ಮೈಸೂರು, ; ಮಕ್ಕಳ ಸಮಗ್ರ ವ್ಯಕ್ತಿತ್ವ ಬದಲಾವಣೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ
ಪೂರಕವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್
ಅಭಿಪ್ರಾಯಪಟ್ಟರು.
ಅವರು ಇಂದು ಮಾನಸ ಗಂಗೋತ್ರಿಯ ಸಮಾಜ ಕಾರ್ಯ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾದ
ರಾಷ್ಟ್ರೀಯ ಶಿಕ್ಷಣ 2020 ಎರಡು ದಿನಗಳ ಸಮಾಜ ಕಾರ್ಯ ಪಠ್ಯಕ್ರಮ ರಚನಾ
ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಕ್ಯಾಬಿನೆಟ್
ನಲ್ಲಿ ಅನುಮತಿ ಪಡೆದಿದೆ. 35 ವರ್ಷಗಳ ನಂತರ ಹೊಸ ಪಾಲಿಸಿ ದೇಶದಲ್ಲಿ ಜಾರಿಗೆ
ಬರುತ್ತಿದೆ. ಒಂದು ವರ್ಷದಿಂದ ಪಾಲಿಸಿ ಬಗ್ಗೆ ಚರ್ಚೆ ಆಗುತ್ತಿದೆ. ಬರಿ ಪಠ್ಯ
ಬದಲಾವಣೆಯ ಅಲ್ಲ. ಇಡೀ ಮಕ್ಕಳ ಸಮಗ್ರ ವ್ಯಕ್ತಿ ತ್ವ ಬದಲಾವಣೆಗೆ ಇದು ಪೂರಕವಾಗಿದೆ
ಎಂದರು.
ಸಮಾಜದಲ್ಲಿ ಕಂಡು ಬರುವ ಸಮಸ್ಯೆಗಳನ್ನು ಗುರುತಿಸಿ ಪರಿಹರಿಸಲು ಬೇಕಾದ ಜ್ಞಾನ ಹಾಗೂ
ಕೌಶಲವನ್ನು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ನೀಡುತ್ತದೆ. ಸದ್ಯ ಮೊದಲ ಹಂತದ
ಪಠ್ಯಕ್ರಮಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಹೇಳಿದರು.ನೂತನ ಶಿಕ್ಷಣ ನೀತಿ
ವಿದ್ಯಾರ್ಥಿಗಳಲ್ಲಿ ಕ್ರಿಯಾತ್ಮಕ ಹಾಗೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಕೌಶಲ್ಯ
ಹಾಗೂ ಬಹು ಶಿಸ್ತೀಯ ವಿಷಯ ಪರಿಣಿತಿಗೂ ಅವಕಾಶ ಕಲ್ಪಿಸುತ್ತದೆ. ನೂತನ ಶಿಕ್ಷಣ
ನೀತಿಯಲ್ಲಿ ಮಾತೃ ಭಾಷೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಕಡ್ಡಾಯವಾಗಿ ಕನ್ನಡ
ಭಾಷೆಯನ್ನು ಮಕ್ಕಳ ಕಲಿಯಬೇಕಿದೆ ಎಂದರು.
ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ,
ನಾಯಕತ್ವ ಗುಣವನ್ನು ಹೊಸ ಪಾಲಿಸಿ ಮಕ್ಕಳಲ್ಲಿ ಬೆಳೆಸಲಿದ್ದು, ರಾಷ್ಟ್ರೀಯ
ಶಿಕ್ಷಣನೀತಿ ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದು
ನಿಜಕ್ಕೂ ಹೆಗ್ಗಳಿಕೆ ವಿಚಾರ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಾಲಿಸಿ
ಸಹಕಾರಿಯಾಗಿದೆ. ಶೈಕ್ಷಣಿಕ ವಲಯದಲ್ಲಿ ಅಷ್ಟೇ ಅಲ್ಲದೆ ಇಡೀ ಶಿಕ್ಷಣ ವ್ಯವಸ್ಥೆ ಯಲ್ಲಿ
ಅಮೂಲಾಗ್ರ ಬದಲಾವಣೆಯನ್ನು ಇದು ಉಂಟು ಮಾಡಲಿದೆ. ಈ ನಿಟ್ಟಿನಲ್ಲಿ ಸಮಾಜ ಕಾರ್ಯ ವಿಭಾಗ
ಒಂದೊಳ್ಳೆ ಕಾರ್ಯಾಗಾರವನ್ನು ಆಯೋಜಿಸಿದೆ ಎಂದರು.
ಮಕ್ಕಳ ಸಮಗ್ರ ವ್ಯಕ್ತಿತ್ವ ಬದಲಾವಣೆಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ : ಪ್ರೊ. ಜಿ.ಹೇಮಂತ್ ಕುಮಾರ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.