News Karnataka Kannada
Monday, April 29 2024
ಮಡಿಕೇರಿ

ಗಂಡನ ಶ್ವಾನಪ್ರೇಮ ಸಹಿಸದೆ ಬಿಟ್ಟು ಹೋದ ಪತ್ನಿ

New Project 2024 01 15t150326.839
Photo Credit : News Kannada

ಕೊಡಗು: ನಾಯಿಗಳದ್ದು ಅದ್ಯಾವ ಜನುಮದ ಅದೃಷ್ಟವೋ ಏನೋ.. ಈ ಜನ್ಮದಲ್ಲಿ ಇವುಗಳ ಅಸಾಹಾಯಕ ಸ್ಥಿತಿಯಲ್ಲೂ ದೇವರಂತೆ ವ್ಯಕ್ತಿಯೊಬ್ಬ ಸಿಕ್ಕಿದ್ದಾನೆ. ಅವನೇ ಕಾಲ್​ಸಂಗ್ ಡೋರ್ಜಿ… ಈತನಿಗೆ ಮಾತ್ರ ನಾಯಿ ಆತನ ಮಗುವಿನಂತೆ ಮೈಸೂರು ಕೊಡಗು ಗಡಿಯಲ್ಲಿರೋ ಬೈಲುಕೊಪ್ಪ ಟಿಬೆಟಿಯನ್​ ನಿರಾಶ್ರಿತರ ಶಿಬಿರದಲ್ಲಿ ಕಾಲ್​ಸಂಗ್ ಡೋರ್ಜಿ ಅನಾಥ ಬೀದಿ ನಾಯಿಮರಿಗಳ ಆಶ್ರಯ ಕೇಂದ್ರ ಸ್ಥಾಪಿಸಿದ್ದಾರೆ.

ಇಲ್ಲಿ 40ಕ್ಕೂ ಅಧಿಕ ನಾಯಿಗಳಿವೆ. ಎಲ್ಲವೂ ಬೀದಿನಾಯಿಗಳೆ. ಬಹಳಷ್ಟು ನಾಯಿಗಳು ಅನಾಥವಾಗಿ ವಿವಿಧ ತೊಂದರೆಗೆ ಸಿಲುಕಿಕೊಂಡವುಗಳು. ಕೊಪ್ಪ, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ ಹೀಗೆ ವಿವಿಧ ಸ್ಥಳಗಳಿಂದ ಈ ನಾಯಿಗಳನ್ನು ರಕ್ಷಿಸಿ ತಂದು ತಮ್ಮ ಆಶ್ರಯತಾಣದಲ್ಲಿ ಸಾಕುತ್ತಿದ್ದಾರೆ. ಬರೇ ಆಹಾರ ಆಶ್ರಯ ಮಾತ್ರವಲ್ಲ ಅನಾರೋಗ್ಯಪೀಡಿತ ನಾಯಿಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನ ಕೂಡ ಇವರೇ ನೀಡ್ತಾರೆ.

ಆದರೆ ಇವರ ನಾಯಿ ಪ್ರೀತಿ ನೋಡಲಾಗದೆ ಇವರ ಪತ್ನಿ ಇವರನ್ನು ಬಿಟ್ಟು ಹೋಗಿದ್ದಾರೆ. ಇವರ ನಾಯಿ ಪ್ರೀತಿ ನೋಡಿದ ಸ್ಥಳೀಯರು ತಾವೂ ಕೈಲಾದ ಸಹಾಯ ಮಾಡುತ್ತಾರೆ. ತಿಂಗಳಿಗೆ ಇವರಿಗೆ ಈ ನಾಯಿಗಳ ಪಾಲನೆ ಪೋಷಣೆ, ಕಟ್ಟಡ ಬಾಡಿಗೆ ಸೇರಿ 70 ಸಾವಿರ ರೂ ಖರ್ಚಾಗುತ್ತದೆ. ಇವರ ಅಕ್ಕ ಡೋಲ್ಮಾ ಈ ನಾಯಿಗಳು ಆರೈಕೆಗೆ ಪ್ರತಿ ತಿಂಗಳು ಸಾಕಷ್ಟು ಹಣ ಕಳುಹಿಸುತ್ತಾರೆ. ಹಾಗಾಗಿ ನಾಯಿ ಆರೈಕೆ ಕೇಂದ್ರಕ್ಕೆ ಡೋಲ್ಮಾ ಅಂತಾನೇ ಹೆಸರಿಟ್ಟಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು