ಸರಗೂರಿನಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಪೂಜಾ ಮಹೋತ್ಸವ

ಸರಗೂರು: ಸರಗೂರು ಪಟ್ಟಣದ 10ನೇ ವಾರ್ಡ್ ನಲ್ಲಿ ನೇಕಾರ ತೊಗಟವೀರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀ ಚೌಡೇಶ್ವರಿ ಅಮ್ಮನವರ 83 ನೇ ಜ್ಯೋತಿ ಪೂಜಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು.

ಬುಧವಾರದಿಂದ ಆರಂಭಗೊಂಡಿರುವ ಪೂಜಾ ಮಹೋತ್ಸವ ಮೇ.28ರವರೆಗೆ ನಡೆಯಲಿದೆ. ಶ್ರೀ ದಿವ್ಯ ಜ್ಞಾನಾನಂದ ಗಿರಿ ಸ್ವಾಮೀಜಿಯವರ ಕೃಪಾಶೀರ್ವಾದೊಂದಿಗೆ ದೇವಸ್ಥಾನ ವನ್ನು ಹಾಗೂ ಇಲ್ಲಿನ ಜನಾಂಗದವರ ಬೀದಿಗಳಲ್ಲಿ ತಳಿರು ತೋರಣಗಳಿಂದ, ರಂಗೋಲಿ ಬಿಡಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತಲ್ಲದೆ, ಪೂಜಾ ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿದ್ದು, ಬುಧವಾರ ಪುನರ್ವಸು ನಕ್ಷತ್ರ ಪ್ರಾಂತಕಾಲ 5ಕ್ಕೆ ಪುಣ್ಯಾಹ, ನಾಂದಿ ಕಳಸ ಸ್ಥಾಪನೆ ಶ್ರೀ ಗಣಪತಿ ಪೂಜೆ, ನವಗ್ರಹೋಮ ಮತ್ತು ದುರ್ಗಾ ಹೋಮ, ನಂತರ ಶ್ರೀ ಚೌಡೇಶ್ವರಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ, ಲಲಿತ ಸಹಸ್ರನಾಮ ಕುಂಕುಮಾರ್ಚನೆ, ತಾಯಿಗೆ ಪೂರ್ಣಾಹುತಿಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.

ಆ ನಂತರ ಬೆಳಿಗ್ಗೆ 10:30 ಗಂಟೆಗೆ ಶ್ರೀ ಚೌಡೇಶ್ವರಿ ಅಮ್ಮನವರ ಹೂವಿನ ಪಲ್ಲಕ್ಕಿ ಉತ್ಸವವನ್ನು ಕುಲಬಾಂಧವರು ಸೇರಿ ಜ್ಯೋತಿ ಸಮೇತವಾಗಿ ಮಂಗಳ ವಾದ್ಯ ದೊಡನೆ ಕಪಿಲಾ ನದಿ ದಡಕ್ಕೆ ತೆರಳಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ಶ್ರೀ ಚೌಡೇಶ್ವರಿ ಅಮ್ಮನವರ ಉತ್ಸವದ ಮುಂದೆ ಸದ್ಭಕ್ತರು ಹರಕೆಯ ಬಾಯಿ ಬೀಗ, ಮತ್ತು ಅಲಗು ಸೇವೆ ಮಾಡಿ ದೇವಿಗೆ ಹರಕೆ ಅರ್ಪಿಸಿದರು.

ಜ್ಯೋತಿಯ ಮುಂದೆ ಭಜನಾ ಮಂಡಳಿಯವರು ಸ್ತೋತ್ರ ಪಠಣ ಖಡ್ಗ ಸ್ತೋತ್ರ ಭಜನೆ ಪಠಣ ಮಾಡಿದರೆ, ಮುತ್ತೈದೆಯರು ಹೆಣ್ಣು ಮಕ್ಕಳು ಕಳಸ ಹೊತ್ತು ಉತ್ಸವದ ಮುಂದೆ ಸಾಗಿದರಲ್ಲದೆ, ಸಮಾಜದವರಿಂದ ಮಜ್ಜಿಗೆ, ತಂಪು ಪಾನಿಯ ಹಾಗೂ ಸಿಹಿ ಹಂಚಿದರು. ಶ್ರೀ ಚೌಡೇಶ್ವರಿ ಅಮ್ಮನವರ ಪಲ್ಲಕ್ಕಿ ಉತ್ಸವವು ದೇವಸ್ಥಾನಕ್ಕೆ ಬಂದು ತಲುಪಿದ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ನೆರೆದ ಸಾವಿರಾರು ಭಕ್ತರಿಗೆಗಜಾನನ ಗೆಳೆಯರ ಬಳಗದವರು ಅನ್ನ ಸಂತರ್ಪಣೆ ನೆರವೇರಿಸಿದರು.

Gayathri SG

Recent Posts

ಪ್ರಜ್ವಲ್ ರೇವಣ್ಣ ಅಂತಹ ಸ್ವಭಾವದ ಹುಡುಗ ಅಲ್ಲ ಎಂದ ಸಂಸದ ಜಿ.ಎಸ್ ಬಸವರಾಜ್

ಪ್ರಜ್ವಲ್ ರೇವಣ್ಣ ನನ್ನ ಆತ್ಮೀಯ ಸ್ನೇಹಿತ. ಅಂತಹ ಸ್ವಭಾವದ ಹುಡುಗ ಅಲ್ಲ. ಪ್ರಜ್ವಲ್ ಅವರ ಮೇಲಿನ ಪ್ರಕರಣ ಸತ್ಯನೋ ಸುಳ್ಳೋ…

13 mins ago

ಕಾಂಗ್ರೆಸ್ ಕೊಲೆಗಡಕರನ್ನು ಬಂಧನ ಮಾಡಬೇಕಾದ್ರೆ ನೂರು ಬಾರಿ ಯೋಚಿಸುತ್ತದೆ: ವಿಜಯೇಂದ್ರ

ಕಾಂಗ್ರೆಸ್ ಸರ್ಕಾರ ಕೊಲೆಗಡಕರನ್ನು ಬಂಧನ ಮಾಡಬೇಕು ಅಂದ್ರೆ ನೂರು ಬಾರಿ ಯೋಚನೆ ಮಾಡುತ್ತಾರೆ. ಲವ್ ಜಿಹಾದ್ ನಲ್ಲಿ ತಪಿತಸ್ಥರನ್ನು ಒಳಗೆ…

14 mins ago

ಬಿಜೆಪಿ ಸೋಲಿಸಿ ಕಾಂಗ್ರೆಸ್ ಗೆಲ್ಲಿಸಿ : ಧನರಾಜ ತಾಳಂಪಲ್ಲಿ

'ಸಂವಿಧಾನ ಬದಲಿಸಲು ನಿರ್ಧರಿಸಿದ ಬಿಜೆಪಿಯನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿ, ಜನಪರವಾಗಿ ಕೆಲಸ ಮಾಡುವ ಇಚ್ಛೆ ಹೊಂದಿರುವ ಕಾಂಗ್ರೆಸ್‌…

26 mins ago

ಅಪರಿಚಿತ ವಾಹನ ಡಿಕ್ಕಿ : ಸ್ಥಳದಲ್ಲಿಯೇ ಬೈಕ್ ಸವಾರ ಸಾವು

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಬಳಿ…

36 mins ago

ಈ ರೀತಿ ವಿಡಿಯೋಗಳು ಇದ್ದಾಗ ಬ್ಲರ್ ಮಾಡಬೇಕಿತ್ತು: ನಿಖಿಲ್​ ಕುಮಾರಸ್ವಾಮಿ

ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧಿಸಿದಂತೆ ಜೆಡಿಎಸ್ ಯುವ​ ನಾಯಕ ನಿಖಿಲ್​ ಕುಮಾರಸ್ವಾಮಿ ಮಾತನಾಡಿದ್ದು,  ಒಂದೇ ಒಂದು ಬಹಳ ದುಃಖ ತಂದಿದೆ.…

47 mins ago

ಬೀದರ್‌ನಲ್ಲಿ ಮಕ್ಕಳಸ್ನೇಹಿ ಕಲಿಕಾ ಕೇಂದ್ರ ಉದ್ಘಾಟನೆ

ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಉದ್ದೇಶದಿಂದ ಹಾಲಹಳ್ಳಿ ಗ್ರಾಮದಲ್ಲಿ ಮಕ್ಕಳ ಸ್ನೇಹಿ ಕಲಿಕಾಕೇಂದ್ರಗಳನ್ನು ತೆರೆಯಲಾಗುತ್ತಿದೆ' ಎಂದು ವಾಣಿಜ್ಯ ತೆರಿಗೆ ಇಲಾಖೆಯ…

47 mins ago