ಕೊಡಗು: ಕೊಡಗು ಪ್ರೆಸ್ ಕ್ಲಬ್ ೨೪ನೇ ವಾರ್ಷಿಕೋತ್ಸವ ಪ್ರಯುಕ್ತ ಡಿ.೧೮ ರಂದು ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಡೇ ಆಯೋಜಿಸಲಾಗಿದೆ ಎಂದು ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್ಕುಮಾರ್ ಗುಹ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೧೦.೩೦ ಗಂಟೆಯಿಂದ ಕ್ಲಬ್ ಸದಸ್ಯರು, ಸದಸ್ಯರ ಕುಟುಂಬಸ್ಥರಿಗೆ ಮನರಂಜನಾ ಸ್ಪರ್ಧೆ ಆಯೋಜಿಸಲಾಗಿದೆ. ೧೧.೩೦ ರಿಂದ ಸದಸ್ಯರಿಗೆ ಗಾಯನ, ಛದ್ಮವೇಷ, ಸದಸ್ಯರ ಮಕ್ಕಳ ಛದ್ಮವೇಷ, ಗಾಯನ, ಆಶುಭಾಷಣ ಹಾಗೂ ನೃತ್ಯ ಸ್ಪರ್ಧೆ ನಡೆಯಲಿದೆ.
ಸಭಾ ಕಾರ್ಯಕ್ರಮ: ಮಧ್ಯಾಹ್ನ ೨.೩೦ ಗಂಟೆಗೆ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರೆಸ್ ಕ್ಲಬ್ ಡೇ ಪ್ರಯುಕ್ತ ಆಯೋಜಿಸಲಾಗಿದ್ದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮುಖ್ಯ ವಿದ್ಯುತ್ ಪರಿವೀಕ್ಷಣಾಧಿಕಾರಿಯೂ ಆಗಿರುವ ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತೀತೀರ ರೋಷನ್ ಅಪ್ಪಚ್ಚು ಬಹುಮಾನ ವಿತರಿಸಲಿದ್ದಾರೆ.
ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಕ್ಲಬ್ ಸದಸ್ಯರನ್ನು ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಡಾ.ಉಳ್ಳಿಯಡ ಎಂ. ಪೂವಯ್ಯ ಸನ್ಮಾನಿಸಲಿದ್ದಾರೆ. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವಾರ್ತಾಧಿಕಾರಿ ಚಿನ್ನಸ್ವಾಮಿ ಬಹುಮಾನ ವಿತರಲಿಸದ್ದಾರೆ. ಸದಸ್ಯರ ಮಕ್ಕಳಿಗೆ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಸನ್ಮಾನಿತರು: ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಎ.ಆರ್. ಕುಟ್ಟಪ್ಪ, ನವೀನ್ ಸುವರ್ಣ, ಹಿರಿಕರ ರವಿ, ಚಂದನ್ ನಂದರಬೆಟ್ಟು, ಪಾರ್ಥ ಚಿಣ್ಣಪ್ಪ, ಎಚ್.ಕೆ. ಜಗದೀಶ್, ಕೆ.ಎ. ಇಸ್ಮಾಯಿಲ್, ಅಕ್ಷಯ್, ಕಿಶೋರ್ ನಾಚಪ್ಪ, ಸಂತೋಷ್ ರೈ, ಅನು ಕಾರ್ಯಪ್ಪ, ಜಗದೀಶ್ ಜೋಡುಬಿಟ್ಟಿ, ಕೆ.ಕೆ. ರೆಜಿತ್ಕುಮಾರ್ ಗುಹ್ಯ, ಬಿ.ಆರ್. ಸವಿತಾ ರೈ ಅವರನ್ನು ಸನ್ಮಾನಿಸಲಾಗುತ್ತದೆ.
ಪ್ರತಿಭಾ ಪುರಸ್ಕಾರ: ಶೇ.೮೫೦ ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಾದ ಆರ್. ಸಮರ್ಥ್, ಎಂ.ಕೆ. ಜೀಶ್ಮಾ, ಎಂ.ಕೆ. ಜಸ್ಮಿತ, ಎ.ವಿ. ಸಮೃದ್ಧಿ, ಎಂ.ಎಂ. ಧರುಣ್ ಪ್ರಶೋಬ್, ಬಾಚರಣಿಯಂಡ ಪರಧಿ ಪೊನ್ನಮ್ಮ, ಪೊನ್ನೇಟಿ ತಿಷ್ಯಾ ಸುನಿಲ್, ಕೆ.ಎಸ್. ದೀಕ್ಷಾ, ವಿ.ಎ. ಚಿಂತನ್, ಬಿ.ಎಸ್. ಚೇತನಾ ರೈ, ವಿ.ಜಿ. ಅಗಿಲ್, ಕೆ.ಜಿ. ಶಿವಾನಿ, ಪಿ.ಸಿ. ಕಾಜಲ್, ಅಲ್ಲಾರಂಡ ರಸಜನ ಮಾದಪ್ಪ, ಪಿ.ಪಿ. ಪ್ರೀಶ್ಮಾ, ಇ.ವಿ. ನಿಶಾನ್, ಎನ್. ಸಾಗರಿಕ, ಎಸ್.ಪಿ. ಚಿತ್ತಾರ, ಎಸ್.ಪಿ. ಇಂಚರ ಅವರಿಗೆ ಪ್ರತಿಭಾ ಪುರಸ್ಕಾರ.
ನೀರಿನಲ್ಲಿ ಮುಳುಗಿ ಯುವತಿಯೊಬ್ಬಳು ಮೃತಪಟ್ಟ ಘಟನೆ ಮೈಸೂರಿನ ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಕಾವೇರಿ ನದಿಯಲ್ಲಿ ನಡೆದಿದೆ.
ಆಧ್ಯಾತ್ಮಿಕ ವಿಚಾರದಿಂದ ದೂರ ಹೋಗುತ್ತಿರುವ ಯುವಜನರನ್ನು ಧಾರ್ಮಿಕ ವಿಚಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯಕ್ಕೆ ತೊಟ್ಟಂ ಸಂತ…
ಜಾಗದ ತಕರಾರಿಗೆ ಸಂಬಂಧಿಸಿ ದಂಪತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ…
ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ ಎರುಂಬು - ಅಳಿಕೆ ಬಂಟ್ವಾಳ…
ಸಂಜೆ ಸುರಿದ ಜೋರಾದ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಎಂಬಲ್ಲಿ ಪಲ್ಟಿಯಾದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಸಾರ್ವಜನಿಕರಿಗರ ಕುಡಿಯುವ ನೀರನ್ನು ಪೂರೈಸಲು ಜಿಲ್ಲಾಡಳಿತದಿಂದ ಈಗಾಗಲೇ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ.…