Categories: ಮೈಸೂರು

ಮೈಸೂರು: ರಾಮಪ್ರಸಾದ್ ಅವರ ಜನ ಪ್ರೀತಿ ಅಪಾರ – ಡಾ.ಎಂ.ಆರ್.ರವಿ

ಮೈಸೂರು: ಎಸ್.ರಾಮಪ್ರಸಾದ್ ಅವರ ಇಡೀ ಜೀವನ ಗಮನಿಸಿದೇನೆ. ಅವರ ಜೀವನ ಪ್ರೀತಿ, ಮತ್ತೊಂದು ಜನ ಪ್ರೀತಿಯನ್ನು ಅವರು ಅಪಾರವಾಗಿ ಸಂಪಾದಿಸಿದ್ದಾರೆ ಎಂದು ಕೆಎಸ್‌ಐಐಡಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಆರ್.ರವಿ ತಿಳಿಸಿದರು.

ನಗರದ ಸರಸ್ವತಿಪುರಂನ ರೋಟರಿ ಮೈಸೂರು ಪಶ್ಚಿಮ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟ ಮತ್ತು ಹೊಯ್ಸಳ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಎಸ್.ರಾಮಪ್ರಸಾದ್ 80 ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು, ನಾಲ್ಕು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ರಾಮಪ್ರಸಾದ್ ಅವರು ಮೈಸೂರಿಗೆ ಒಂದು ರೀತಿಯಲ್ಲಿ ರಾಮನಪ್ರಸಾದವೇ ಎಂಬ ಮಟ್ಟಕ್ಕೆ ಅವರಿದ್ದಾರೆ. ಒಂದೇ ಒಂದು ಸಣ್ಣ ಕಳಂಕ, ವಿವಾದದ ಸುಳಿಗೆ ಅವಕಾಶ ಕೊಟ್ಟವರಲ್ಲ. ಮನುಷ್ಯನಲ್ಲಿ ಸ್ವಲ್ಪವೂ ಅಹಂ ಗಮನಿಸಿಲ್ಲ. ಅನೇಕರು ಸ್ವಲ್ಪ ಎತ್ತರಕ್ಕೆ ಬೆಳೆದರೂ ಅಹಂ ಕೋಟೆ ಕಟ್ಟಿಕೊಳ್ಳುತ್ತಾರೆ. ಅದಿಲ್ಲದೆ ಎಷ್ಟು ಸುಂದರವಾದ ಬದುಕು ಕಟ್ಟಿಕೊಳ್ಳಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಹೊಂದಿಕೆ ಎಂಬುದು ಕಷ್ಟವಾಗಿದೆ. ಆದರೆ, ರಾಮಪ್ರಸಾದ್ ಅವರು ಎಷ್ಟು ಕಷ್ಟದಿಂದ ಈ ಸಮಾಜದಲ್ಲಿ ಬದುಕು ಕಟ್ಟಿದ್ದಾರೆ ಎಂಬುದನ್ನು ಗಮನಿಸಬೇಕು. ಅವರು ತಮ್ಮ ಲೇಖನವೊಂದರಲ್ಲಿ ನನ್ನ ಮನೆ ಒಂದು ರೀತಿಯ ಅನಾಥಾಶ್ರಮ ಎಂದು ಬರೆದುಕೊಂಡಿದ್ದಾರೆ. ಅದನ್ನು ಓದಿದಾಗ ನನ್ನ ಕಣ್ಣುಗಳು ಒದ್ದೆಯಾಯಿತು ಎಂದು ಅವರು ವಿವರಿಸಿದರು.

ವೃದ್ಧಾಪ್ಯ ಎಂಬುದರ ಸಂಕಟ ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು. ಇತ್ತೀಚೆಗೆ ಅನೇಕ ಮನೆಗಳು ವೃದ್ಧಾಶ್ರಮವಾಗುತ್ತಿವೆ. ಮಕ್ಕಳು, ಮೊಮ್ಮಕ್ಕಳು ಓದಲು, ಉದ್ಯೋಗಕ್ಕಾಗಿ ಬೇರೆ ಬೇರೆ ಊರುಗಳಿಗೆ ಹೋಗುವುದರಿಂದ ಮನೆಯಲ್ಲಿ ಉಳಿಯುತ್ತಿರುವುದು ಕೇವಲ ಹಿರಿಯರೇ. ಇಂತಹ ಸಂದರ್ಭಗಳಲ್ಲಿ ಜೀವಂತಿಕೆ ಎಂಬುದು ಇರುವುದಿಲ್ಲ. ವೃದ್ಧರ ಕಷ್ಟಗಳನ್ನು ಯಾರೂ ಅರ್ಥ ಮಾಡಿಕೊಳ್ಳಲಾಗದು ಎಂದರು.

ಎಸ್.ರಾಮಪ್ರಸಾದ್ ಅವರು ಎಲ್ಲದಕ್ಕೂ ಎಸ್ ಎಂದು ಹೇಳುತ್ತಾರೆ. ಆದರೆ, ವಿವಿಯಲ್ಲಿ ಇದ್ದವರು, ಗಣಿತಶಾಸ್ತ್ರದಲ್ಲಿ ಎಂಎಸ್ಸಿ ಮಾಡಿದವರು. ಅನೇಕರಿಗೆ ಮಾರ್ಗದರ್ಶಕರಾದರೂ ಕೂಡ ಪಿಎಚ್‌ಡಿ ಮಾಡಲಿಲ್ಲ. ಅಲ್ಲದೆ ಇವರ ಇಡೀ ಕುಟುಂಬ ಬ್ರಹ್ಮಚಾರಿಗಳಾಗಿ ಜೀವನ ನಡೆಸಿದವರು. ವಿಶ್ವಮಾನವರಾಗಿ ಬೆಳೆದ ರಾಮಪ್ರಸಾದ್ ಅವರ ಜೀವನ ಮತ್ತು ವ್ಯಕ್ತಿತ್ವ ಬಹಳ ವಿಶೇಷವಾಗಿ ಕಾಣಿಸುತ್ತದೆ. ನಂತರದ ಪೀಳಿಗೆಗೆ ಇವರ ಬದುಕು ಆದರ್ಶ ಪ್ರಾಯವಾಗಿದೆ. ಅವರ ಕ್ರಿಯಾಶೀಲತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಅವರು ಕೊಂಡಾಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಇದೇ ವೇಳೆ ಸಾಹಿತಿ ಎಸ್.ರಾಮಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ರಂಗನಾಥ್ ಮೈಸೂರು, ಎಂ.ಮುತ್ತುಸ್ವಾಮಿ, ಕೆ.ಎಸ್.ಜಯಲಕ್ಷ್ಮೀ ಇದ್ದರು.

Sushma K

Recent Posts

ಜಮ್ಮು & ಕಾಶ್ಮೀರದ ಅನಂತ್‌ನಾಗ್‌-ರಾಜೌರಿ ಕ್ಷೇತ್ರದ ಮತದಾನ ಮುಂದೂಡಿಕೆ

ಲೋಕಸಭಾ ಚುನಾವಣೆ ಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿದೆ. ಮೇ 7ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ…

5 hours ago

ಮೇ 01 ರಂದು ಕರ್ನಾಟಕಕ್ಕೆ ಅಮಿತ್​ ಶಾ ಎಂಟ್ರಿ

ಲೋಕಸಭಾ ಚುನಾವಣಾ ಹಿನ್ನಲೆ ಮೊದಲ ಹಂತದ ಮತದಾನ ಈಗಾಗಲೇ ಮುಗಿದಿದ್ದು ಇದೀಗ 2ನೇ ಹಂತದ ಚುನಾವಣೆ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ.ಪ್ರಧಾನಿ…

5 hours ago

ಆಂಪಿಯರ್ ಎಲೆಕ್ಟ್ರಿಕ್ ಕಂಪೆನಿ ಬಿಡುಗಡೆ ಮಾಡುತ್ತಿದೆ ನೆಕ್ಸಸ್ ಇವಿ ಸ್ಕೂಟರ್

ಗ್ರೀವ್ ಕಾಟನ್ ಮಾಲೀಕತ್ವದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿ ತನ್ನ ಹೊಚ್ಚ ಹೊಸ ನೆಕ್ಸಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ…

5 hours ago

ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಠಾಣ, ನಿಜಾಂಪುರ, ಕೊಳಾರ(ಕೆ), ಗೋರನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರು ಪಕ್ಷ…

6 hours ago

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೈವೋಲ್ಟೇಜ್ ಕ್ಷೇತ್ರ ಅಫಜಲಪುರಕ್ಕೆ ಆಗಮನ

ಜಿಲ್ಲೆಯ ಬಿಜೆಪಿ ಲೋಕಸಭಾ ಅಭ್ಯರ್ಥಿ ಉಮೇಶ ಜಾಧವ್ ಅವರ ಪ್ರಚಾರ ನಿಮಿತ್ಯ ಜಿಲ್ಲೆಯ ಹೈವೊಲ್ಟೇಜ್ ಕ್ಷೇತ್ರ ಅಫಜಲಪುರ ಪಟ್ಟಣದಲ್ಲಿ ಬಿಜೆಪಿ…

6 hours ago

ಲೋಕಸಭಾ ಚುನಾವಣೆ : ಕಾಂಗ್ರೆಸ್​ ಹೊಸ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಲೋಕಸಭಾ ಚುನಾವಣೆಗೆ ಹಿನ್ನಲೆ ಸಂಬಂಧಿಸಿದಂತೆ ಇಂದು ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷದ…

6 hours ago