ಮೈಸೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಟೆಲಿ ಲಾ ಸೇವೆಯಿಂದ ಗ್ರಾಮೀಣ ಪ್ರದೇಶದ ಜನರು, ನಿರ್ಗತಿಕರು ಅತ್ಯಂತ ಅಗ್ಗದಲ್ಲಿ ಕಾನೂನು ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಲಾಗಿದೆ.
ಭಾರತ ಸರ್ಕಾರದ ಕಾನೂನು ಸಚಿವಾಲಯ ವತಿಯಿಂದ ಟೆಲಿ – ಲಾ ಮುಖಾಂತರ ಗ್ರಾಮೀಣ ಪ್ರದೇಶದ ಜನರು, ನಿರ್ಗತಿಕರು. ಮಹಿಳೆಯರು. ವಿಕಲಾಂಗರು ಕಾರಾಗೃಹ ವಾಸಿಗಳು ಸೇರಿದಂತೆ ವಿವಿಧ ವರ್ಗದ ಜನರಿಗೆ ಕಾನೂನು ಸಲಹೆ ಕಲ್ಪಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ದೇಶದಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳ ಮುಖಾಂತರ ದೂರದ ಪ್ರದೇಶಗಳಲ್ಲಿರುವ ಗ್ರಾಮೀಣ ಪ್ರದೇಶದ ಜನರು ತಮ್ಮ ಮೊಬೈಲ್ ನ ಕಾನೂನು ಸಲಹೆ ಆಪ್ ಮೂಲಕ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವರು ಸಾಮಾನ್ಯ ಸೇವಾ ಕೇಂದ್ರಗಳ ಮುಖ್ಯಸ್ಥರು ಕಾನೂನು ಸಲಹೆಗಳನ್ನು ಪಡೆಯಲು ಸಹಕಾರಿಯಾಗಲಿದೆ ಗುರುವಾರ ಸಂಜೆ ಮೈಸೂರಿನಲ್ಲಿ ಭಾರತ ಸರ್ಕಾರದ ಕಾನೂನು ಸಚಿವಾಲಯದ ವತಿಯಿಂದ ಟೆಲಿ ಲಾ ಹಾಗೂ ಲಾ ಅಪ್ ಗೆ ಚಾಲನೆ ನೀಡಲಾಗಿದೆ.
ಕೇಂದ್ರ ನ್ಯಾಯಾಂಗ ಇಲಾಖೆಯ ನಿರ್ದೇಶಕ ರವೀಂದ್ರ ಪಾರೆ ಚಾಲನೆ ನೀಡಿ ಮಾತನಾಡಿದರು. ‘ಕೇಂದ್ರ ಕಾನೂನು ಸಚಿವಾಲಯ ದೀನ ದಲಿತರು ಹಾಗೂ ಬಡವರಿಗಾಗಿ ತಂದಿರುವ ಟೆಲಿ ಲಾ ಯೋಜನೆಯು ತಾವಿರುವ ಜಾಗದಲ್ಲೇ ವಕೀಲರನ್ನು ಸಂಪರ್ಕಿಸಿ ಉಚಿತವಾಗಿ ಕಾನೂನು ಸಲಹೆಗಳನ್ನು ಪಡೆಯಬಹುದು ಇದರಿಂದ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಅವಶ್ಯಕತೆಯಿಲ್ಲ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ತಮಗೆ ಅವಶ್ಯವಿರುವ ವಕೀಲರ ಮೂಲಕ ಕಾನೂನುಗಳನ್ನು ತಿಳಿದುಕೊಳ್ಳಬಹುದು ಹಾಗೂ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು’ ಎಂದು ವಿವರಿಸಿದರು.
ಟೆಲಿ ಲಾ ಸೇವೆಯು ಎಲ್ಲರೂ ಪಡೆದುಕೊಳ್ಳಬಹುದು ಹದಿನೆಂಟು ವರ್ಷ ಮೇಲ್ಪಟ್ಟ ಯುವತಿಯರು, ಮಹಿಳೆಯರು ಹಾಗೂ ದೌರ್ಜನ್ಯಕ್ಕೊಳಗಾದವರು ವಿಪತ್ತುಗಳಲ್ಲಿ ನೋವಿಗೊಳಗಾದವರಿಗೆ ಉಚಿತವಾಗಿ ಸೇವೆ ಪಡೆಯಬಹುದು ಇತರರಿಗೆ ಮೂವತ್ತು ರೂ ಗಳಲ್ಲಿ ಕಾನೂನು ಸೇವೆಗಳನ್ನು ಪಡೆಯಬಹುದು ದೇಶದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬ ದೃಷ್ಟಿಯಿಂದ ಕಾನೂನು ಸಚಿವಾಲಯ ಟೆಲಿ ಲಾ ಅನುಷ್ಠಾನಗೊಳ್ಳುತ್ತಿದೆ ಎಂದು ಕೇಂದ್ರ ಟೆಲಿ ಲಾ ಯೋಜನೆಯ ವ್ಯವಸ್ಥಾಪಕ ನೀಲ್ ಡಿಸೋಜ ತಿಳಿಸಿದ್ದಾರೆ
ಈ ಯೋಜನೆಯು ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ಅನುಕೂಲಕರವಾಗಿದೆ ಪ್ರತಿ ಗ್ರಾಮೀಣ ಪ್ರದೇಶದಲ್ಲಿರುವ ಮಾನ್ಯ ಸೇವಾ ಕೇಂದ್ರಕ್ಕೆ ತೆರಳಿ ತಮಗೆ ಅವಶ್ಯವಿರುವ ವಕೀಲರ ಮುಖಾಂತರ ತಮ್ಮ ಸೇವೆಗಳನ್ನು ಪಡೆದುಕೊಳ್ಳಬಹುದು ಅಥವಾ ಬೈಲ್, ಕಾನೂನು ಆಪ್ ಮುಖಾಂತರ ತಮ್ಮ ಕಾನೂನಿನ ಸಲಹೆ ಪಡೆದುಕೊಳ್ಳಬಹುದು ಈ ಎಲ್ಲ ಮಹಿಳೆಯರಿಗೆ ಉಚಿತವಾಗಿ ಲಭ್ಯವಿದೆ ಎಂದು ಸಾಮಾನ್ಯ ಸೇವಾ ಕೇಂದ್ರದ ಮುಖ್ಯಸ್ಥೆ ಯಶೋದಾ ತಿಳಿಸಿದ್ದಾರೆ.