News Karnataka Kannada
Monday, April 29 2024
ಹಾಸನ

ಸಿಕ್ಕ ೨೧ ಸಾವಿರ ನಗದು ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ವಳಲಹಳ್ಳಿ ಪ್ರಸಾದ್

Valalahalli Prasad returns Rs 21,000 in cash
Photo Credit : News Kannada

ಸಕಲೇಶಪುರ: ಪಟ್ಟಣದ ನಗರ ರೈಲ್ವೆ ಹಳಿ ಬಳಿಯ ರಸ್ತೆಯಲ್ಲಿ ವಳಲ ಹಳ್ಳಿ ಪ್ರಸಾದ್ ಹಾಗೂ ಸ್ನೇಹಿತರಾದ ಸಲಾಂ ಬೇಕಲ, ಪ್ರದೀಪ್ ಸಕಲೇಶ ಪುರ ಹೋಗುತ್ತಿದ್ದಾಗ ಹಣ ಹಾಗೂ ದಾಖಲೆಗಳಿರುವ ಪರ್ಸು ಬಿದ್ದಿತ್ತು.

ಆ ದಾಖಲೆಗಳನ್ನು ಪರಿಶೀಲನೆ ಮಾಡಿದಗ ಅದರಲ್ಲಿ ಇನ್ಸೂರೆನ್ಸ್ ಕಾಫಿ, ಡ್ರೈವಿಂಗ್ ಲೈಸೆನ್ಸ್ , ಸೇರಿ ದಂತೆ ೨೧,೦೦೦ ನಗದು ಹಣ ಕೂಡ ಇತ್ತು ಇದನ್ನು ಗಮನಿಸಿದ ವಳಲಹಳ್ಳಿ ಪ್ರಸಾದ್ ಹಾಗೂ ಸ್ನೇಹಿತರು ಆ ಹಣ ಪ್ರವೀಣ್ ಬೆಳ್ಳೂರು ಎಂಬವರಿಗೆ ಸೇರಿದ್ದು ಎಂದು ಗೊತ್ತಾಗಿ, ಅವರಿಗೆ ಮೊಬೈಲ್ ಮೂಲಕ ಸಂಪರ್ಕ ಮಾಡಿ ಆ ಹಣ ಹಾಗೂ ದಾಖಲೆಗಳನ್ನು ಅವರಿಗೆ ಒಪ್ಪಿಸಿ ಮಾನವೀಯತೆ ಮೆರೆದರು.

ದಾರಿಯಲ್ಲಿ ಸಿಕ್ಕ ಒಂದು ರೂಪಾಯಿದರೂ ಯಾರಿಗೂ ತಿಳಿಯದಂತೆ ನೇರವಾಗಿ ಜೋಬಿಗೆ ಇಳಿಸುವ ಜನರ ಮಧ್ಯೆ ೨೧೦೦೦ ನಗದು ಹಣವನ್ನು ಕಳೆದುಕೊಂಡವರನ್ನೂ ಮತ್ತೆ ಸಂಪರ್ಕಿಸಿ ಅವರಿಗೆ ನೀಡಿರುವುದು ಜನ ಮೆಚ್ಚುವ ವಿಷಯವಾಗಿದೆ.ಈ ಮೂರು ಮಂದಿಯ ಪ್ರಾಮಾಣಿಕ ಕಾರ್ಯ ಜನರ ಮೆಚ್ಚುಗೆ ಗಳಿಸಿ ಜನರ ಪ್ರಸಂಶೆಗೆ ಕಾರಣವಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು