ಚೆಟ್ಟಳ್ಳಿ : ಕೊಡಗಿನ ಹಲವು ಭಾಗಗಳಲ್ಲಿ ಇತೀಚೆಗೆ ಸುರಿದ ಈ ವರ್ಷದ ಮೊದಲ ಮಳೆಯಿಂದ ಹಲವಾರು ಸಣ್ಣ ಹಾಗು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಒಂದೆಡೆ ಸಣ್ಣ ಹಾಗು ಮಧ್ಯಮ ವರ್ಗದ ಬೆಳೆಗಾರರು ಕಾಫಿ ಹಣ್ಣು ಕೊಯ್ಲು ಮಾಡುವುದಕ್ಕೆ ಕಾರ್ಮಿಕರ ಕೊರತೆಯಿಂದ ಹೈರಾಣಾದರೆ, ಇನ್ನೊಂದೆಡೆ ಹೊರಗಿನ ದಿನಗೂಲಿ ಕಾರ್ಮಿಕರನ್ನು ಕರೆತಂದು ಕಾಪಿಹಣ್ಣುಗಳನ್ನು ಗಿಡದಿಂದ ಬಿಡಿಸಿ ತಂದು ಒಣಗಿಸುವುದೇ ಒಂದು ಹರಸಾಹಸವಾಗಿದೆ.
ಕಾಫಿ ಕೊಯ್ಲಿಗೆ ಕೆ. ಜಿ. ಒಂದಕ್ಕೆ ಐದರಿಂದ ಆರು ರೂಪಾಯಿ ಕೊಟ್ಟು ಗಿಡದಿಂದ ಬಿಡಿಸಿ ತಂದು, ಏಳೆಂಟು ದಿನಗಳ ಕಾಲ ಬಿಸಿಲಿನಲ್ಲಿ ಒಣಗಬೇಕಾದ ಕಾಫಿಬೀಜಕ್ಕೆ ಮೋಡ ಕವಿದ ವಾತಾವರಣ ಮತ್ತು ಮಳೆ ತಡೆಯೊಡ್ಡುತ್ತಿದೆ. ಇನ್ನೊಂದೆಡೆ ಅಕಾಲಿಕ ಮಳೆಯಿಂದಾಗಿ ಕಾಫಿ ಹೂವು ಅರಳುತಿದ್ದು ಇನ್ನು ಮೂರುನಾಲಕ್ಕೂ ದಿವಸ ಕಾಫಿ ತೋಟದ ಒಳೆಗೆ ಕಾಲಿಡುವಂತಿಲ್ಲ.
ಇನ್ನು ಹಲವಾರು ಬೆಳೆಗಾರರ ಕಾಫಿ ಇನ್ನು ಗಿಡಗಳಲ್ಲಿ ಬಾಕಿ ಇದ್ದು ಅದನ್ನು ಹೂವು ಅರಳಿದ ಮೇಲೆ ಕೊಯ್ಲು ಮಾಡಿದರೆ ಅದು ಬರುವ ವರ್ಷದ ಫಸಲಿಗೆ ಧಕ್ಕೆಯಾಗುತ್ತದೆ ಅನ್ನುತ್ತಿದ್ದಾರೆ ಬೆಳೆಗಾರರು. ಒಟ್ಟಿನಲ್ಲಿ ಕೊಡಗಿನ ಬೆಳೆಗಾರರ ಪರಿಸ್ಥಿತಿ ಇತ್ತ ವರ್ಷದ ಕಾಫಿ ಪಸಲು ಕಡಿಮೆ.. ಮತ್ತೆ ಬರುವ ವರ್ಷದ ಪಸಲಿಗೂ ವರ್ಷದ ಮೊದಲ ಮಳೆ ಸ್ವಲ್ಪ ಮಟ್ಟಿಗೆ ಹಾನಿಯಾಗುವುದು ಖಂಡಿತಾ ಎನ್ನುತ್ತಿದ್ದಾರೆ ಕೊಡಗಿನ ಕಾಫಿ ಬೆಳೆಗಾರರು.
ರಾಜ್ಯ ವಿಧಾನ ಪರಿಷತ್ಗೆ ನೈಋತ್ಯ, ಈಶಾನ್ಯ, ಬೆಂಗಳೂರು ಪದವೀಧರ ಕ್ಷೇತ್ರಗಳು ಹಾಗೂ ಆಗ್ನೇಯ, ನೈಋತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ…
ಪ್ಲೇ ಆಫ್ ಪ್ರವೇಶಕ್ಕೆ ಮಹತ್ವವಾದ ಶನಿವಾರದ ಐಪಿಎಲ್(IPL 2024) ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್…
ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಮಾದರಿಯಂ ತೆ, ವಿಧಾನ ಪರಿಷತ್ ಚುನಾವಣೆಯಲ್ಲೂ ಕಾರ್ಯಕರ್ತರುಗಳು ಅಭ್ಯರ್ಥಿಗಳ ಪರವಾಗಿ ಬೂತ್ಮಟ್ಟ ದಿಂದ…
ಆಸ್ಪತ್ರೆಯಲ್ಲಿ ಶುಶ್ರೂ?ಕಿಯರ ಪಾತ್ರ ಮಹತ್ವದ್ದು, ದಾದಿಯರು ಯಾ ವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಲ್ಲೇಗೌಡ ಜಿಲ್ಲಾ ಸ್ಪತ್ರೆ…
ವಾಸವಿ ಜಯಂತಿ ಪ್ರಯುಕ್ತ ನಗರದ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಜ್ಜಿಗೆ, ಕೋಸಂಬರಿ ವಿತರಣೆ ಮಾಡಲಾಯಿತೆಂದು ವಾಸವಿ…
ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಮ್ಮದೇ ಅದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿವಿಧ ಭಾಷೆಗಳಲ್ಲಿ ನಟಿಸಿ ಸೈ…