News Karnataka Kannada
Tuesday, April 30 2024
ಮಂಡ್ಯ

ನರೇಗಾ ಕಾಮಗಾರಿ ವೀಕ್ಷಿಸಿದ ಜಿಪಂ ಸಿಇಒ 

Untitled 161
Photo Credit : News Kannada

ಮಂಡ್ಯ: ಮಂಡ್ಯ ತಾಲ್ಲೂಕಿನ ಬೇವಿನಹಳ್ಳಿ ಹಾಗೂ ಇಂಡುವಾಳು ಗ್ರಾಮ ಪಂಚಾಯಿತಿಗಳಿಗೆ   ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ದಿವ್ಯಪ್ರಭು   ಭೇಟಿ ನೀಡಿ,  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ವೀಕ್ಷಿಸಿ, ಸ್ಥಳ ಪರಿಶೀಲನೆ ನಡೆಸಿದರು.

ನಂತರ ಮಾತನಾಡಿದ ಅವರು ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಯೋಜನೆಯಡಿ ಪ್ರತಿಯೊಬ್ಬರು 100 ದಿನಗಳ ಕಾಲ ಕೆಲಸವನ್ನು ಪಡೆದುಕೊಳ್ಳಬೇಕು. ಯೋಜನೆಯಡಿ ಕಾಯಕ ಸಂಘದ ಮೂಲಕ ಕೂಲಿಕಾರರು, ಸಮಗ್ರ ಕೆರೆ, ಕಟ್ಟೆ ಅಭಿವೃದ್ಧಿ, ಬದು, ಕಾಲುವೆ ಸುಧಾರಣೆಯಂತಹ ಕಾಮಗಾರಿಗಳಲ್ಲಿ ಕೆಲಸವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕೂಲಿಕಾರರೊಂದಿಗೆ ಮಾತನಾಡಿ, ಕೂಲಿಕಾರರು ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಪ್ರತಿಯೊಬ್ಬರು ಆಯು?ನ್ ಆರೋಗ್ಯ ಕಾರ್ಡ್ ಹಾಗೂ ಲೆಬರ್ ಕಾರ್ಡನ್ನು ಪಡೆದುಕೊಂಡು ಸದುಪಯೋಗವನ್ನು ಪಡೆದುಕೊಳ್ಳಬೇಕು. ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನದಡಿ,  ಬೇಸಿಗೆ ಅವಧಿಯಲ್ಲಿ ನಿರಂತರವಾಗಿ ದುಡಿಯುವ ಕೈಗಳಿಗೆ ಕೆಲಸ  ನೀಡಿ, 319 ರೂಗಳು ಕೂಲಿ ಹಣವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯನಿರ್ವಾಹಕಾಧಿಕಾರಿಗಳು ಬೇವಿನಹಳ್ಳಿ ಗ್ರಾಮದ ಕಾಲುವೆ ಅಭಿವೃದ್ಧಿ ಕಾಮಗಾರಿ, ಇಂಡುವಾಳು ಗ್ರಾಮದ ಕೆರೆ ಅಭಿವೃದ್ಧಿ ಕಾಮಗಾರಿ, ಸೋಕ್ ಪಿಟ್ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, 1-7 ರಿಜಿಸ್ಟರ್‌ಗಳು ಹಾಗೂ ಕಾಮಗಾರಿ ಕಡತಗಳನ್ನು ಪರಿಶೀಲನೆ ನಡೆಸಿದರು.

ಇದೇ ವೇಳೆ ಕಾರ್ಯನಿರ್ವಾಹಕಾಧಿಕಾರಿಗಳಾದ ಎ.ಬಿ.ವೇಣುರವರು, ಪಿಡಿಓಗಳಾದ ವಿಶಾಲ್ ಮೂರ್ತಿ, ಸಿದ್ದರಾಜು, ಕಾರ್ಯದರ್ಶಿಗಳಾದ ಆನಂದ್,  ದಯಾನಂದ್, ಜಿಲ್ಲಾ ಪಂಚಾಯತ್ ಎಡಿಪಿಸಿ ಮುನಿರಾಜು, ಡಿಎಂಐಎಸ್ ರಶ್ಮಿ, ಟಿಸಿ ರವಿಕುಮಾರ್, ಐಇಸಿ ಸಂಯೋಜಕಿ ಆಶಾ.ಡಿ, ಟಿಎಂಐಎಸ್ ಚೇತನ್, ಟಿಎಇಗಳಾದ ಮನು, ಗಿರೀಶ್, ಎಲ್ಲಾ ಬಿಎಪ್ಟಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ  ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು