ನಂಜನಗೂಡು: ವೀರಾಂಜನೇಯ ಧರ್ಮಜಾಗೃತಿ ವತಿಯಿಂದ ಹನುಮಜಯಂತಿ ಪ್ರಯುಕ್ತ ನಗರದಲ್ಲಿ ಅದ್ಧೂರಿಯಾಗಿ ನಡೆದ ಶೋಭಾಯಾತ್ರೆ ಜನಮನ ಸೆಳೆಯಿತು.
ಸಂಜೆ ನಗರದಲ್ಲಿ ನಡೆದ ಶೋಭಾಯಾತ್ರೆಗೆ ಚನ್ನಬಸವ ಸ್ವಾಮಿಗಳು ಹನುಮಂತನಿಗೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಚಾಲನೆ ನೀಡಿದರು. ಸಾವಿರಾರು ಯುವ ಭಕ್ತರು ಆರಾಧ್ಯದೈವ ವೀರ ಹನುಮನ ಟೀ ಶರ್ಟ್ ಧರಿಸಿ ಕುಣಿದು ಕುಪ್ಪಳಿಸುವುದರೊಂದಿಗೆ ಮೆರಗು ನೀಡಿದರು.
ಕೇಸರಿ ಬಣ್ಣದ ಶಾಲುಗಳು ಮೆರವಣಿಗೆಯಲ್ಲಿ ರಾರಾಜಿಸುವುದರೊಂದಿಗೆ ಹನುಮನ ಜೈಕಾರ ಮೊಳಗಿತ್ತು. ಆರ್.ಪಿ. ರಸ್ತೆ ಮುಖಾಂತರ ಚಿಂತಾಮಣಿ ಗಣಪತಿ, ಹುಲ್ಲಳ್ಳಿ ರಸ್ತೆ ಹಾಗೂ ಎಂ.ಜಿ. ರಸ್ತೆ, ಬಜಾರ್ ರಸ್ತೆ ಮೂಲಕ ದೇವಸ್ಥಾನ ತಲುಪಿತು.
ಶೋಭಾಯಾತ್ರೆಯಲ್ಲಿ ಕೇರಳದ ಚೆಂಡೆವಾದ್ಯ ಗೊಂಬೆ ಕುಣಿತ. ಸ್ಥಳೀಯ ವೀರಗಾಸೆ ಕುಣಿತ ಮತ್ತು ಯುವಕರಿಗೆ ಡಿ.ಜೆ ಕುಣಿತ ಹನುಮಂತನ ವೇಷಧಾರಿ. ಹನುಮಂತನ ಟ್ಯಾಬು ಗಳು ಕಂಡುಬಂದವು. ನಗರದಾದ್ಯಂತ ಪೊಲೀಸ್ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರಲ್ಲದೆ, ಎಸ್ಪಿ ಚೇತನ್ ಅಡಿಷನಲ್ಲಎಸ್ಪಿ ಶಿವಕುಮಾರ್. ಡಿವೈಎಸ್ಪಿ ಗೋವಿಂದರಾಜ್. ವೃತ್ತ ನಿರೀಕ್ಷಕ ಲಕ್ಷ್ಮೀಕಾಂತರವರ. ಸಬ್ ಇನ್ಸ್ಪೆಕ್ಟರ್ ವಿಜಯ್. ಜಿಲ್ಲಾ ಸಶಸ್ತ್ರ ಮೀಸಲು ಪಡೆ. ಕೆಎಸ್ ಆರ್ ಪಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಭದ್ರತೆಯಲ್ಲಿ ತೊಡಗಿಸಿಕೊಂಡಿದ್ದರು.
ಬೆಳಿಗ್ಗೆ ಮಾರುತಿ ಗುಡ್ಡದಲ್ಲಿ (ಮುಳ್ಳೇ ಗುಡ್ಡ ) ಹನುಮಂತನಿಗೆ ಅಭಿಷೇಕ. ಹೂವಿನ ಅಲಂಕಾರ. ವಿಶೇಷ ಪೂಜೆ ಹೋಮ-ಹವನಗಳನ್ನು ಕೃಷ್ಣ ಜೋಯಿಸ್ ತಂಡವು ನೆರವೇರಿಸಿತ್ತು.