ಬೇಲೂರು: ದುಷ್ಕ ರ್ಮಿಗಳಿಂದ ರಸ್ತೆಯ ಮದ್ಯದಲ್ಲಿ ತಂತಿ ಹಾಕಿದ್ದು ಬಾರಿ ಅಪಾಯ ತಪ್ಪಿದೆ. ತಾಲೂಕಿನ ಮೊಗಸಾವರ ಗ್ರಾಮದಲ್ಲಿ ಕುಶಾವರ ಮುಖ್ಯ ರಸ್ತೆಯಿಂದ ಮೊಗಸಾವರಕ್ಕೆ ಹೋಗುವ ರಸ್ತೆಯಲ್ಲಿ ಕಿಡಿಗೇಡಿಗಳು ವಾಹನಗಳು ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲಿ ಬಲಭಾಗದಿಂದ ಎಡಭಾಗದವರೆಗೂ ರಸ್ತೆಯ ಮದ್ಯಭಾಗದಲ್ಲಿ ಅಪಾಯವಾಗಲಿ ಎಂದೇ ತಂತಿಹಾಕಿದ್ದು ರಾತ್ರಿ ಸಂಚರಿಸುವ ವಾಹನಸವಾರರಿಗೆ ಅಪಾಯ ತಂದೊಡ್ಡಬೇಕು ಎಂಬ ಉದ್ದೇಶದಿಂದ ತಂತಿ ಕಟ್ಟಿದ್ದರು ಎಂದಿನಂತೆ ಪಟ್ಟಣದಿಂದ ಕೆಲಸ ಮುಗಿಸಿಕೊಂಡು ಮೊಗ ಸಾವರ ಗ್ರಾಮದ ನಂಜುಂಡ ತಮ್ಮ ಊರಿಗೆ ಮರಳುತ್ತಿದ್ದಾಗ ರಸ್ತೆ ಮದ್ಯದಲ್ಲೇ ತಂತಿ ಎಳೆದಿರುವುದು ಗೊತ್ತಾಗಿದೆ. ಹಾಗೂ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದೇ ವೇಳೆ ಮಾತನಾಡಿದ ಗ್ರಾಮಸ್ಥರಾದ ಕೌಶಿಕ್, ಹಾಗೂ ನಂಜುಂಡ ಬೇಲೂರು ಪಟ್ಟಣ ದಿಂದ ಕೆಲಸ ಮುಗಿಸಿಕೊಂಡು ತಡರಾತ್ರಿ ಊರಿಗೆ ಬರುವಾಗ ನಮ್ಮ ಮೊಗಸಾವರ ಗ್ರಾಮದ ಕಾಂಕ್ರೀಟ್ ರಸ್ತೆಗೆ ಬೇಲಿಯಿಂದ ಬೇಲಿಗೆ ಯಾರೋ ಕಿಡಿಗೇಡಿಗಳು ರಸ್ತೆಗೆ ಸೇರಿಸಿ ಅಡ್ಡತಂತಿ ಕಟ್ಟಿ ದರೋಡೆ ಮಾಡುವ ಉದ್ದೇಶದಿಂದ ಅಥವಾ ಇನ್ನಿತರ ಬೇರೆ ದುರದ್ದೇಶದಿಂದ ತಂತಿ ಕಟ್ಟಿದ್ದು ನಾವು ಅದನ್ನು ನೋಡಿ ಸ್ವಲ್ಪದರಲ್ಲೇ ಬಚಾವಾಗಿದ್ದು,ಬೇರೆ ವಾಹನಗಳು ಬಂದರೂ ಕೂಡ ಅವರಿಗೆ ಕತ್ತಲೆಯಲ್ಲಿ ಕಾಣದೆ ತಂತಿಗೆ ಸಿಕ್ಕಿಹಾಕಿಕೊಂಡು ಇನ್ನಷ್ಟು ತೊಂದರೆಯಾಗುತ್ತಿತ್ತು. ಅದನ್ನು ಯಾರು ಯಾವ ಉದ್ದೇಶಕ್ಕಾಗಿ ಕಟ್ಟಿದ್ದಾರೆ ಎಂದು ಇದುವರೆಗೂ ತಿಳಿದಿಲ್ಲ.
ಕೂಡಲೇ ನಾವು ಗ್ರಾಮಸ್ಥರಿಗೆ ವಿಷಯ ತಿಳಿಸಿ ಅವರು ನಂತರ ತಕ್ಷಣ ಅರೇಹಳ್ಳಿ ಪೊಲೀಸರಿಗೆ ವಿಷಯ ತಿಳಿಸಿದ್ದು ಬೇರೆ ಅನಾಹುತವಾಗುವುದಕ್ಕೂ ಮುಂಚೆ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಸುರೇಶ್ ಅಲ್ಲಿದ್ದ ತಂತಿಯನ್ನು ಬಿಚ್ಚಿದ್ದು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಗ್ರಾಮಸ್ಥರು ಈ ಘಟನೆ ಯಿಂದ ಭಯಭೀತರಾಗಿದ್ದು ತಕ್ಷಣ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಸ್ಥರಾದ ನಾಗೆಶ್, ಮಧುಕು ಮಾರ್, ಜಯರಾಂ, ಲಕ್ಷ್ಮಣ್, ಉಮೇಶ್, ಧರ್ಮರಾಜ್ , ವಾಸಪ್ಪ, ನಂಜುಂಡ ಇತರರು ಹಾಜರಿದ್ದರು.