News Karnataka Kannada
Monday, April 29 2024
ಹಾಸನ

ಹಾಸನ: ಪ್ರತಿನಿತ್ಯ ಬೆಳಿಗ್ಗೆ ಯೋಗ ಅಭ್ಯಾಸ ಮಾಡಿ ಉಲ್ಲಾಸದಿಂದಿರಿ

Practice yoga every morning and be refreshed.
Photo Credit : News Kannada

ಹಾಸನ: ಪ್ರತಿನಿತ್ಯ ಬೆಳಿಗ್ಗೆ ಯೋಗದೊಂದಿಗೆ ದಿನದ ಚಟು ವಟಿಕೆಯನ್ನು ಆರಂಭಿಸಿದರೇ ದಿನಪೂರ್ತಿ ಉಲ್ಲಾಸದಿಂದ ಇರಲು ಸಾಧ್ಯವಾಗುತ್ತದೆ ಎಂದು ಶಾಸಕ ಪ್ರೀತಂ ಜೆ ಗೌಡ ಕಿವಿಮಾತು ಹೇಳಿದರು.

ನಗರದ ಶ್ರೀ ಸೀತಾ ರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ರಥಸಪ್ತಮಿ ವಿಶೇಷ ದಿನದ ಅಂಗವಾಗಿ ನಡೆದ ಸಮಾರಂಬದಲ್ಲಿ ಮಾತ ನಾಡಿದ ಅವರು, ಸನಾತನ ಹಿಂದು ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಒಪು ವಂತೆ ಮಾಡಿ ನಮ್ಮ ಆಚರಣೆ ಗಳು ವೈಜ್ಞಾನಿಕವಾಗಿದೆ ಎಂದು ಇಡೀ ಪ್ರಪಂಚಕ್ಕೆ ಸಾರುವ ಕೆಲಸ ವನ್ನು ಯೋಗಾ ನಡೆಸಿಕೊಂಡು ಬರುತ್ತಿದೆ ಎಂದರು.

ಪತಂಜಲಿ ಪರಿವಾರವು ಭಾರತ ಒಂದೆ ಅಲ್ಲ ಪ್ರಪಂಚದ ವಿವಿಧ ದೇಶಗಳಲ್ಲೂ ಕೂಡ ಯೋಗಾರ್ಥಿಗಳಿಗೆ ಸೂಕ್ತವಾದಂ ತಹ ತರಬೇತಿ ಕೊಡುವುದರ ಮೂಲಕ ಒತ್ತಡದ ಜೀವನದಲ್ಲೂ ಕೂಡ ಯಥಸ್ಥಿತಿಯತ್ತ ಜೀವನ ನಡೆಸುವುದಕ್ಕೆ ಸಹಕಾರಿ ಆಗುವ ರೀತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ದೇಹಕ್ಕೆ ಅಲ್ಲ ಮನಸ್ಸಿಗೂ ಕೂಡ ಆರೋಗ್ಯ ತರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಹೇಳಿದರು.

ಇದೆ ವೇಳೆ ಪತಂಜಲಿ ಯೋಗ ಸಮಿತಿಯ ಗಿರೀಶ್, ಶೇಷಪ್ಪ ಮಾತನಾಡಿ, ಏಳು ಲೋಕದ ಸಂಚಾರಕ್ಕಾಗಿ ಸೂರ್ಯ ಹೊರಿಟಿದ್ದ ದಿನದ ಅಂಗವಾಗಿ ರಥಸಪ್ತಮಿಯನ್ನು ಆಚರಿಸಲಾಗುತ್ತಿದೆ. ಸೂರ್ಯ ನಮುಸ್ಕಾರ ಮತ್ತು ಸೂರ್ಯನ ಆರಾಧನೆ ನಮ್ಮ ಪ್ರಕೃತಿಯ ಮೂಲವಾಗಿದ್ದು, ಎಲ್ಲರಿಗೂ ಸೂರ್ಯ ಆದಿ ದೇವ. ಜಗತ್ತಿನ ಚೈತನ್ಯಕ್ಕೆ ಸೂರ್ಯನೆ ಕಾರಣ ನಾಗಿರುತ್ತಾನೆ ಎಂದರು.
ಸುರೇಶ್ ಪ್ರಜಾಪತಿ, ಹೇಮಲತ, ಲೀಲಾ, ರಾಜೇಶ್, ರಂಗನಾಥ್, ನಂದಕುಮಾರ್ ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು