ಹಿರೀಕ್ಯಾತನಹಳ್ಳಿ: ಸಾಕ್ಷಾತ್ ದ್ವಾದಶ ಜ್ಯೋತಿ ಲಿಂಗಗಳ ಪುಣ್ಯ ದರ್ಶನ ಶಿವನ ಸ್ವರೂಪದ ದರ್ಶನದ ರಥಕ್ಕೆ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು.
ಹುಣಸೂರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಓಂ ಶಾಂತಿ ಭವನದಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶಿವನ ಶೋಭ ಯಾತ್ರೆಯ ರಥವು ಜ.21ರಿಂದ ಫೆಬ್ರವರಿ 17ರ ತನಕ ತಾಲೂಕಿನ ಪ್ರತಿ ಹಳ್ಳಿಗಳಲ್ಲೂ ಸಂಚರಿಸಲಿದೆ.
ಈ ಬಗ್ಗೆ ಮಾತನಾಡಿದ ಸೇವಾ ಕೇಂದ್ರದ ಮುಖ್ಯಸ್ಥರು ನಾಗು ಅಕ್ಕ ಅವರು ಹಳ್ಳಿಗಳ ಜನರಿಗೆ ಸಂದೇಶ ಸಾರಿ ರೈತರಿಗೆ ಬೆಳೆ ಮಳೆ ಚೆನ್ನಾಗಿ ಆಗಲಿ ಹಳ್ಳಿ ಹಳ್ಳಿಗೂ ಶಿವನ ಸಂದೇಶ ಕೊಟ್ಟು ಎಲ್ಲರು ಮಾನಸಿಕ ಒತ್ತಡದಿಂದ ದೂರ ಬರಲು ಈ ಸೇವೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇದಕ್ಕೂ ಮೊದಲು ಗ್ರಾಮಸ್ಥರು ಗ್ರಾಮದ ಪ್ರಮುಖ ಬೀದಿಯಲ್ಲಿ ರಂಗೋಲಿ ಬಿಡಿಸಿ ರಥವನ್ನು ವಾದ್ಯಗೋಷ್ಠಿಯೊಂದಿಗೆ ಗ್ರಾಮದ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಜನರಿಗೆ ರಥದ ಬಗ್ಗೆ ಪ್ರವಚನವನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಓಂ ಶಾಂತಿ ಕೇಂದ್ರದ ಮೂರ್ತಿ, ರಾಜು, ಸಂದೇಶ, ಸತೀಶ್, ಶಿವಣ್ಣ, ಗ್ರಾಮದ ಮುಖಂಡರಾದ ಕೃ?ಗೌಡ ನಂಜೇಗೌಡ ಬ್ರಹ್ಮಾನಂದ ತಿಮ್ಮನಾಯಕ ಜವರೇಗೌಡ, ಕುಮಾರ, ಶಿವಲಿಂಗೇಗೌಡ, ಶಿವನಾಯಕ, ಕುಮಾರ, ದೇವೇಗೌಡ, ಮಂಜು ಹಾಗೂ ವೇಣುಗೋಪಾಲ್ ವಿದ್ಯಾ ಸಂಸ್ಥೆಯ ಶಿಕ್ಷಕರು ಮಕ್ಕಳು ಹಾಜರಿದ್ದರು.
ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಪೊಲೀಸರು ಬಂಧಿಸಿದ್ದಾರೆ.…
ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್ಎಸ್ಎಲ್ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…
ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…
ಜಾಗತಿಕವಾಗಿ ಚಿನ್ನಕ್ಕೆ ಈಗ ಸಖತ್ ಬೇಡಿಕೆ ಸೃಷ್ಟಿಯಾಗಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ…
ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್ನಲ್ಲಿ ಸನ್ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್ಗೂ ಮುನ್ನವೇ…
ಕೇಂದ್ರ ಸರ್ಕಾರವು 41 ಅಗತ್ಯ ಔಷಧಗಳು ಹಾಗೂ ಹೃದಯ ರಕ್ತನಾಳದ ಕಾಯಿಲೆ, ಸಕ್ಕರೆ ಕಾಯಿಲೆ ಇರುವವರು ಬಳಸುವ 6 ಫಾರ್ಮುಲೇಷನ್ಗಳ…