ಹುಣಸೂರು: ಹಿಂದೂ-ಮುಸ್ಲಿಮರ ಭಾವೈಕ್ಯತೆ ಮೆರೆಯುವ ರತ್ನಪುರಿ (ದರ್ಗಾ)ಯ ಶ್ರೀ ಆಂಜನೇಯಸ್ವಾಮಿಯ ಹಾಗೂ ಜಮಾಲ್ ಬೀಬಿಮ್ಮನವರ 59ನೇ ವರ್ಷದ ಜಾತ್ರೆ ಫೆ.24 ರಿಂದ ಫೆ.27ರವರೆಗೆ ಬಹಳ ವಿಜೃಂಭಣೆಯಿಂದ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಆರ್.ಪ್ರಭಾಕರ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಎರಡು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಜಾತ್ರಾ ಸಮಿತಿ ವತಿಯಿಂದ ಅದ್ಧೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಫೆ.24ರ ಶುಕ್ರವಾರ ಜಾತ್ರಾ ಮಹೋತ್ಸವದ ಉದ್ಘಾಟನೆಯನ್ನು ಶಾಸಕ ಹೆಚ್.ಪಿ.ಮಂಜುನಾಥ್, ಅಧ್ಯಕ್ಷತೆ ಜಿ.ಟಿ.ದೇವೇಗೌಡ, ವಿಶೇಷ ಆಹ್ವಾನಿತರಾಗಿ ಸಂಸದ ಪ್ರತಾಪ್ಸಿಂಹ, ಜಿ.ಡಿ.ಹರೀಶ್ಗೌಡ, ಸೇರಿದಂತೆ ಆನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಫೆ.24ರ ಶುಕ್ರವಾರ ಮುಂಜಾನೆ 6ರಿಂದ ಆಂಜನೇಯಸ್ವಾಮಿಗೆ ಹೋಮ, ಹವನ, ಮಹಾಭಿಷೇಕ ಹಾಗೂ ಬೆಳಿಗ್ಗೆ 10ಕ್ಕೆ ಹೊನಲು ಬೆಳಕಿನ ಪುರುಷರ ಜಿಲ್ಲಾ ಮಟ್ಟದ ವಾಲಿ ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದರು.
ಫೆ.25ರ ಶನಿವಾರ, ಬೆಳಿಗ್ಗೆ 6. ಗಂಟೆಗೆ ಅಂಜನೇಯಸ್ವಾಮಿಗೆ ಮಹಾಮಂಗಳಾರತಿ, ಮಧ್ಯಾಹ್ನ 12ಕ್ಕೆ ಅನ್ನ ಸಂತರ್ಪಣೆ, ಮಧ್ಯಾಹ್ನ 3 ಕ್ಕೆ ರಾಜ್ಯ ಮಟ್ಟದ ಪುರುಷರ ಬಫನ್ ಕಬ್ಬಡಿ ಪಂದ್ಯಾವಳಿ. (ಮ್ಯಾಟ್ ಕಬ್ಬಡಿ) ಸಮವಸ್ತ್ರ ಕಡ್ಡಾಯ. ಭಾಗವಹಿಸುವವರು ಫೆ.24ರ ಸಂಜೆ 7 ರೊಳಗೆ ನೊಂದಾಯಿಸಿಕೊಳ್ಳಬೇಕು, ಕಬ್ಬಡಿ ಆಟಗಾರರಿಗೆ ಊಟ ವಸತಿ ಇರುತ್ತದೆ. ನಂತರ ಸಂಜೆ 6 ಗಂಟೆಗೆ ಅಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ, ಹಾಗೂ ವಿವಿಧ ಕಲಾ ತಂಡದೊAದಿಗೆ ಜಾತ್ರಾ ಮೆರವಣಿಗೆ, ನಡೆಯಲಿದೆ ಎಂದರು.
ಫೆ.26ರ ಭಾನುವಾರ ರಾತ್ರಿ 7ಕ್ಕೆ ಜಮಾಲ್ ಬೀಬಿಮ್ಮನವರ ಉರೂಸ್, ಗಂಧೋತ್ಸವ ಹಾಗೂ ರಾತ್ರಿ 8ಕ್ಕೆ ಗಂಟೆಗೆ ಕಬ್ಬಡಿ ಸಮಿಫೈನಲ್ ಹಾಗೂ ಫೈನಲ್ ಪಂದ್ಯಾವಳಿ ನಡೆಯಲಿದೆ.
ಫೆ.27ರಂದು ಸೋಮವಾರ ಉತ್ತಮ ರಾಸುಗಳಿಗೆ ಜಾತ್ರಾ ಸಮಿತಿ ವತಿಯಿಂದ ನಗದು ಬಹುಮಾನ ವಿತರಣೆ ನಡೆಯಲಿದೆ. ಕ್ರೀಡಾಕೂಟಗಳ ಹೆಚ್ಚಿನ ಮಾಹಿತಿಗಾಗಿ 9008022679, 9900564659 ದೂರವಾಣಿಯನ್ನು ಸಂಪರ್ಕಿಸುವAತೆ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಬಿ ಸುರೇಂದ್ರ, ಸಹ ಕಾರ್ಯದರ್ಶಿಗಳಾದ ಸುದರ್ಶನ್ ಸಿಂಗ್, ರಾಜು, ಜಮಾಲ್ ಬೀಬಿಮ್ಮನವರ ಸದಸ್ಯ ಆಜ್ಗರ್ಪಾಷ ಇದ್ದರು.