ಮೈಸೂರು : ಪುನೀತ್ ರಾಜ್ ಕುಮಾರ್ ಅಗಲಿಕೆಯಿಂದ ನಮಗೆ ಮಾನಸಿಕವಾಗಿ ನೋವು ಕಡಮೆ ಆಗಲ್ಲ. ನೋವಿನ ಜೊತೆ ಬದುಕುಬೇಕು. ಹಾಗಾಗಿ ನೋವಿನ ಜೊತೆ ನನ್ನ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಚಿತ್ರ ನಟ ಶಿವರಾಜ್ ಕುಮಾರ್ ಹೇಳಿದರು.
ಶುಕ್ರವಾರ ಮೈಸೂರಿನ ಉಡ್ಲ್ಯಾಂಡ್ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿ,
ಅಳುವುದರಿಂದ ಅಪುö್ಪವನ್ನು ಕಳೆದು ಕೊಂಡು ಬಿಡುತ್ತೇವೆ. ಅವನನ್ನು ಜೊತೆಯಲ್ಲಿಟ್ಟು ಕೊಂಡು ಬದುಕಬೇಕು. ಅಪ್ಪು ಕಣ್ಣುಗಳು ಇವತ್ತು ಸಮಾಜ ನೋಡುತ್ತಿವೆ. ಇಡೀ ಕರುನಾಡಿನ ನೈತಿಕ ಬೆಂಬಲ ನಮ್ಮ ಕುಟುಂಬಕ್ಕೆ ಸಿಕ್ಕಿದೆ. ನೋವಿನ ಜೊತೆ ಬದುಕುವುದು ಅನಿವಾರ್ಯವಾಗಿದೆ ಎಂದು ನೋವಿನಿಂದ ನುಡಿದರು.
ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆ ಚಿತ್ರ ಜೆಮ್ಸ್ಗೆ ಒಳ್ಳೆ ಯ ವಾಯ್ಸ್ ನೋಡಿ ಅಂತಾ ಆ ಚಿತ್ರದ ನಿರ್ದೇಶಕರು ಹೇಳಿದ್ದಾರೆ. ನನ್ನ ವಾಯ್ಸ್ ಅಪ್ಪುಗೆ ಶೂಟ್ ಆಗಲ್ಲ, ಆದರೆ ಅನಿವಾರ್ಯ ಅನ್ನುವುದಾದರೆ ವಾಯ್ಸ್ ಕೊಡುತ್ತೇನೆ. ಮನುಷ್ಯ ಮುಖ್ಯವಲ್ಲ ಮನುಷ್ಯತ್ವ ಮುಖ್ಯ ಅನ್ನೋದು ಭಜರಂಗಿ 2 ಸಿನಿಮಾದ ಸಂದೇಶವಾಗಿದೆ. ಈ ಸಂದೇಶಕ್ಕೆ ಅಪುö್ಪ ಬದುಕು ಬಹಳ ಹತ್ತಿರವಾಗಿದೆ ಎಂದು ತಿಳಿಸಿದರು.
ನನ್ನ ತಾಯಿ ಮೇಲೆ ಅಣೆ ನಾನು ಅಪ್ಪು ಯಾವತ್ತೂ ಜಗಳವಾಡಿಲ್ಲ. ಅವನ ಪ್ರತಿಭೆ ನೋಡಿ ಬಹಳ ಸಂತೋಷಪಟ್ಟಿದ್ದೇವೆ. ಅಪ್ಪುದು ನಿಷ್ಕಳಂಶ ಆತ್ಮ ಎಂದರು.