ಮೈಸೂರು: ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಮೈಸೂರಿನ ಅಭಿವೃದ್ಧಿಗೆ ಅಪಾರ ಕೊಡುಗೆ ಕೊಟ್ಟಿದೆ ಎಂದು ಬಿಜೆಪಿ ಅಭ್ಯರ್ಥಿ ಯದುವೀರ್ ಪರವಾಗಿ ಪ್ರಚಾರ ಮಾಡುತ್ತ ಪ್ರತಾಪ್ ಸಿಂಹ ಹೇಳಿದ್ದಾರೆ.
ʼಬೆಂಗಳೂರು-ಮೈಸೂರು ಹೈವೆಯಲ್ಲಿ ಓಡಾಡುವಾಗ ಮೋದಿಯವರ ಹೆಸರು ಹೇಳಿಕೊಂಡು ಓಡಾಡಬೇಕುʼ ಎಂದ ಸಿಂಹ, ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಕಿದ್ವಾಯ್ ಆಸ್ಪತ್ರೆಯ ಸ್ಥಾಪನೆ, ಕೆ.ಆರ್ ಆಸ್ಪತ್ರೆಯ ನವೀಕರಣಗಳಂತಹ ಕೆಲಸಗಳನ್ನು ಪಟ್ಟಿ ಮಾಡಿದರು.
ಸಿದ್ದರಾಮಯ್ಯ ಸರ್ಕಾರ ಬಂದಾಗ ಜಯದೇವ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣವಾಯಿತಾದರೂ ಅದನ್ನು ಮೈಸೂರಿಗೆ ತಂದವರು ಯಡಿಯೂರಪ್ಪ. ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಅನುದಾನ ಪಡೆದ ಏರ್ಪೋರ್ಟ್ಗೆ ಈಗ ವಿಸ್ತರಣೆಗೆ ಸಿದ್ಧವಾಗಿದೆ ಎಂದರು.