಾನಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಲಾಯಿತು.


ಮೈಸೂರಿನ ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ನಾಮಫಲಕಕ್ಕೆ ಕಲ್ಲು ಎಸೆದು, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಡ್ಯಾಮೇಜ್ ಮಾಡಿದ್ದಾರೆ. ಈ ಘಟನೆಯನ್ನು ಬೆಳಗ್ಗೆ ಗಮನಿಸಿದ ಗ್ರಾಮಸ್ಥರು, ದಿಢೀರ್ ಪ್ರತಿಭಟನೆ ಮಾಡಿದ್ದಾರೆ.


ವಿಷಯ ತಿಳಿದ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ ರೆಡ್ಡಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಇಂತಹ ದುಷ್ಕೃತ್ಯವೆಸಗಿದ ಕಿಡಿಗೇಡಿಗಳನ್ನು ಬಂಧಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


Nk Channel Final 21 09 2023