ಬೇಲೂರು: ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಅನ್ಯ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆಯನ್ನು ನೋಡಿದರೆ ಸಂತೋಷವಾಗುತ್ತದೆ. ಇದು ಬಿಪಿಯ ಗೆಲುವಿನ ಸಂಖ್ಯೇತವನ್ನು ತೋರುತ್ತಿದೆ. ಇದೇ ರೀತಿ ಇನ್ನು ಕೆಲವೇ ದಿನಗಳ ಕಾಲ ಸೇರ್ಪಡೆ ಮತ್ತು ಕಾರ್ಯಕರ್ತರ ಶಕ್ತಿ ಪ್ರದರ್ಶನವಾಗುತ್ತಿದ್ದರೆ ನಾವು ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.
ಭೂತನಗುಡಿ ಗ್ರಾಮಪಂಚಾಯತ್ ಸದಸ್ಯ ಮಲ್ಲೇಶ್ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಜನರನ್ನು ನೋಡಿದರೆ, ಜನರಿಗೇ ಸತ್ಯದ ಅರಿವಾದಂತಿದೆ. ಎಲ್ಲರಿಗೂ ಈಗ ಬಿಜೆಪಿಯ ಮಹತ್ವ ಅರಿವಿಗೆ ಬಂದಿದೆ. ಇದೇ ರೀತಿಯಾಗಿ ಇನ್ನು ಕೆಲವೇ ಸಮಯದಲ್ಲಿ ಇಡೀ ಬೇಲೂರು ಬಿಜೆಪಿಯ ಭದ್ರಕೋಟೆಯಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸೇರ್ಪಡೆಗೊಂಡ ಮಲ್ಲೇಶ್, ಇಷ್ಟು ದಿನಗಳ ಕಾಲ ಬೇರೆ ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತು ಈಗ ಬಿಜೆಪಿಪಕ್ಷದ ಮೇಲೆ ಭರವಸೆಯಿಟ್ಟು ಬಂದಿದ್ದೇನೆ. ಇದು ಖಂಡಿತವಾಗಿಯೂ ಫಲವನ್ನು ನೀಡುತ್ತದೆಯೆನ್ನುವ ನಂಬಿಕೆಯಿದೆ ಮತ್ತು ಸುರೆಶಣ್ಣ ಗೆಲ್ಲತ್ತಾರೆನ್ನುವ ಆತ್ಮವಿಶ್ವಾಸ ನನ್ನಂತಹ ಲಕ್ಷಾಂತರ ಜನರಲ್ಲಿದೆ ಎಂದು ಹೇಳಿದರು.
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸಂಸದೆ ಬ್ರಿಟಾನಿ ಲೌಗಾ ಅವರಿಗೆ ಕೆಲವು ಅಪರಿಚಿತರು ಮಾದಕ ದ್ರವ್ಯ ನೀಡಿ, ಲೈಂಗಿಕ ಕಿರುಕಳ ನೀಡಿರುವ…
ಆಸ್ಕರ್ ಪುರಸ್ಕೃತ, ‘ಟೈಟಾನಿಕ್ʼ‘ಲಾರ್ಡ್ ಆಫ್ ರಿಂಗ್ಸ್ʼ ಪ್ರಸಿದ್ಧ ನಟ ಬರ್ನಾರ್ಡ್ ಹಿಲ್ ನಿಧನ ಹೊಂದಿದ್ದಾರೆ ಅವರಿಗೆ 79 ವಯಸ್ಸಾಗಿತ್ತು.1997ರಲ್ಲಿ ರಿಲೀಸ್…
ಏಪ್ರಿಲ್ 25ರಿಂದ ಕೆ ವಿ ಎನ್ ದೊಡ್ಡಿ, ಎಂ ಟಿ ದೊಡ್ಡಿ ಗ್ರಾಮದ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಮೇವು ವಿತರಿಸಿಲ್ಲ ಎಂದು…
ಬ್ರೆಜಿಲ್ನ ದಕ್ಷಿಣ ಭಾಗದಲ್ಲಿರು ರಿಯೋ ಗ್ರಂಡ್ ಡೊ ಸುಲ್ʼ ರಾಜ್ಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಪ್ರವಾಹ ಯಂಟಾಗಿದ್ದು ಈವರೆಗೂ 78…
ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಅಲಂ ಅವರ ಆಪ್ತ ಕಾರ್ಯದರ್ಶಿ ಮನೆಗೆ ಐಡಿ ರೈಡ್ ಮಾಡಿದ್ದು 30 ಕೋಟಿ ಅಧಿಕ ಹಣ…
ಕಲಬುರ್ಗಿ ಜಿಲ್ಲೆಯ ಸೇಡಂ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡರಾಗಿದ್ದ ಡಾ. ನಾಗರೆಡ್ಡಿ ಪಾಟೀಲ್ (79) ಇಂದು ಬೆಳಗಿನ…