ಹಾಸನ : ಪ್ರಕರಣ ದಾಖಲಾಗಿ ೧೫ ದಿನಗಳು ಕಳೆದರೂ ಪೊಲೀಸ್ ಇಲಾ ಖೆಯಿಂದ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಕೂಡಲೇ ಕ್ರಮ ತೆಗೆದುಕೊಂಡು ನಮಗೆ ನ್ಯಾಯ ಕೊಡಿಸಬೇಕೆಂದು ದಲಿತ ರಕ್ಷಣಾ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬೇಲೂರು ತಾಲ್ಲೂಕಿನ ಮಾದೀಹಳ್ಳಿ ಹೋಬಳಿ, ಅಡಗೂರು ಗ್ರಾಮದ ಭಾಗ್ಯ ಕೋಂ ರಂಗಸ್ವಾಮಿ ಅವರಿಗೆ ಶಿವಪುರ ಕಾವಲು ಗ್ರಾಮಕ್ಕೆ ಸೇರಿದ ಸ.ನಂ. ೧೭೯ರಲ್ಲಿ ೪ ಎಕರೆ ಜಮೀನಿದ್ದು, ಇದೇ ಜಮೀನಿನಲ್ಲಿ ದನ ಕರುಗಳನ್ನು ಕಟ್ಟುವುದಕ್ಕೆ ಹಾಗೂ ವಾಸಕ್ಕೆಂದು ನಿರ್ಮಿಸಿಕೊಂಡಿದ್ದ ಒಂದು ಶೀಟ್ ವುಳ್ಳ ಶೆಡ್ನ್ನು ಮಾಡಿಕೊಂಡಿದ್ದಾರೆ.
ಜಮೀನಿನ ವಿಚಾರವಾಗಿ ಮಾದಿಹಳ್ಳಿ ಹೋಬಳಿ, ತಟ್ಟೆಹಳ್ಳಿ ಗ್ರಾಮದ ವಾಸಿಗಳಾದ ರುದ್ರೇಗೌಡರ ಮಕ್ಕಳಾದ ಚಂದ್ರಶೇಖರ ಮತ್ತು ಈತನ ಪತ್ನಿಯಾದ ವಸಂತ ಮತ್ತು ಶಿವಕುಮಾರ ಹಾಗೂ ಈತನ ಪತ್ನಿ ರಾಧಮಣಿ ೨೦೧೭ರಂದು ನಮ್ಮ ಜಮೀನಿಗೆ ಹಾಕಿದ್ದ ರಾಗಿಯನ್ನು ದನ ಕರುಗಳನ್ನು ಬಿಟ್ಟು ಮೇಯಿಸಿ ಬೆಳೆಹಾನಿ ಮಾಡಿದ್ದರು. ಈ ವಿಚಾರವಾಗಿ ಅವರನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿ ಹೊಡೆದು ಜಾತಿ ನಿಂದನೆ ಮಾಡಿರುತ್ತಾರೆ ಎಂದು ದೂರು ನೀಡಿದ್ದರು.
ಈ ವಿಚಾರವಾಗಿ ಕೇಸು ದಾಖಲಾಗಿ ದಾವೆ ನ್ಯಾಯಾ ಲಯದಲ್ಲಿದ್ದರೂ ಕೂಡ ಸುಮ್ಮನಿರದೆ ೨೦೨೩ ಮಾರ್ಚ್ ನಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಚಂದ್ರಶೇಖರ, ಶಿವಕುಮಾರ, ವಸಂತ ಹಾಗೂ ರಾಧಮಣಿ ಇವರುಗಳೆಲ್ಲರೂ ಸೇರಿಕೊಂಡು ಜಮೀನಿನ ಶೆಡ್ಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಅದರಲ್ಲಿ ಇದ್ದ ಚಾಪೆ, ದಿಂಬು ಹಾಗೂ ಪಾತ್ರೆ ಪರಿಕರ, ಟಾರ್ಪಾಲ್ಗಳು ಹಾಗೂ ಇನ್ನಿತರ ವ್ಯವಸಾಯದ ಸಾಮಗ್ರಿಗಳನ್ನು ಸುಟ್ಟು ಹಾಕಿರುತ್ತಾರೆ ಎಂದು ಆರೋಪಿದ್ದಾರೆ.
ಆ ಸಮಯದಲ್ಲಿ ಭಾಗ್ಯ ಹಾಗೂ ರಂಗಸ್ವಾಮಿ ಮಗಳ ಮನೆಗೆ ಹೋಗಿದ್ದರಿಂದ ಯಾವುದೇ ಜೀವಹಾನಿ ಆಗಿರುವುದಿಲ್ಲ. ಈ ವಿಚಾರವಾಗಿ ಹಳೇಬೀಡು ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಹ ಆರೋಪಿಗಳನ್ನು ಬಂಧಿಸಿರುವುದಿಲ್ಲ ಎಂದು ಆರೋಪಿಸಿದ್ದಾರೆ.
ಸಂಬಂಧಪಟ್ಟ ತನಿಖಾಧಿಕಾರಿಗ ಳಾದ ಅರಸೀಕೆರೆಯ ಡಿ.ವೈ.ಎಸ್.ಪಿ ಹಾಗೂ ಹಳೇಬೀಡು ಪೊಲೀಸ್ ಠಾ ಣೆ ಸಿಬ್ಬಂದಿ ಕ್ರಮ ತೆಗೆದುಕೊಂಡಿಲ್ಲ. ಭಾಗ್ಯ ಮತ್ತು ರಂಗಸ್ವಾಮಿ ಪ್ರಾಣಭಯ ಇರುವುದರಿಂದ ಕೂಡಲೇ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ ರಮೇಶ್, ತಾಲೂಕು ಅಧ್ಯಕ್ಷ ಮಂಜಯ್ಯ, ಉಪಾಧ್ಯಕ್ಷ ಉಮೇಶ್ ಇತರರು ಉಪಸ್ಥಿತರಿದ್ದರು.
ಆಪ್ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣದ ಆರೋಪಿಯಾಗಿರುವ ಬಿಭವ್ ಕುಮಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ…
ಲೋಕಾಯುಕ್ತದ ಕಲಬುರಗಿ ಡಿವೈಎಸ್ಪಿ ಆಯಂಟನಿ ಜಾನ್ ಹಾಗೂ ಇತರೆ ಅಧಿಕಾರಿಗಳು ಗುರುವಾರ ನಗರದಲ್ಲಿನ ತಾಲ್ಲೂಕು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ…
ಇತ್ತೀಚೆಗಷ್ಟೇ ತ್ರಿನಯನಿ ಧಾರಾವಾಹಿಯ ನಟಿ ಪವಿತ್ರಾ ಜಯರಾಂ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ತೆಲುಗು ಧಾರಾವಾಹಿ ನಟ…
ಮೇ.15 ರಿಂದ ಆರಂಭವಾಗಿದ್ದ ಎಸ್ಎಸ್ಎಲ್ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು ರಾಜ್ಯ…
ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್ನಲ್ಲಿ ಮನೆಗೆ ಹೋಗುವಾಗ ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…