Categories: ಹಾಸನ

ನಾಳೆಯ ಫಲಿತಾಂಶದತ್ತ ಎಲ್ಲರ ಚಿತ್ತ: ಹಾಲಿ ಶಾಸಕರು – ಹೊಸ ಮುಖಗಳಿಗೆ ಒಲಿಯಲಿದೆಯೇ ಅದೃಷ್ಟ…!!

ಹಾಸನ : ೨೦೨೩ ವಿಧಾನಸಭೆ ಚುನಾವಣೆ ಫಲಿತಾಂಶ ನಾಳೆ ಪ್ರಕಟಗೊಳ್ಳಲಿದ್ದು ಜಿಲ್ಲೆಯ ಜನರಲ್ಲಿ ಯಾರು ಮುಂದಿನ ಸರ್ಕಾರದ ಆಡಳಿತ ಅವಧಿಗೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲ ಮುಂದುವರೆದಿದೆ.

ಈ ಹಿಂದೆ ನಡೆದ ಚುನಾ ವಣೆಯ ಫಲಿತಾಂಶವನ್ನು ಗಮನಿ ಸಿದರೆ ಹಾಲಿ ಶಾಸಕರೇ ಗೆದ್ದಿರುವ ಉದಾಹರಣೆ ಕಾಣಬಹುದು
ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಹೆಚ್ ಡಿ ರೇವಣ್ಣ ಅವರು ೧,೦೮,೫೪೧ ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಾಗೂರು ಮಂಜೇಗೌಡ ವಿರುದ್ಧ ಪಡೆದು ೪೩,೮೩೨ ಮತಗಳ ಅಂತರದಿಂದ ದಾಖಲೆ ಜಯ ಸಾಧಿಸಿದ್ದರು, ಈ ಚುನಾವಣೆಯಲ್ಲಿ ಬಾಗೂರು ಮಂಜೇಗೌಡ ಅವರು ೬೪,೭೦೯ ಮತ ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ದಿವಂಗತ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಸ್ಪರ್ಧೆ ನಡೆಸಿದ್ದು ಜೆಡಿಎಸ್ ಪಕ್ಷದಿಂದ ಎಂಟನೇ ಬಾರಿಗೆ ಆಯ್ಕೆ ಬಯಸಿ ರೇವಣ್ಣ ಅವರು ಸ್ಪರ್ಧೆ ನೀಡಿದ್ದು ಫಲಿತಾಂಶ ಹೊರಬರಬೇಕಿದೆ.

ಇನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿಎನ್ ಬಾಲಕೃಷ್ಣ ಸತತ ಎರಡು ಬಾರಿ ಗೆಲುವು ಸಾಧಿಸಿದ್ದರು ಅವರು ಕಾಂಗ್ರೆಸ್ನ ಸಿ.ಎಸ್ ಪುಟ್ಟೇಗೌಡ ಅವರ ವಿರುದ್ಧ ೧,೦೫,೫೧೬ ಮತಗಳನ್ನು ಪಡೆಯುವ ಮೂಲಕ ೫೩೦೧೨ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಸಿ ಎಸ್ ಪುಟ್ಟೇಗೌಡ ಈ ಚುನಾವಣೆಯಲ್ಲಿ ೫೨,೫೦೪ ಮತಗಳನ್ನು ಪಡೆದಿದ್ದರು, ಈ ಬಾರಿ ಹ್ಯಾಟ್ರಿಕ್ ಸಾಧನೆಯ ಗುರಿ ತಲುಪುವ ನಿರೀಕ್ಷೆಯಲ್ಲಿ ಬಾಲಕೃಷ್ಣ ಅವರಿದ್ದಾರೆ ಬರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ವಿಧಾನಪರಿಷತ್ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಸ್ಪರ್ಧೆ ಮಾಡಿದ್ದು ಇವರಿಬ್ಬರಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ .

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿಯೂ ಸತತ ಮೂರು ಬಾರಿ ಗೆಲವು ಸಾಧಿಸುವ ಮೂಲಕ ಹ್ಯಾಟ್ರಿಕ್ ಸಾಧಿಸಿದ್ದ ಕೆಎಂ ಶಿವಲಿಂಗೇಗೌಡರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ೯೩,೧೭೮ ಮತಗಳನ್ನು ಪಡೆದು ಕಾಂಗ್ರೆಸ್ ಪಕ್ಷದ ಜಿ.ಬಿ ಶಶಿಧರ್ ವಿರುದ್ಧ ೪೨,೮೮೧ ಮತಗಳ ಅಂತರದಿಂದ ಗೆಲುವು ಪಡೆದು ಮಿಂಚಿದ್ದರು ಕಾಂಗ್ರೆಸ್‌ನ ಶಶಿಧರ್ ರವರು ೫೦,೨೯೭ ಮತಗಳನ್ನು ಪಡೆದಿದ್ದರು ಈ ಬಾರಿ ನಾಲ್ಕನೇ ಅವಧಿಗೆ ಶಾಸಕರಾಗಿ ಆಯ್ಕೆಯಾಗಲು ಜೆಡಿಎಸ್ ತೊರೆದ ಶಿವಲಿಂಗೇ ಗೌಡರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದು, ಇವರ ವಿರುದ್ಧ ಜೆಡಿಎಸ್ ಪಕ್ಷದಿಂದ ಎನ್ ಆರ್ ಸಂತೋಷ್ ಸ್ಪರ್ಧೆ ಮಾಡಿರುವುದು  ಪೈಪೋಟಿಗೆ ಕಾರಣವಾಗಿದೆ ಈ ಹಿನ್ನಲೆಯಲ್ಲಿ ನಾಳೆಯ ಫಲಿತಾಂಶ ತೀವ್ರ ಕುತೂಹಲದಿಂದ ಕೂಡಿದೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಎರಡನೇ ಅವಧಿಗೆ ಆಯ್ಕೆ ಬಯಸಿರುವ ಬಿಜೆಪಿ ಯಿಂದ ಪ್ರೀತಂ ಜೆ ಗೌಡ ೬೩,೩೪೮ ಮತಗಳಿಂದ ಜೆಡಿಎಸ್ ಪಕ್ಷದ ಎಚ್‌ಎಸ್ ಪ್ರಕಾಶ್ ವಿರುದ್ಧ ೧೩೦೦೬ ಮತಗಳಿಂದ ಗೆಲುವು ಸಾಧಿಸಿದ್ದರು ಎಚ್‌ಎಸ್ ಪ್ರಕಾಶ್ ಅವರು ೫೦,೩೪೨ ಮತಗಳನ್ನು ಪಡೆದಿದ್ದರು ಆದರೆ ಈ ಬಾರಿ ದಿ|| ಹೆಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್ ಜೆಡಿಎಸ್‌ನಿಂದ ಸ್ಪರ್ಧೆ ನಡೆಸಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೆ ಆಯ್ಕೆಗೊಂಡಿರುವ ಸಾಕಷ್ಟಿದೆ. ಆದರೂ ಕ್ಷೇತ್ರದ ಮತದಾರ ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬು ದಕ್ಕೆ ನಾಳೆ ಅಧಿಕೃತ ತೆರೆ ಬೀಳಲಿದೆ .

ಆಲೂರು -ಸಕಲೇಶಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್ ಶಾಸಕ ಎಚ್ ಕೆ ಕುಮಾರಸ್ವಾಮಿ ೬೨,೨೬೨ ಮತಗಳನ್ನು ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದರು ಬಿಜೆಪಿಯ ನಾರ್ವೆ ಸೋಮ ಶೇಖರ್ ೫೭,೩೨೦ ಮತಗಳನ್ನು ಪಡೆದಿದ್ದರು ಹಾಗೂ ಕುಮಾರಸ್ವಾಮಿ ಕೇವಲ ೪,೯೬೨ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿಯ ಫಲಿತಾಂಶ ಕ್ಷೇತ್ರದ ಮತದಾರರು ನೀಡುವರು ಎಂಬುದು ಕುತೂಹಲ ಮೂಡಿಸಿದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುರಳಿ ಮೋಹನ್ ಹಾಗೂ ಬಿಜೆಪಿಯಿಂ ದ ಸಿಮೆಂಟ್ ಮಂಜು ಕುಮಾರ ಸ್ವಾಮಿಗೆ ತೀವ್ರ ಪೈಪೋಟಿ ನೀಡಿ ದ್ದಾರೆ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇನ್ನು ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನ ಎ.ಟಿ ರಾಮಸ್ವಾಮಿ , ೮೫,೦೬೪ ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎ.ಮಂಜು ಅವರು ೭೪,೪೧೧ ಮತಗಳನ್ನು ಪಡೆದಿದ್ದರು ಈ ಚುನಾವಣೆಯಲ್ಲಿ ಎ ಟಿ ರಾಮಸ್ವಾಮಿ ೧೦,೬೫೩ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಈ ಬಾರಿ ಎ.ಟಿ ರಾಮಸ್ವಾಮಿಯವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು ಎ.ಮಂಜು ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದಾರೆ ಈ ಬಾರಿಯ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರ ದಲ್ಲಿ ಪಕ್ಷೇತರ ಅಭ್ಯರ್ಥಿ ಎಂಟಿ ಕೃಷ್ಣೆಗೌಡ ಅವರು ಸ್ಪರ್ಧೆ ಮಾಡಿದ್ದು ಫಲಿತಾಂಶ ಕಗ್ಗಂಟಾಗಿದೆ .

ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ಆಯ್ಕೆ ಬಯಸಿ, ಜೆಡಿಎಸ್ ನ ಕೆ ಎಸ್ ಲಿಂಗೇಶ್ ಸ್ಪರ್ಧೆ ಮಾಡಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ ೬೪,೨೬೮ ಮತಗಳ ನ್ನು ಪಡೆದಿದ್ದರು ಪ್ರತಿಸ್ಪರ್ಧಿ ಬಿಜೆಪಿಯ ಎಚ್ ಕೆ ಸುರೇಶ್ ೪೪೫೭೮ ಮತಗಳನ್ನು ಪಡೆದಿದ್ದರು , ಲಿಂಗೇಶ್ ಅವರು ೧೯೬೯೦ ಮತಗಳಿಂದ ಜಯ ದಾಖಲಿಸಿದ್ದರು . ಈ ಬಾರಿ ಬಿಜೆಪಿ ಯಿಂದ ಎಚ್.ಕೆ.? ಸ್ಪರ್ಧೆ ಮಾಡಿದ್ದು ಕಾಂಗ್ರೆಸ್ ನಿಂದ ಬಿ ಶಿವರಾಂ ಸ್ಪರ್ಧೆ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ನಾಳೆಯ ಫಲಿತಾಂಶ ಕುತೂಹಲ ಮೂಡಿಸಿದೆ.

ಒಟ್ಟಾರೆ ನಾಳೆ ನಡೆಯುವ ಮತ ಎಣಿಕೆ ಫಲಿತಾಂಶ ಹಾಲಿ ಇರುವ ಶಾಸಕರಿಗೆ ಮತ್ತೊಮ್ಮೆ ಅಧಿಕಾರ ಹಿಡಿಯಲು ಅವಕಾಶ ಮಾಡಿಕೊಡಲಿ ದೆಯೇ ಹಾಗೂ ಹೊಸ ಮುಖಗಳನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ ಜನರು ಆಶೀರ್ವಾದ ನೀಡಲಿದ್ದಾ ರೆಯೇ ಎಂಬ ಕುತೂಹಲ ಮುಂದು ವರೆದಿದೆ. ನಾಳೆ ನಡೆಯುವ ಮತ ಎಣಿಕೆ ನಂತರ ಎಲ್ಲಾ ಗೊಂದಲಕ್ಕೆ ತೆರೆ ಬೀಳಲಿದೆ.

Sneha Gowda

Recent Posts

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗದಲ್ಲಿ ರಾಘವೇಂದ್ರ ಗೆಲ್ಲುತ್ತಾರೆ : ಹೆಚ್‌ಡಿಕೆ

ಒಗ್ಗಟ್ಟಾಗಿ ಕೆಲಸ ಮಾಡಿದರೆ ಶಿವಮೊಗ್ಗ ಗ್ರಾಮಾಂತರದಲ್ಲಿ ಒಂದು ಲಕ್ಷದ ಮತ ದಿಂದ ರಾಘವೇಂದ್ರ ಗೆಲ್ಲಲಿದ್ದಾರೆ ಎಂದು ಮಜಿಮುಖ್ಯಮಂತ್ರಿ ಕುಮಾರ ಸ್ವಾಮಿ…

5 hours ago

ಪ್ರಜ್ವಲ್ ರೇವಣ್ಣ ಉಚ್ಚಾಟನೆ : ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ

ಪ್ರಜ್ವಲ್ ರೇವಣ್ಣ ಉಚ್ಚಾಟನೆ ಬಗ್ಗೆ ಮಾಜಿ ಸಿಎಂ ಕುಮಾರ ಸ್ವಾಮಿ ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆಯೇ ಈ ಬಗ್ಗೆ ನಮ್ಮ…

6 hours ago

ಬಿಜೆಪಿ ಅಭ್ಯರ್ಥಿ ಜೈಲಿಗೆ ಹೋಗುವ ದಿನಕ್ಕೆ ಕ್ಷಣಗಣನೆ : ಪ್ರಿಯಾಂಕಾ ಗಾಂಧಿ

ಒಲಿಂಪಿಕ್ಸ್ ಆಟಗಾರರ ಮೇಲೆ ಕಿರುಕುಳವಾಗಿತ್ತು, ಮಹಿಳೆಯ ಮೇಲೆ ಅತ್ಯಾಚಾರವಾಗಿತ್ತು. ಆಗ ಪ್ರಧಾನಿ ಮೋದಿ‌ ಸುಮ್ಮನೆ ಇದ್ದರಲ್ಲದೆ ಇಂದು ಕರ್ನಾಟಕದಲ್ಲಿ ಸಾವಿರಾರು…

6 hours ago

ಕಾಂಗ್ರೆಸ್ ಗ್ಯಾರಂಟಿ ಕಾರ್ಡ ವಿತರಣೆ ಮಾಡಿದ ಕಾರ್ಯಕರ್ತರು

ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಗೆಲವು ನಿಶ್ಚಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಶ್ವರಾಧ್ಯ ದಳವಾಯಿ ಸುಂಬಡ ಅವರು…

6 hours ago

ದೇಶ ಭಕ್ತಿಯನ್ನು ಮೋದಿಯವರಿಗೆ ಗುತ್ತಿಗೆ ಕೊಟ್ಟಿಲ್ಲ: ಲಕ್ಷ್ಮಣ ಸವದಿ

ದೇಶ ಭಕ್ತಿಯನ್ನು ಈ ಬಿಜೆಪಿಯವರಿಗೆ ಹಾಗೂ ಪ್ರಧಾನಿಗೆ ಗುತ್ತಿಗೆ ಕೊಟ್ಟಿಲ್ಲ. ನಾವು ಕೂಡ ದೇಶ ಭಕ್ತರೇ ಎಂದು ಮಾಜಿ ಮುಖ್ಯಮಂತ್ರಿ…

6 hours ago

ಶನಿವಾರಸಂತೆ ಹಲ್ಲೆ ಪ್ರಕರಣ : ನಿಷ್ಪಕ್ಷಪಾತ ತನಿಖೆಗೆ ಹನೀಫ್ ಒತ್ತಾಯ

ಕಳೆದ ಚುನಾವಣಾ ದಿನದಂದು ಕ್ಷುಲ್ಲಕ ವಿಚಾರವಾಗಿ ಎರಡು ರಾಜಕೀಯ ಪಕ್ಷಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಷ್ಪಕ್ಷಪಾತವಾದ…

6 hours ago