ಮಂಗಳೂರು, : ರೈಲಿನಲ್ಲಿ ಚಲಿಸುತ್ತಾ ಪಶ್ಚಿಮ ಘಟ್ಟದ ಅದ್ಭುತ ಪೃಕೃತಿಯ ಸೌಂದರ್ಯವನ್ನು ಸವಿಯುವ ದಿನ ಹತ್ತಿರ ಬಂದಿದೆ. ಕೇಂದ್ರ ರೈಲ್ವೇ ಇಲಾಖೆಯ ಬಹುನಿರೀಕ್ಷೆಯ ವಿಸ್ಟಾಡಾಮ್ ಕೋಚ್ ಮಂಗಳೂರು- ಬೆಂಗಳೂರು ರೈಲಿಗೆ ಜುಲೈ 7ರಿಂದ ಜೋಡಣೆಯಾಗಲಿದೆ.ಸಂಪೂರ್ಣ ಗಾಜಿನ ಛಾವಣಿಯನ್ನು ಹೊಂದಿರುವ ಈ ಕೋಚ್ ಮಂಗಳೂರು- ಬೆಂಗಳೂರು ರೈಲ್ವೇ ದಾರಿಯಲ್ಲಿ ಸಿಗುವ ಪಶ್ಚಿಮ ಘಟ್ಟದ ಅದ್ಭುತ ಸೌಂದರ್ಯವನ್ನು ಉಣಬಡಿಸುತ್ತದೆ.
ವಿಸ್ಟಾಡಾಮ್ ಕೋಚ್ 180 ಡಿಗ್ರಿ ಕೋನದಲ್ಲಿ ಸುತ್ತುವ 40 ಸುಖಾಸೀನವನ್ನು ಹೊಂದಿದ್ದು, ಈ ಜುಲೈ 3ರಿಂದ ಈ ಕೋಚ್ಗೆ ಟಿಕೆಟ್ ನೋಂದಾವಣಿ ಮಾಡಿಕೊಳ್ಳಬಹುದಾಗಿದೆ. ಕೋಚ್ನಲ್ಲಿ ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಓವನ್, ಪುಟ್ಟ ರೆಫ್ರಿಜೇಟರ್ಗಳು ಲಭ್ಯವಿರಲಿದೆ.ಒಬ್ಬರಿಗೆ 1,600 ರೂಪಾಯಿ ಟಿಕೆಟ್ ದರವನ್ನು ನಿಗದಿಪಡಿಸಲಾಗಿದ್ದು, ವಿಸ್ಟಾಡಾಮ್ ಕೋಚ್ನ ಮೂಲ ದರ 1470 ರೂಪಾಯಿ ದರ ಇದ್ದರೂ, ಶೇ.5 ಜಿಎಸ್ಟಿ ದರ, 60 ರೂಪಾಯಿ ರಿಸರ್ವೇಶನ್ ದರ, ಸೂಪರ್ಫಾಸ್ಟ್ ಚಾರ್ಜ್ ದರ 75 ರೂ. ದರ ಸೇರಿ ಒಟ್ಟು 1600 ರೂಪಾಯಿ ದರವಾಗುತ್ತದೆ.ವಾರಕ್ಕೆ ಮೂರು ಬಾರಿ ಚಲಿಸುವ ನಂ. 06211/ 06212 ಯಶವಂತಪುರ- ಕಾರವಾರ ವಿಶೇಷ ರೈಲು, ಜುಲೈ 7 ರಿಂದ ಯಶವಂತಪುರದಿಂದ ಮತ್ತು ಜುಲೈ 8 ರಿಂದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಿಂದ ವಿಸ್ಟಾಡಾಮ್ ಕೋಚ್ನ ನೂತನ ಪಯಣ ಆರಂಭಿಸಲಿದೆ.
ಸ್ಯಾಮ್ ಪಿತ್ರೋಡಾ ಅವರ ಜನಾಂಗೀಯ ಟೀಕೆಗೆ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ, ನಾನು ಡಾರ್ಕ್ ಸ್ಕಿನ್ ಭಾರತೀಯ ಎಂದು…
ಜಿಲ್ಲೆಯ ಬಹುತೇಕ ಕಡೆ ಇಂದು ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿದಿದೆ. ಹಲವು ದಿನಗಳಿಂದ ವಿಪರೀತ ತಾಪಮಾನದಿಂದ ಬಸವಳಿದಿದ್ದ ಜನರಿಗೆ…
ರೈತರಿಗೆ ಆಗಾಗ್ಗೆ ಉಪಟಳ ನೀಡುತ್ತಾ ತಲೆನೋವಾಗಿದ್ದ ಪುಂಡಾನೆಯನ್ನು ಸುಮಾರು ಇಪ್ಪತೈದು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅರಣ್ಯಾಧಿಕಾರಿಗಳು ಗೋಪಾಲಸ್ವಾಮಿ ಬೆಟ್ಟದ…
ಧಾರವಾಡದ ಐಐಟಿ ನೂತನ ನಿರ್ದೇಶಕರಾಗಿ ಪ್ರೊ. ಎಸ್.ಆರ್.ಮಹಾದೇವ ಪ್ರಸನ್ನ ನೇಮಕಗೊಂಡಿದ್ದಾರೆ. 2023 ರಲ್ಲಿ ಭಾರತದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ…
ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ.ವಸಂತ ಬಂಗೇರ (79)…
ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ಮದ್ದೂರು ವಲಯದಲ್ಲಿ ಕಳೆದ ಏಪ್ರಿಲ್ 24 ರಂದು ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ…