Categories: ಹಾಸನ

ಬೇಲೂರು: ಅರ್ಹರಿಗೆ ನಿವೇಶನ ಒದಗಿಸಲು ಪುರಸಭೆ ಬದ್ಧ

ಬೇಲೂರು: ಪಟ್ಟಣದ ವ್ಯಾಪ್ತಿಯಲ್ಲಿರುವ ನಿವೇಶನ ರಹಿತರಿಗೆ ಹಾಗೂ ಪೌರ ಕಾರ್ಮಿಕರಿಗೆ ನಿವೇಶನಗಳನ್ನು ನಿಸ್ಪಕ್ಷಪಾತವಾಗಿ ವಿತರಿಸಲು ಪುರಸಭೆ ಬದ್ಧವಾಗಿದೆ ಎಂದು ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಹೇಳಿದರು.

ಸುಮಾರು ೨೫ ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ಹರಸಾಹಸವಾಗುತ್ತಿತ್ತು. ಅಲ್ಲದೆ ಈಗಾಗಲೇ ಸರ್ಕಾರಿ ಜಾಗದಲ್ಲಿ ಭೂಮಿಯನ್ನು ಗುರುತು ಮಾಡಿದ್ದರೂ ಸಹ ಅದನ್ನು ಪಡೆಯಲು ವಿಫಲವಾಗಿತ್ತು. ಆದರೆ ಬೇಲೂರಿನ ಪುರಸಭೆ ಅಧ್ಯಕ್ಷೆಯ ತೀರ್ಥಕುಮಾರಿ ಅವರ ಹೋರಾಟ ಹಾಗೂ ಕಂದಾಯ ಇಲಾಖೆಯ ದಂಡಾಧಿಕಾರಿ ಎಂ ಮಮತಾ ಅವರ ಸಮಯ ಪ್ರಜ್ಞೆ ಹಾಗೂ ಅಧ್ಯಕ್ಷರ ನಿಶ್ಚಲ ದೃಢ ನಿರ್ಧಾರದಿಂದಾಗಿ ಇಂದು ೨೦೦ ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಸರೆಯಾಗಿದೆ. ಅದಕ್ಕಾಗಿ ರಾಯಪುರದಲ್ಲಿ ರುವ ಸರ್ವೆ ನಂಬರ್ ೧೯ ರಲ್ಲಿ ೫ ಎಕರೆ ಸರ್ಕಾರಿ ಭೂಮಿ ಯನ್ನು ಕೆಲ ರೈತರು ಒತ್ತು ವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದರು. ಈ ಜಾಗವನ್ನು ೨೦೨೧ ರಲ್ಲಿ ಅಂದಿನ ತಹಶೀಲ್ದಾರ್ ನಟೇಶ್ ಅವರು ಗುರುತು ಮಾಡಿ ನಿವೇಶನ ರಹಿತರಿಗೆ ನೀಡಲು ನೀಲ ನಕ್ಷೆ ತಯಾರು ಮಾಡಿದ್ದು ಅದರಂತೆ ಪುರಸಭೆ ಅಧ್ಯಕ್ಷರಾದ ತೀರ್ಥಕುಮಾರಿ ವೆಂಕಟೇಶ್ ಹಾಗೂ ತಹಶೀಲ್ದಾರ್ ಎಂ ಮಮತಾ ಅವರು ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡ ಜಾಗವನ್ನು ರೈತರ ಮನವೊಲಿಸಿ ಬಿಡೊಸಲು ಸಫಲರಾಗಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ನಮ್ಮೆಲ್ಲಾ ಸದಸ್ಯರ ಸಹಕಾರ ಹಾಗೂ ನಮ್ಮೆಲ್ಲಾ ಅಧಿಕಾರಿಗಳ ಸಹಕಾರದಿಂದ ಬಹುದಿನದಿಂದ ನೆನೆಗುದಿಗೆ ಬಿದ್ದಂತ ಆಶ್ರಯ ಯೋಜನೆಯ ನಿವೇಶನ ಹಂಚಲು ಈಗಾಗಲೇ ಸಿದ್ದತೆ ಮಾಡಿಕೊಳ್ಳಲಾಗಿದೆ.ಅಲ್ಲದೇ ನಿವೇಶನವನ್ನು ಕಾನೂನಿನ ಅಡಿಯಲ್ಲಿ ಹಂಚಲಾಗುವುದು. ಸುಮಾರು ೨೦ ವರ್ಷಗಳಿಂದ ಒಬ್ಬರಿಗೂ ನಿವೇಶನ ಹಂಚಲು ಪುರಸಭೆ ವಿಫಲವಾಗಿತ್ತು. ಇದಕ್ಕೆ ಹಲವಾರು ಕಾರಣ, ಜಾಗದ ಸಮಸ್ಯೆ ಇತ್ತು. ಅಲ್ಲದೇ ಈ ಹಿಂದೆ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾಗಿದ್ದ ಎಂ ಆರ್ ವೆಂಕಟೇಶ್ ಅವರ ಸತತ ಪರಿಶ್ರಮ ಹಾಗೂ ಹಿಂದಿನ ತಹಶೀಲ್ದಾರ್ ನಟೇಶ್ ಅವರ ಸಹಕಾರದಿಂದ ರಾಯಪುರ ಗ್ರಾಮದ ಸರ್ವೆ ನಂಬರ್೧೯ ರಲ್ಲಿ ೫ ಎಕರೆ ಭೂ ಪ್ರದೇಶ ಮಂಜೂರು ಮಾಡಿದ್ದೆವು.ಆದರೆ ಅದು ನಮ್ಮ ಕಚೇರಿಯ ವಶಕ್ಕೆ ನೀಡಿರಲಿಲ್ಲ.

ಇಂದಿನ ತಹಶೀಲ್ದಾರ್ ಎಂ ಮಮತಾ ಅವರ ಸಹಕಾರದಿಂದಜಾಗದ ಸಂಪೂರ್ಣ ಸರ್ವೆ ನಡೆಸಿಇಂದು ನಮಗೆ ಜಾಗದ ಸಂಪೂರ್ಣ ದಾಖಲೆಗಳನ್ನು ಹಸ್ತಾಂತರಿಸಿದ್ದಾರೆ. ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈಗಾಗಲೇ ನಮ್ಮ ಅಧಿಕಾರಿಗಳ ಜೊತೆ ಚರ್ಚಿಸಿ ನೀಲ ನಕ್ಷೆ ಸಿದ್ದಪಡಿಸಲು ಯೋಜನಾ ಪ್ರಾಧಿಕಾರಕ್ಕೆ ಕಳಿಸಲು ದಾಖಲೆ ನೀಡುತ್ತಿದ್ದೇವೆ. ಇದರಿಂದಾಗಿ ಸುಮಾರು ೨೦೦ ಕುಟುಂಬಗಳಿಗೆ ನಿವೇಶನ ಸಿಗಲಿದೆ. ಇದರಲ್ಲಿ ಪುರಸಭೆ ವ್ಯಾಪ್ತೀಯ ಗುಡಿಸಲು ವಾಸಿಗಳಿಗೆ ಅರ್ಹ ಫಲಾನುಭವಿಗಳಿಗೆ ಎಲ್ಲಾ ಸದಸ್ಯರ ಜೊತೆ ಚರ್ಚಿಸಿ ಯಾವುದೇ ರಾಜಕೀಯ ಹೊರತುಪಡಿಸಿ ನಿಷ್ಪಕ್ಷಪಾತವಾಗಿ ಯಾರ ಪ್ರಭಾವಕ್ಕೆ ಒಳಗಾಗದೆ ಕಡುಬಡವರಿಗೆ ನೀಡಲಾಗುವುದು. ಈಗ ಮತ್ತೆ ಹೊಸ ದಾಗಿ ಅರ್ಜಿಗಳನ್ನು ಪಡೆಯುವುದಾಗಿ ತಿಳಿಸಿದರು.

ಉಪಾಧ್ಯಕ್ಷೆ ಜಮೀಲಾ ತೌಫಿಕ್,ಪುರಸಭೆ ವ್ಯವಸ್ಥಾಪಕ ಪ್ರಶಾಂತ್,ಆರ್ ಓ ಹರೀಶ್,ಪ್ರಸನ್ನ,ಆರೋಗ್ಯಾಧಿಕಾರಿ ಲೋಹಿತ್, ಪೃಥ್ವಿ ಹಾಜರಿದ್ದರು.

Sneha Gowda

Recent Posts

ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳ ದಾರುಣ ಸಾವು

ಪ್ರವಾಸಕ್ಕೆಂದು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲದ ದಾರುಣ ಘಟನೆ ಕನಕಪುರ ತಾಲೂಕಿನ ಮೇಕೆದಾಟು ಬಳಿಯ ಸಂಗಮದ ಕಾವೇರಿ ನದಿಯಲ್ಲಿ ನಡೆದಿದೆ.…

4 mins ago

ನಿಯಂತ್ರಣ ಕಳೆದುಕೊಂಡ ‘ಅಮಿತ್ ಶಾ’ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್

ಬಿಹಾರದ ಬೇಗುಸರಾಯ್‌ ನಿಂದ ಟೇಕ್ ಆಫ್ ಆಗುವ ಮೊದಲು ಅಮಿತ್ ಶಾ ಅವರ ಹೆಲಿಕಾಪ್ಟರ್ ಸ್ವಲ್ಪ ಸಮಯದವರೆಗೆ ನಿಯಂತ್ರಣ ಕಳೆದುಕೊಂಡ…

11 mins ago

ಮುರುಘಾ ಸ್ವಾಮೀಜಿ ಮತ್ತೆ ಜೈಲಿಗೆ : ಮೇ 27ರವರೆಗೆ ನ್ಯಾಯಾಂಗ ಬಂಧನ

ಮುರುಘಾ ಮಠದ ವಸತಿ ಶಾಲ ವಿದ್ಯಾರ್ಥಿನಿಯರ ಮೇಲಿನ ಅತ್ಯಚಾರ ಪ್ರಕರಣದಲ್ಲಿ ಜಾಮನೀನು ಪಡೆದು ಹೊರ ಬಂದಿದ್ದ ಮುರುಘಾ ಶ್ರೀಗಳಿಗೆ ಪುನಃ…

22 mins ago

ಅಮಿತ್ ಶಾ ನಕಲಿ ವಿಡಿಯೋ ಹಂಚಿಕೆ : ತೆಲಂಗಾಣ ಸಿಎಂ ರೇವಂತ್‌ಗೆ ಸಮನ್ಸ್

ಕೇಂದ್ರ ಸಚಿವ ಅಮಿತ್‌ ಶಾ ಕುರಿತಾದ ನಕಲಿ ವಿಡಿಯೋವನ್ನು ʻಎಕ್ಸ್‌ʼನಲ್ಲಿ ಹಂಚಿಕೊಂಡ ಆರೋಪದ ಮೇರೆಗೆ ಮೇ 1ರಂದು ವಿಚಾರಣೆಗೆ ಹಾಜರಾಗುವಂತೆ…

49 mins ago

ರೇವಣ್ಣ ವಿಡಿಯೋ ಕೇಸ್‌ : ಡಿಸಿ ಸಿ. ಸತ್ಯಭಾಮ ಮತ್ತೊಂದು ಸ್ಫೋಟಕ ಮಾಹಿತಿ

ಇದೀಗ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ್ಣಕ್ಕೆ ಸಂಬಂಧ ಪಟ್ಟಂತೆ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿದ್ದು ಯಾರಾದ್ರೂ ಸಂತ್ರಸ್ತೆ…

1 hour ago

ಪೋಕ್ಸೋ ಕೇಸ್; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

ಪೋಕ್ಸೋ ಪ್ರಕರಣದ ಆರೋಪಿಯಾಗಿರುವ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಇಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಶರಣಾದರು. ಪೋಕ್ಸೋ ಪ್ರಕರಣದಡಿ…

2 hours ago