ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ಸ್ವರ್ಣ ನರಸಿಂಹ ದತ್ತ ಪೀಠಿಕಾ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ನಗರದ ಖಿಲ್ಲೆ ಮೊಹಲ್ಲಾದ ಶಂಕರ ಮಠದಲ್ಲಿ ಅಕ್ಷರ ಲಕ್ಷ ಗಾಯತ್ರಿ ಯಜ್ಞವು ಮೂರು ದಿನಗಳ ಯಶಸ್ವಿಯಾಗಿ ನಡೆದು ಸಂಪನ್ನಗೊಂಡಿತು.
ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿ ಯಾವುದೇ ಅನಾಹುತ ಸಂಭವಿಸಿದಂತೆ ಮತ್ತು ಮುಂಬರುವ ಹೊಸ ವರ್ಷ ಸರ್ವರಿಗೂ ಒಳಿತು ಮಾಡಿ ನಾಡು ಸುಬಿಕ್ಷೆಯಾಗಿರಲಿ ಎಂದು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಯತಿಗಳು ಹೋಮ-ಹವನ ನಡೆಸಿದರು.
ಮೂರು ದಿನಗಳ ಈ ಯಜ್ಞದಲ್ಲಿ ಒಟ್ಟು 24 ಕಳಸಗಳನ್ನು ಸ್ಥಾಪಿಸಿ, ಐದು ಹೋಮ ಕುಂಡಗಳನ್ನು ನಿರ್ಮಿಸಿ ಪ್ರತಿ ಹೋಮ ಕುಂಡದಲ್ಲಿ 11 ಯತಿಗಳು ಪಾಲ್ಗೊಂಡು ಜಪ ಮತ್ತು ಮಂತ್ರಗಳ ಮೂಲಕ ಪ್ರಧಾನ ಆಚಾರ್ಯ ಶ್ರೀ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಿದರು.ನಂತರ ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾರಾಜರು ಪೂರ್ಣಾಹುತಿ ನೆರವೇರಿಸಿದರು.
ಸಾವಿರಾರು ಭಕ್ತರು ಪಾಲ್ಗೊಂಡು ಮಹಾ ಮಂತ್ರ ಗಾಯಿತ್ರಿ ಮಂತ್ರವನ್ನು ಕೇಳಿ ಪುನಿತರಾದರು.ಪ್ರತಿ ದಿನವೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಬಹುದಿನಗಳಿಂದ ಸಂಕಲ್ಪ ಮಾಡಿದ್ದ “ಅಕ್ಷರ ಲಕ್ಷ ಗಾಯತ್ರಿ ಜಪ ಸಾಂಗತಾ ಯಜ್ಞ ಗುರುಗಳ ಆಶೀರ್ವಾದ ಮತ್ತು ಸಂಕಲ್ಪದಿಂದ ಹಾಗೂ ಎಲ್ಲರ ಸಹಕಾರದಿಂದ ನೆರವೇರಿದೆ.
ಕುರ್ಕುರೆ ಪ್ಯಾಕೆಟ್ ತರಲಿಲ್ಲ ಎಂಬ ಕಾರಣಕ್ಕೆ ರೊಚ್ಚಿಗೆದ್ದು ಪತಿಯಿಂದ ವಿಚ್ಛೇದನ ಬಯಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ಮಾಜಿ ಸಚಿವ…
ಸಾಲ ತೀರಿಸಲು ತಂದೆಯೊಬ್ಬ ತನ್ನ ಗಂಡು ಮಗುವನ್ನೇ ಮಾರಿದಘಟನೆಯೊಂದು ಕೋಲಾರದಲ್ಲಿ ನಡೆದಿದೆ.
ಕೆಕೆಆರ್ ಮತ್ತು ಗುಜರಾತ್ ಟೈಟಾನ್ಸ್ ನಡುವಣ ಪಂದ್ಯದ ವೇಳೆ ಚೆಂಡನ್ನು ಕದ್ದು ಸಿಕ್ಕಿಬಿದ್ದು, ಪೊಲೀಸರಿಂದ ಪೆಟ್ಟು ತಿಂದ ಘಟನೆ ನಡೆದಿದ್ದು.…
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಕೊನೆಯ ಹಂತದಲ್ಲಿದೆ. ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು…
ಹುಬ್ಬಳ್ಳಿ ತಾಲ್ಲೂಕಿನ ಹಳ್ಯಾಳ ಗ್ರಾಮದ ಶಾಲೆಯಲ್ಲಿ ರವಿವಾರ ನಡೆದಿದ್ದ ಕೊಲೆಯ ಪ್ರಕರಣವನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇದಿಸುವಲ್ಲಿ ಸಕ್ಸಸ್…