ಕೊಡಗು: ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದ ಮಾರಿಗುಡಿ ಬಳಿ ಅನಾಹುತ ಸಂಭವಿಸಿದೆ. ಟ್ರ್ಯಾಕ್ಟರ್ನಲ್ಲಿ ಹುಲ್ಲು ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದಿದೆ.
ಟ್ರ್ಯಾಕ್ಟರ್ನಲ್ಲಿ ಸಾಮರ್ಥ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು ಏರಿಕೊಂಡು ಹೋಗುತ್ತಿದ್ದರು. ಈ ವೇಳೆ ಗ್ರಾಮದ ಮಾರಿಗುಡಿ ಬಳಿ ಬರುವಾಗ ಮೇಲಿನಿಂದ ಹಾದು ಹೋಗಿದ್ದ ಕರೆಂಟ್ ವೈರ್ ತಗುಲಿದೆ. ತಕ್ಷಣ ಟ್ರ್ಯಾಕ್ಟರ್ ಚಾಲಕ ಟ್ರಾಲಿಯಲ್ಲಿದ್ದ ಹುಲ್ಲನ್ನು ಲಿಫ್ಟ್ ಮಾಡುವ ಮೂಲಕ ಕೆಳಗೆ ಸುರಿದಿದ್ದಾನೆ. ಹೀಗಾಗಿ ಚಾಲಕ ಪಾರಾಗಿದ್ದಲ್ಲದೇ ಟ್ರ್ಯಾಕ್ಟರ್ ಅನ್ನು ಕೂಡ ಸೇಫ್ ಮಾಡಿ ಆಗುವ ಅನಾಹುತ ತಪ್ಪಿಸಿದ್ದಾನೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.