ಹಾಸನ: ಕೈಗಾರಿಕಾ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಸೇಲ್ ಟೀಡ್ ಎಕ್ಸಿಕ್ಯೂಶನ್ ಅನ್ನು ಹಲವಾರು ಸುಧಾರಣೆಗಳ ಅಡಿಯಲ್ಲಿ ತರಲಾಗಿದೆ ಎಂದು ಕೈಗಾರಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ್ ಆರ್ ನಿರಾಣಿ ತಿಳಿಸಿದರು.
ರಾಜ್ಯ ವಾಣಿಜ್ಯ, ಮತ್ತು ಕೈಗಾರಿಕಾ ಮಹಾ ಸಂಸ್ಥೆಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಕೈಗಾರಿಕ ಸಂವಾದದಲ್ಲಿ ಕೈಗಾರಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಶ್ರೀ ಮುರುಗೇಶ್ ಆ ನಿರಾಣಿ ಪಾಲ್ಗೊಂಡು ಮಾತಾನಾಡಿದ ಅವರು, ರಾಜ್ಯ ಸರ್ಕಾರವು ಕೈಗಾರಿಕಾ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಸೇಲ್ ಟೀಡ್ ಎಕ್ಸಿಕ್ಯೂಶನ್ ಅನ್ನು ಹಲವಾರು ಸುಧಾರಣೆಗಳ ಅಡಿಯಲ್ಲಿ ತರಲಾಗಿದೆ ಮತ್ತು ಅನಾರೋಗ್ಯದ ಘಟಕಕ್ಕೆ ಸಹ ಘಟಕದ ಪುನರ್ವಸತಿಗಾಗಿ ಮಾರಾಟ ಪತ್ರವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಫ್.ಕೆ.ಸಿ.ಸಿ.ಐ. ಅಧ್ಯಕ್ಷರಾದ ಬಿ.ವಿ. ಗೋಪಾಲ್ ರೆಡ್ಡಿ, ಮತ್ತು ಕೈಗಾರಿಕಾ ಸಮಿತಿ ಅಧ್ಯಕ್ಷ ಬಿ.ಪಿ. ಶಶಿಧರ್ ಆಯೋಜಿಸಿದ್ದರು. ಹಿರಿಯ ಉಪಾಧ್ಯಕ್ಷ ರಮೇಶ ಚಂದ್ರ ಲಾಹೋಟಿ ಮತ್ತು ಉಪಾಧ್ಯಕ್ಷರಾದ ಎಂ.ಜಿ ಬಾಲಕೃಷ್ಣ ಉಪಸ್ಥಿತರಿದ್ದರು. ಸಂವಾದ ಸಭೆಯಲ್ಲಿ ರಾಜ್ಯದಾದ್ಯಂತ ಹಲವಾರು ಕೈಗಾರಿಕೋದ್ಯಮಿಗಳು ಮತ್ತು ಸಂಘದ ಅಧ್ಯಕ್ಷರು ಭಾಗವಹಿಸಿದರು.
ಹಾಸನದ ಹೆಸರಾದಂತ ವಾಣಿಜ್ಯೋದ್ಯಮಿ ಮತ್ತು ಹಾಸನ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು ಮತ್ತು ಎಫ್.ಕೆ.ಸಿ.ಸಿ.ಐ. ನಿರ್ದೇಶಕರು ಎಚ್.ಎ. ಕಿರಣ್ ಅವರು ಕೈಗಾರಿಕೆಗಳಿಗೆ ತೆರಿಗೆಯನ್ನು ಸರಳೀಕರಿಸುವುದು ಮತ್ತು ಪಾವತಿಸಿದ ತೆರಿಗೆಗಳ ಬಳಕೆಯನ್ನು ಪ್ರಸ್ತಾಪಿಸಿ ಮನವಿ ಮಾಡಿದರು. ಕೈಗಾರಿಕೆಗಳಿಗೆ ತೆರಿಗೆಯನ್ನು ಸರಳೀಕರಿಸುವ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಮತ್ತು ತೆರಿಗೆಯಿಂದ ಬರುವ ಹಣವನ್ನು ಶೇಕಡ ೭೦ ರಷ್ಟು ಕೈಗಾರಿಕಾ ಪುದೇಶಗಳು ಮತ್ತು ಶೇಕಡ ೩೦ ರಷ್ಟು ಸ್ಥಳೀಯ ಸಂಸ್ಥೆಗಳ ಉನ್ನತೀಕರಣಕ್ಕೆ ಬಳಸಲಾಗುವುದು ಎಂದು ಸಚಿವ ನಿರಾಣಿ ಭರವಸೆ ನೀಡಿದರು.
ಕಿರಣ್ ಅವರು ಈ ಸಕಾರಾತ್ಮಕ ಕ್ರಮಕ್ಕಾಗಿ ಸಚಿವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಕರ್ನಾಟಕ ರಾಜ್ಯದ ಕೈಗಾರಿಕೆಗಳಿಗೆ ಸಹಾಯ ಮಾಡುವ ಸರ್ಕಾರದಿಂದ ಅಗತ್ಯ ಆದೇಶಗಳನ್ನು ವ್ಯವಸ್ಥೆ ಮಾಡಲು ವಿನಂತಿಸಿದರು. ಇದೆ ವೇಳೆ ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿಗಳಾದ ವಿರೇಂದ್ರ ಕಾಮತ್ ಹಾಗೂ ಉದ್ಯಮಿಗಳಾದ ಡಾ, ಸುಂದರಂ ಇತರರು ಉಪಸ್ಥಿತರಿದ್ದರು.