Bengaluru 31°C

ಮುಡಾ ಹಗರಣ ಹಿಂದೆ ಸಿದ್ದರಾಮಯ್ಯ ಪಟಾಲಂಗಳ ಕೈವಾಡವಿದೆ: ಎಲ್.ನಾಗೇಂದ್ರ

ಮುಡಾ ಹಗರಣ ಹಿಂದೆ ಸಿದ್ದರಾಮಯ್ಯ ಪಟಾಲಂಗಳ ಕೈವಾಡವಿದೆ ಎಂದು ಮೈಸೂರಿನಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿಕೆ ನೀಡಿದ್ದಾರೆ.

ಮೈಸೂರು: ಮುಡಾ ಹಗರಣ ಹಿಂದೆ ಸಿದ್ದರಾಮಯ್ಯ ಪಟಾಲಂಗಳ ಕೈವಾಡವಿದೆ ಎಂದು ಮೈಸೂರಿನಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿಕೆ ನೀಡಿದ್ದಾರೆ. ಈಗಾಗಲೇ 900ಕ್ಕೂ ಹೆಚ್ಚು ನಿವೇಶನಗಳ ಹಂಚಿಕೆ ಅಕ್ರಮವೆಂದು ಸಾಬೀತಾಗಿದೆ. ಇದರ ಹಿಂದೆ ಸಿದ್ದರಾಮಯ್ಯರ ಪಟಾಲಂ ಕೈವಾಡವಿರುವುದು ಸ್ಪಷ್ಟವಾಗಿದೆ.


ಎಲ್ಲೋ ಬ್ಯಾಂಕ್ ಲೂಟಿಯಾದ್ರೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ. ಆದರೆ ಮುಡಾದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು, ಸತ್ಯಾಂಶ ಬಯಲಾಗಬೇಕು ಎಂದು ಮೈಸೂರಿನಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ಹೇಳಿಕೆ ನೀಡಿದರು.


Nk Channel Final 21 09 2023