News Karnataka Kannada
Tuesday, April 30 2024
ಹಾಸನ

ಹಾಸನ: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ

Murder
Photo Credit :

ಹಾಸನ ( ಫೆ. 09) :  ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕಾವಲು ಹೊಸೂರಿನಲ್ಲಿ ವ್ಯಕ್ತಿಯ ಕೊಲೆ ಪ್ರಕರಣವನ್ನು ಪೊಲೀಸರು ಪತ್ತೆ ಮಾಡಿದ್ದು ಪ್ರೇಮಿ ಜೊತೆ ಸೇರಿ ಗಂಡನನ್ನೇ ಕೊಲ್ಲಿಸಿದ್ದ ಖತರ್ನಾಕ್ ಪತ್ನಿಯನ್ನು  ಬಂಧಿಸಲಾಗಿದೆ.

ಜನವರಿ 31 ರಂದು ಮಕ್ಕಳನ್ನು ಶಾಲೆಯಿಂದ ಕರೆತರಲು ತೆರಳೊ ವೇಳೆ ಬೈಕ್ ಅಡ್ಡಗಟ್ಟಿ ಆನಂದ್ ಎಂಬುವರ ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿ ನನಗೇನು ಗೊತ್ತಿಲ್ಲ ಎನ್ನುತ್ತಿದ್ದವಳಿಂದ ಇದೀಗ ಪೊಲೀಸರು ಸತ್ಯ ಬಾಯಿ ಬಿಡಿಸಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಕಾವಲು ಹೊಸೂರು ಗ್ರಾಮದ ಆನಂದ್ (42) ಹತ್ಯೆಯಾಗಿತ್ತು. ಕೊಲೆ ಆರೋಪದಲ್ಲಿ ಪತ್ನಿ ಸುನಿತಾ ಹಾಗೂ ಆಕೆಯ ಪ್ರಿಯಕರನ ಬಂಧನವಾಗಿದೆ.

ಯೋಗ ಕ್ಲಾಸ್ ನಲ್ಲಿ ಪರಿಚಯವಾಗಿದ್ದ ನವೀನ ಜೊತೆ ಸುನಿತಾ ಲವ್ವಿ ಡವ್ವಿ  ಶುರುಹಚ್ಚಿಕೊಂಡಿದ್ದಳು. ಗಂಡನಿಗೆ ವಿಚಾರ ಗೊತ್ತಾಗಿ ಆಡ್ಡಿಯಾಗುತ್ತಾನೆ ಎಂದು ಭಾವಿಸಿ ಗಂಡನನ್ನೇ ಹತ್ಯೆ ಮಾಡಿಸಿದ್ದಾಳೆ. ಬೆಂಗಳೂರಿನ ಇಬ್ಬರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ.

ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 2014 ರಲ್ಲಿ ಡ್ರೈವಿಂಗ್ ಕಲಿಯಲು ಹೋಗಿ ಮಹಿಳೆ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ಸುನಿತಾ ಈಗ ಗಂಡನ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾಳೆ. ಕೊಲೆ ಕೇಸ್ ನಲ್ಲಿ ಬಿಡುಗಡೆಯಾಗಿ ಮನೆಯಲ್ಲಿದ್ದ ವೇಳೆ ಇನ್ನೊಬ್ಬನ ಜೊತೆ ಸ್ನೇಹ ಬೆಳೆಸಿದ್ದಳು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು