ಹಾಸನ: ಸಕಲೇಶಪುರ ಪುರಸಭಾ ವ್ಯಾಪ್ತಿಯಲ್ಲಿ ಮನೆಗಳಿಂದ ಹಾಗೂ ವಾಣಿಜ್ಯೋದ್ಯಮಗಳಿಂದ ಉತ್ಪತಿಯಾಗುವ ಘನತ್ಯಾಜ್ಯ ವಸ್ತುಗಳನ್ನು ಘನತ್ಯಾಜ್ಯ ವಸ್ತುಗಳ ನಿರ್ವಹಣೆ ನಿಯಮ ೨೦೧೬ರಂತೆ ವಿಂಗಡಣೆ ಮಾಡಿ, ಸಂಗ್ರಹಿಸಿ, ಪುರಸಭೆಯಿಂದ ನಿಗದಿಪಡಿಸಿರುವ ಸ್ಥಳಕ್ಕೆ ಸಾಗಿಸುವ ಕೆಲಸವನ್ನು ನಿರ್ವಹಿಸಲು ಷರತ್ತುಗಳಿಗೊಳಪಟ್ಟು ಆಸಕ್ತಿವುಳ್ಳ ಸ್ವಸಹಾಯ ಅಥವಾ ಸ್ತ್ರೀಶಕ್ತಿ ಸಂಘಗಳಿಂದ ಅರ್ಜಿ ಆಹ್ವಾನಿಸಿದೆ ಎಂದು ಸಕಲೇಶಪುರ ಪುರಸಭೆ ಮುಖ್ಯಧಿಕಾರಿ ತಿಳಿಸಿದ್ದಾರೆ.
ಆಸಕ್ತಿವುಳ್ಳ ಸ್ವಸಹಾಯ/ಸ್ತ್ರೀಶಕ್ತಿ ಗುಂಪುಗಳು ನೋಂದಣಿ ಪ್ರಮಾಣ ಪತ್ರ, ಕಳೆದ ವರ್ಷದ ಆಡಿಟ್ ರಿಪೊರ್ಟ್, ಕಾರ್ಯಕ್ಷೇತ್ರದ ಯಾವುದೇ ಬ್ಯಾಂಕಿನಿಂದ ಅಥವಾ ಹಣಕಾಸು ಸಂಸ್ಥೆಯ ಬಾಕಿದಾರರಲ್ಲದೇ ಇರುವ ಬಗ್ಗೆ ದೃಢೀಕರಣ ಪತ್ರ, ಕಳೆದ ಆರ್ಥಿಕ ವರ್ಷದಲ್ಲಿ ಆರ್ಥಿಕ ಅಥವಾ ವಹಿವಾಟು ಬಗ್ಗೆ ಅಧಿಕೃತ ದಾಖಲೆಗಳು ಹಾಗೂ ಮನೆ ಮನೆ ಕಸ ಸಂಗ್ರಹಣೆ ಕೆಲಸವನ್ನು ಕನಿಷ್ಠ ಐದು ವರ್ಷಗಳ ಅವಧಿಗೆ ಯಾವುದಾದರು ನಗರಸಭೆ/ಪುರಸಭೆಯಲ್ಲಿ ನಿರ್ವಹಿಸಿದ ಅನುಭವವಿರುವ ಕುರಿತು ದಾಖಲೆಗಳ ಪ್ರತಿಗಳನ್ನು ಗೆಜೆಟೆಡ್ ವರ್ಗದ ಅಧಿಕಾರಿಯಿಂದ ಧೃಢೀಕರಿಸಿ ಸೀಲ್ ಮಾಡಿದ ಲಕೋಟೆಯಲ್ಲಿ ನ.೮ ರಂದು ಸಂಜೆ ೪ ಗಂಟೆಯೊಳಗೆ ಸಲ್ಲಿಸುವುದು.
ಲಕೋಟೆಗಳನ್ನು ನ.೯ರಂದು ಬೆಳಗ್ಗೆ ೧೧.೦೦ ಗಂಟೆಗೆ ತೆರೆಯಲಾಗುವುದು. ಕಾಲ ಕಾಲಕ್ಕೆ ಸರ್ಕಾರದ ಆದೇಶಗಳನ್ನು ಅನುಷ್ಠಾನಗೊಳಿಸುವಂತೆ ಎಲ್ಲ ನಿಯಮ ಹಾಗೂ ಷರತ್ತುಗಳಿಗೆ ಬದ್ದರಾಗಿರತಕ್ಕದ್ದು.
ಹೆಚ್ಚಿನ ಮಾಹಿತಗಾಗಿ ಪರಿಸರ ಅಭಿಯಂತರರು, ಪುರಸಭೆ, ಸಕಲೇಶಪುರ ಇವರಿಂದ ಕಚರಿ ವೇಳೆಯಲ್ಲಿ ಪಡೆಯಬಹುದಾಗಿದೆ.
ಚಿಟಗುಪ್ಪ'ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಗೌರವ…
17ನೇ ಆವೃತ್ತಿಯ ಐಪಿಎಲ್ನ ಕೊನೆಯ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ತಂಡಗಳು ಈ…
ಬೇಸಿಗೆಯಲ್ಲಿ ಬಿಸಿಲಿನ ತಾಪ, ಕಲುಷಿತ ನೀರು, ಮಾಲಿನಗೊಂಡ ವಾತಾವರಣದಿಂದಾಗಿ ಸಾಕಷ್ಟು ಜನರು ಚರ್ಮದ ಸಮಸ್ಯೆಯನ್ನು ಅನುಭವಿಸುತ್ತಾರೆ. ಅದರಲ್ಲೂ ಡಲ್ಸ್ಕಿನ್ ಇರುವವರೂ…
ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ…
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ…
ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…