Categories: ಮೈಸೂರು

ಮೈಸೂರು: ಮಾಜಿ ಎಂಎಲ್ಸಿ ಡಿ ಮಾದೇಗೌಡರಿಗೆ ಸನ್ಮಾನ

ಮೈಸೂರು: ಆಶಾ ಮಂದಿರ ರೂವಾರಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಮಾದೇಗೌಡರನ್ನು ಕುಂಬಾರ ಕೊಪ್ಪಲ್ಲಿನ ಅವರ ನಿವಾಸದಲ್ಲಿ ಯುವ ಗ್ರಾಮ ಅಭ್ಯುದಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಮಿತಿಯ ಪಟೇಲ್ ನಾಗರಾಜ್ ಡಿ ಅವರು ಮಾತನಾಡಿ ಧೀಮಂತ ನಾಯಕರಾದ ಮಾಜಿ ಶಾಸಕರು, ಮಾಜಿ ಮುಡಾ ಅಧ್ಯಕ್ಷರಾದ ಡಿ. ಮಾದೇಗೌಡರದು ಕೇವಲ 18 ತಿಂಗಳಲ್ಲಿ 9 ಪ್ರತಿಷ್ಠಿತ ಬಡಾವಣೆಗಳ ನಿರ್ಮಾಣ, 30 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದು, ಬೃಹತ್ ಸಾಧನೆಯಾಗಿದೆ.

ಇತ್ತೀಚೆಗೆ 2022 ರಲ್ಲಿ ಜೀವಮಾನ ಸಮಾಜ ಸೇವೆಗಾಗಿ ಪ್ರತಿಷ್ಠಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರಾದ್ದು ಅವರ ಸೇವೆಗೆ ಅರ್ಹವಾಗಿದೆ. ನಿರ್ಮಲ ನಗರ ಯೋಜನೆಯ ಪ್ರಾಮಾಣಿಕ ಅನುಷ್ಠಾನಕ್ಕಾಗಿ, ಇವರಿಗೆ ರಾಷ್ಟ್ರಪ್ರಶಸ್ತಿ ಅರಸಿ ಬಂದಿದ್ದು, ನಾಡಿನ ಹೆಮ್ಮೆ ಎನಿಸಿಕೊಂಡರು. ಯಾವುದೇ ಅಧಿಕಾರವನ್ನು ಹುಡುಕಿಕೊಂಡು ಹೋಗದಿದ್ದರೂ, ದೈವಸಂಕಲ್ಪದಿಂದ ಮುಡಾ ಅಧ್ಯಕ್ಷರಾಗಿ, ವಿಧಾನಪರಿಷತ್ ಸದಸ್ಯರಾಗಿ, ಭಾರತೀಯ ಸೇವಾದಳದ ಅಧ್ಯಕ್ಷರಾಗಿ, ಯಾವುದೇ ಸ್ವಜನ ಪಕ್ಷಪಾತ ಭ್ರಷ್ಟಾಚಾರದ ಸೋಂಕಿಲ್ಲದೆ, ಜನಸೇವೆ ಮಾಡಿದ ಇವರು, ಇಂದಿನ ಎಲ್ಲಾ ಜನಪ್ರತಿನಿಧಿಗಳಿಗೆ ಮಾದರಿ ಎಂದರು.

2012-13 ರಲ್ಲಿ ಅಗಾಧವಾದ ಸಂಘಟನೆ ಹಾಗೂ ಹೋರಾಟದ ಮೂಲಕ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರ ರಚನೆ ಮಾಡಲು ಟೊಂಕ ಕಟ್ಟಿ ಯಶಸ್ವಿಯಾದ ಫಲವಾಗಿ, ಇಂದು ಮಹದೇಶ್ವರ ಬೆಟ್ಟ ಅಭೂತಪೂರ್ವ ಅಭಿವೃದ್ಧಿ ಕಂಡು ಲಕ್ಷಾಂತರ ಭಕ್ತರು ನೆಮ್ಮದಿಯಿಂದ ಮಾದಪ್ಪನ ದರ್ಶನ ಮಾಡುತ್ತಾರೆ, ಇದರ ಜೊತೆಗೆ ಅಲ್ಲಿ ಕೋಟ್ಯಂತರ ರೂಪಾಯಿ ಆದಾಯ ಹರಿದು ಬಂದು ಇನ್ನಷ್ಟು ಮೂಲಸೌಕರ್ಯ ಹಾಗು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದರು.

ಅಂತೆಯೇ ಮಲೆ ಮಹದೇಶ್ವರ ಬೆಟ್ಟದ ಮಾದರಿ ಕುಂಬಾರಕೊಪ್ಪಲಿನ ಮಹದೇಶ್ವರ ದೇವಾಲಯವನ್ನು ಪುಣ್ಯಕ್ಷೇತ್ರವಾಗಿ ಅಭಿವೃದ್ಧಿಪಡಿಸಲು ಅವಿರತ ಶ್ರಮಿಸುತ್ತಿರುವ ಇವರು ಅದರ ಸಂಕಲ್ಪ ಸಿದ್ಧಿಗಾಗಿ ಊರಿನ ಸಮಾನ ಮನಸ್ಕರು ಹಾಗೂ ಮುಖಂಡರಿಗೆ ಪ್ರೇರಣೆ ಕೊಟ್ಟು ಊರಿನ ಸಹಕಾರದಿಂದ ಎರಡು ಪ್ರಮುಖ ಆದಾಯ ಮೂಲಗಳಾದ ಮಹದೇಶ್ವರ ಸಮುದಾಯ ಭವನ ಹಾಗು ಬಸವ ಸಮುದಾಯ ಭವನ ನಿರ್ಮಿಸಿ ಊರಿಗೆ ಹತ್ತಾರು ಲಕ್ಷ ಆದಾಯ ಬರಲು ಕಾರಣಕರ್ತರಾಗಿದ್ದಾರೆ. ಹಾಗಿದ್ದರೂ, ಹುಟ್ಟು ಹೋರಾಟಗಾರರಾದ ಇವರು ನಿರಂತರವಾಗಿ ಸಮಾಜದ ಹಾಗೂ ಊರಿನ ಸೇವಾಕಾರ್ಯಗಳಲ್ಲಿ ಇಂದಿಗೂ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರ ಭಾರತೀಯ ಜನತಾ ಪಕ್ಷ ಉಪಾಧ್ಯಕ್ಷ ಕುಮಾರ್ ಗೌಡ. ಪಟೇಲ್ ನಾಗರಾಜು, ರಾಜು. ನವೀನ್, ಚೆಲುವೇಗೌಡರು, ಮಂಜುಗೌಡ, ಗಾವನಳ್ಳಿ ದಿನೇಶ್, ಆದರ್ಶ್, ಗಣೇಶ್, ಪಟ್ಟಾಭಿ, ಸಿದ್ದೇಗೌಡ, ಭರತ್, ಪ್ರವೀಣ್ ಎಲ್ಲರೂ ಅಭಿನಂದಿಸಿದರು.

Sneha Gowda

Recent Posts

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ದಿನಾಂಕ ಫಿಕ್ಸ್

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಸೆಮಣೆ ಏರಲು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ…

9 mins ago

ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

ಇಲ್ಲಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ರೌಡಿಶೀಟರ್ ಕಾರ್ತಿಕೇಯನ್(40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.

10 mins ago

ಮೆಕ್ಯಾನಿಕ್‌ಗಳ ಬಗ್ಗೆ ಅವಹೇಳ ಹೇಳಿಕೆ : ಝೀ ವಾಹಿನಿ ವಿರುದ್ಧ ಗ್ಯಾರೇಜ್‌ ಮಾಲಿಕರ ಸಂಘ ಆಕ್ರೋಶ

ಇತ್ತೀಚೆಗಷ್ಟೆ ಝೀ ವಾಹಿಯಲ್ಲಿ ಪ್ರಸಾರವಾಗುವ ಮಹಾನಟಿ ಕಾರ್ಯಕ್ರಮದಲ್ಲಿ ಮೆಕ್ಯಾನಿಕ್‌ಗಳ ಬಗ್ಗೆ ಹೇಳಿಕೆ ನೀಡಲಾಗಿತ್ತು ಹಾಗೂ ತೀರ್ಪುಗಾರರ ವಿರುದ್ಧ ಕೇಸ್‌ ಕೂಡ…

21 mins ago

ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ನಿದ್ದೆನೇ ಇಲ್ಲ ಎಂದ ಡಿಕೆ ಶಿವಕುಮಾರ್‌

ನನ್ನ ಹೆಸರು ಹೇಳದಿದ್ದರೆ ಕುಮಾರಸ್ವಾಮಿಗೆ ನಿದ್ದೆಯೇ ಬರುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು ನೀಡಿದ್ದಾರೆ.

26 mins ago

ಕುಟುಂಬಸ್ಥರೊಂದಿಗೆ ಈಜು ಕಲಿಯಲು ಹೋದ ಬಾಲಕ ನೀರುಪಾಲು

ಈಜು ಕಲಿಯಲು ಹೋದ ಬಾಲಕ ನೀರುಪಾಲಾಗಿರುವ ಘಟನೆ ರಾಯಚೂರು ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ನಡೆದಿದೆ.

42 mins ago

ಚಾಲಕನ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಬಟ್ಟೆ ಅಂಗಡಿಗೆ ಕಾರೊಂದು ನುಗ್ಗಿ ಉಲ್ಟಾ ಬಿದ್ದಿರುವ ಘಟನೆ ತೀರ್ಥಹಳ್ಳಿ ಪಟ್ಟಣದ ಗಾಂಧಿ ಚೌಕನಲ್ಲಿ ತಡರಾತ್ರಿ ನಡೆದಿದೆ.

1 hour ago