ಮೈಸೂರು ; ನಗರದ ನಜರ್ ಬಾದ್ ನಲ್ಲಿರುವ ತಾಲೂಕು ಕಛೇರಿ’ ಮಿನಿವಿಧಾನಸೌಧ’ ಇಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಪ್ಯೂಸ್ ಕಿತ್ತುಕೊಂಡು ಹೋದ ಘಟನೆ ನಡೆದಿದೆ.
ಮಿನಿ ವಿಧಾನ ಸೌಧ ಅಂದರೆ ತಾಲೂಕು ಕಛೇರಿಯಲ್ಲಿ ಪಹಣಿ ಪತ್ರ ಸೇರಿದಂತೆ ರೈತರ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳಿಗೆ ಸಂಬಂಧಿಸಿದ ಕೆಲಸ ಕಾರ್ಯಗಳು ನಡೆಯುತ್ತವೆ. ಆದರೆ ಇಲ್ಲಿ ಈಗ ವಿದ್ಯುತ್ ಲಭ್ಯವಿಲ್ಲ, ವಿದ್ಯುತ್ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡ ಕಾರಣ ವಿದ್ಯುತ್ ಪ್ಯೂಸ್ ಕಿತ್ತುಕೊಂಡು ಹೋಗಲಾಗಿದೆ. ಕಛೆರಿ ಸಿಬ್ಬಂದಿಗಳು ಕತ್ತಲೆಯಲ್ಲಿಯೇ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ದಿನಾಲೂ ನೂರಾರು ಮಂದಿ ಬರುವ ಕಛೇರಿಯಲ್ಲಿ ವಿದ್ಯುತ್ ಇಲ್ಲದಿದ್ದರೆ ಕೆಲಸ ಕಾರ್ಯಗಳು ಹೇಗೆ ನಡೆಯಬೇಕು. ಸರ್ಕಾರಿ ಕಛೇರಿಯಲ್ಲಿಯೇ ಈ ರೀತಿ ಆದರೆ ಜನರು ತಮ್ಮ ಕೆಲಸ ಹೇಗೆ ಮಾಡಿಸಿಕೊಳ್ಳಬೇಕು. ತೆರಿಗೆ ಹಣ ತೆಗೆದುಕೊಳ್ಳುತ್ತಾರೆ. ವಿದ್ಯುತ್ ಬಿಲ್ ಪಾವತಿಸಲಿಕ್ಕೇನು ಇವರಿಗೆ ಎಂದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಕೆಲವು ಕಡತಗಳು ಎಷ್ಟು ಹೇಳಿದರೂ ಮುಂದಕ್ಕೆ ಹೋಗೋದೆ ಇಲ್ಲ ಎಂದು ಜನತೆ ಬೇಸರ ವ್ಯಕ್ತಪಡಿಸಿದ್ದಾರೆ. ಶುಕ್ರವಾರದಿಂದಲೇ ಇಷ್ಟೇ ಅಲ್ಲದೆ ಈ ಕೊರೋನಾ ವೇಳೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಛೇರಿಗೆ ಆಗಮಿಸಿ ಕೊರೋನಾ ಹರಡಿದರೆ ಇದಕ್ಕೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ತಾಲೂಕು ಕಛೇರಿ ‘ಮಿನಿವಿಧಾನಸೌಧ’ : ಪವರ್ ಕಟ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.