Categories: ಮಡಿಕೇರಿ

ಮಡಿಕೇರಿ: ನೂತನ ತಾಲ್ಲೂಕು ಕುಶಾಲನಗರದಲ್ಲಿ ವಿಜೃಂಭಿಸಿದ ಸಾಹಿತ್ಯ ಸಮ್ಮೇಳನ

ಮಡಿಕೇರಿ: ಕೊಡಗಿನ ಗಡಿ ಕುಶಾಲನಗರದಲ್ಲಿ ನಿನ್ನೆ ದಿನ ಅದ್ಭುತವಾಗಿ ನಡೆದ ಕನ್ನಡದ ಜಾತ್ರೆಯನ್ನು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಮುಖಾಂತರ ಕಾರ್ಯಕ್ರಮ ಶುರು ಮಾಡಲಾಯಿತು. ನಂತರ ದಿವಂಗತರ ಹೆಸರಿನಲ್ಲಿ ಐದು ದ್ವಾರಗಳ ಉದ್ಘಾಟನೆ, ಗುಂಡುರಾವ್ ಸಭಾಂಗಣ ಉದ್ಘಾಟನೆ ಮತ್ತು ಕೊಡಗಿನ ಗೌರಮ್ಮ ವೇದಿಕೆ ಉದ್ಘಾಟನೆಯನ್ನು ಹಲವಾರು ಗಣ್ಯರು ನೆರವೇರಿಸಿದರು.

ನಂತರ ಕುಶಾಲನಗರದ ಗಡಿ ಕಾವೇರಿ ಪ್ರತಿಮೆ ಬಳಿ ಮೆರವಣಿಗೆಯನ್ನು ಬಾಚರಣಿಯಂಡ ಪಿ. ಅಪ್ಪಣ್ಣನವರು ಉದ್ಘಾಟಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಕೊಪ್ಪ ಗಡಿಯಿಂದ ವಿವಿಧ ಕಲಾತಂಡಗಳು, ಭಜನಾ ಮಂಡಳಿ ಹಾಗೂ ಮಂಗಳವಾದ್ಯದೊಂದಿಗೆ ಮುಖ್ಯ ರಸ್ತೆಯಲ್ಲಿ ಸಮ್ಮೇಳನ ಅಧ್ಯಕ್ಷರಾದ ಶ್ರೀ ಬಿ.ಆರ್. ನಾರಾಯಣ ಸಾಹಿತಿಗಳು, ಶಾಸಕರಾದ ಅಪ್ಪಚ್ಚು ರಂಜನ್, ಕಸಾಪ ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್, ಕುಶಾಲನಗರ ತಾಲೂಕು ಅಧ್ಯಕ್ಷರಾದ ಮೂರ್ತಿ ಮತ್ತು ಪುರಸಭೆ ಅಧ್ಯಕ್ಷರಾದ ಜಯವರ್ಧನ್ ರವರನ್ನು ಅಲಂಕರಿಸಿದ ವಾಹನದ ಮುಖಾಂತರ ಸಾಗಿದ ಮೆರವಣಿಗೆ ನೋಡುಗರ ಕಣ್ ಮನ ಸೆಳೆದಿತ್ತು ಕೊನೆಗೆ ಕಾರ್ಯಕ್ರಮ ನಡೆಯುವ ರೈತ ಸಹಕಾರ ಭವನದವರೆಗೆ ಬಂದ ನಂತರ ವಿವಿಧ ಮಳಿಗೆಗಳು, ಚಿತ್ರಕಲಾ ಮಳಿಗೆಗಳು ಗಣ್ಯರಿಂದ ಉದ್ಘಾಟಿಸಲಾಯಿತು.

ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮವು ನಾಡಗೀತೆ, ರೈತ ಗೀತೆ, ಮತ್ತು ಉದ್ಘಾಟನಾ ಗೀತೆಯ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ವಿಧಾನ ಪರಿಷತ್ತಿನ ಸಭಾಪತಿಗಳಾದ ಶ್ರೀ ಬಸವರಾಜ್ ಹೊರಟ್ಟಿಯವರು ಉದ್ಘಾಟಿಸಿ ನಂತರ ಅವರ ಭಾಷಣದಲ್ಲಿ ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಕಲಿಯಿರಿ, ಕನ್ನಡವನ್ನು ಉಳಿಸಿ ಬೆಳೆಸಿ, ನಮ್ಮ ರಾಜ್ಯವನ್ನು ಬಲಿಷ್ಠ ರಾಜ್ಯವಾಗಿಸಿ ಎಂದು ನಡೆದ ಕಾರ್ಯಕ್ರಮದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿದ್ದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ರವರು ಮಾತನಾಡಿ ಕುಶಾಲನಗರ ತಾಲ್ಲೂಕು ಆದ ಬಗ್ಗೆ ಮತ್ತು ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮೇಲ್ ದರ್ಜೆಗೇರಿಸಿದ ಬಗ್ಗೆ ಕುಶಾಲನಗರದ ಜನರಿಗೆ ಡಬಲ್ ಧಮಾಕ ಎಂದು ಹೇಳಿದರು, ತದನಂತರ ವೇದಿಕೆಯಲ್ಲಿದ್ದ ಹಲವಾರು ಗಣ್ಯರು ಮಾತನಾಡಿದರು.

ಉದ್ಘಾಟನಾ ಸಮಾರಂಭ ನಡೆದ ನಂತರ ವೇದಿಕೆಯಲ್ಲಿ ಗೀತ ಗಾಯನ, ವಿಚಾರಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ, ಸನ್ಮಾನ ಕಾರ್ಯಕ್ರಮ, ಸಮರೋಪ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ದೊಂದಿಗೆ ಕಾರ್ಯಕ್ರಮಗಳನ್ನು ಮುಗಿಸಲಾಯಿತು. ನೆರೆದಿದ್ದ ಸರ್ವರಿಗೂ ಬೆಳಿಗ್ಗೆ ತಿಂಡಿಯ ವ್ಯವಸ್ಥೆ, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಲಘು ಉಪಹಾರ ಮತ್ತು ರಾತ್ರಿ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಸದಸ್ಯರಾದ ಸುಜಾ ಕುಶಾಲಪ್ಪ, ಕಸಾಪ ಕೊಡಗು ಜಿಲ್ಲಾಧ್ಯಕ್ಷರಾದ ಕೇಶವ ಕಾಮತ್, ಪುರಸಭೆ ಅಧ್ಯಕ್ಷರಾದ ಜಯವರ್ಧನ್, ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷರಾದ ಮೂರ್ತಿ, ಹೈಕೋರ್ಟ್ ವಕೀಲರಾದ ಚಂದ್ರಮೌಳಿ, ಟಿ ಪಿ ರಮೇಶ್, ಭಾರದ್ವಾಜ್ ಕೆ ಆನಂದ ತೀರ್ಥ, ನಾಗೇಂದ್ರ ಪ್ರಸಾದ್, ಜಿ.ಎಲ್. ನಾಗರಾಜ್, ಚಂದ್ರಕಲಾ, ವಿ. ಪಿ. ಶಶಿಧರ್, ಮಂತರ್ ಗೌಡ, ಆರ್. ಕೆ. ನಾಗೇಂದ್ರ ಬಾಬು, ವೆಂಕಟೇಶ್ ಪೂಜಾರಿ, ಲೋಕೇಶ್ ಸಾಗರ್, ಎಂ.ಡಿ. ರಂಗಸ್ವಾಮಿ, ಎಂ.ಕೆ ದಿನೇಶ್, ಸುರೇಶ್, ಸಬಲಂ ಭೋಜಣ್ಣ ರೆಡ್ಡಿ, ಮೊಹಿದ್ದಿನ್, ಪ್ರೇಮ್ ಕುಮಾರ್, ಉ.ರಾ. ನಾಗೇಶ್, ಶಾಂತಿ, ಉತ್ತಪ್ಪ, ನಾಗೇಗೌಡ, ದೀಪಕ್, ರವಿ ರೈ, ಪ್ರಮೋದ್, ಮಂಜು, ಎಸ್.ಕೆ. ಸತೀಶ್, ನಾಗೇಂದ್ರ ಪ್ರಸಾದ್, ಆನಂದ್, ಕೆ.ಜಿ.ಮನು, ಹೆಚ್.ಎಂ.ರಘು, ಪ್ರಸನ್ನ, ವರದ, ಖಲಿಮುಲ್ಲಾ, ದೇವರಾಜ್, ಚಂದ್ರು, ಸರವಣ, ಫ್ಯಾನ್ಸಿ ಮುತ್ತಣ್ಣ, ಗೀತಾ ಲಿಂಗಪ್ಪ, ಎಂ.ಡಿ.ಕೃಷ್ಣಪ್ಪ, ಭಾರತಿ, ಪುಷ್ಪ, ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಬಹಳ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮದ ಬಗ್ಗೆ ನೆರೆದಿದ್ದ ಸಾರ್ವಜನಿಕರಿಂದ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿತ್ತು.

Sneha Gowda

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

3 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

4 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

4 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

4 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

6 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

6 hours ago