ನಟ ಪುನೀತ್​ ರಾಜ್​ಕುಮಾರ್ ಅಗಲಿಕೆ ನೋವನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿದ್ದ ಅಭಿಮಾನಿ ಆತ್ಮಹತ್ಯೆ

ಹಾಸನ : ಡಾ.ರಾಜ್​ಕುಮಾರ್​ ಸಂಘದ ಹಾಸನ ಅಧ್ಯಕ್ಷರಾಗಿದ್ದ ದಿ.ಹಾ.ರಾ.ನಾಗರಾಜ್​ ಅವರ ಕಿರಿಯ ಪುತ್ರ ಮಯೂರ ನಾಗರಾಜ್​ (34) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ಪುನೀತ್​ ರಾಜ್​ಕುಮಾರ್ ಅವರ ಅಗಲಿಕೆ ನೋವನ್ನು ತಾಳಲಾರದೆ ಖಿನ್ನತೆಗೆ ಒಳಗಾಗಿ ಮಯೂರ ಸಾವಿನ ಮನೆಯ ಕದತಟ್ಟಿದ್ದಾರೆ ಎನ್ನಲಾಗಿದೆ.

ಪುನೀತ್​ ನಿಧನರಾಗಿ 25 ದಿನ ಕಳೆದರೂ ಅಭಿಮಾನಗಳ ದುಃಖ, ನೋವು ಕಿಂಚಿತ್ತೂ ಕಡಿಮೆ ಆಗಿಲ್ಲ. ಇಂತಹ ವಿಷಾದನೀಯ ಸ್ಥಿತಿಯಲ್ಲಿ ಅಭಿಮಾನಿಗಳು ಧೈರ್ಯಗೆಡಬಾರದು, ತಾಳ್ಮೆ ತಂದುಕೊಳ್ಳಬೇಕು. ಪುನೀತ್​ ಅವರು ಎಂದೂ ಇಂತಹದ್ದನ್ನು ಸಹಿಸಲ್ಲ ಎಂದು ಸ್ವತಃ ಶಿವರಾಜ್​ಕುಮಾರ್ ಮತ್ತು ರಾಘವೇಂದ್ರ ರಾಜ್​ಕುಮಾರ್​ ಪದೇಪದೆ ಮನವಿ ಮಾಡುತ್ತಿದ್ದರೂ ಅಭಿಮಾನಿಗಳ ಆತ್ಮಹತ್ಯೆ ಪ್ರಕರಣ ಮುಂದುವರಿದಿದೆ.

ಪುನೀತ್​ ಪುನೀತ್​ ಅಗಲಿದ ದಿನದಿಂದಲೂ ಮಯೂರ ನಾಗರಾಜ್​ ಖಿನ್ನತೆಗೆ ಜಾರಿದ್ದರು. ಸರಿಯಾಗಿ ತಿಂಡಿ-ಊಟ ಸಹ ಮಾಡುತ್ತಿರಲಿಲ್ಲ. ಪದೇ ಪದೆ ಅಪ್ಪು ಸಾವಿನ ಬಗ್ಗೆ ನೋವು ವ್ಯಕ್ತಪಡಿಸುತ್ತಲೇ ಇದ್ದರಂತೆ. ಬುಧವಾರ ರಾಜ್​ಕುಮಾರ್​ ನಗರದ ತನ್ನ ಮನೆಯಲ್ಲಿ ತಾಯಿ ಹಾಗೂ ಪತ್ನಿ ಇದ್ದ ವೇಳೆಯೇ ಕೊಠಡಿಗೆ ಹೋಗಿ ಮಯೂರ ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಕುಟುಂಬಸ್ಥರು ನೆರೆಯವರ ಸಹಕಾರ ಪಡೆದು ಮಯೂರ ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ಪೆನ್ಷನ್​ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gayathri SG

Recent Posts

ಈ ನಾಯಕನ ರಾಸಲೀಲೆಗೆ ವರ್ಷಕ್ಕೆ 25 ಹುಡುಗಿಯರು ಬೇಕಂತೆ!

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ತನ್ನ ವಿಚಿತ್ರ ನಿರ್ಧಾರಗಳಿಂದಲೇ ಸುದ್ದಿಯಾದವರು.ಸದ್ಯ ಇವರ ಮೇಲೆ ಯೆನ್ಮಿ ಪಾರ್ಕ್…

2 mins ago

ಕಬಕದಲ್ಲಿ ಸರಣಿ ಅಪಘಾತ: ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆದ ಕಾರು

ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಕಾರು ಡಿಕ್ಕಿಯಾದ…

11 mins ago

ಸಂಸದ ಪ್ರಜ್ವಲ್‌ ಗೆ ಅಭಿಮಾನಿಯಿಂದ ಶುಭಾಶಯ ಪತ್ರ

ಸಂಸದ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳು ದೇಶಾದ್ಯಂತ ಭಾರೀ ಚರ್ಚೆ ಯಾಗುತ್ತಿದ್ದು, ಈ ನಡುವೆ ಅಭಿಮಾನಿಯೊಬ್ಬ ಪ್ರಜ್ವಲ್‌…

23 mins ago

ಆಕ್ಸಿಜನ್ ಕೊರತೆ ದುರಂತಕ್ಕೆ 3 ವರ್ಷ : ಸಂತ್ರಸ್ಥರಿಗೆ ಸಿಗದ ನ್ಯಾಯ

ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರ ರಾತ್ರಿ ಆಮ್ಲಜನಕ ಸಕಾಲದಲ್ಲಿ ಪೂರೈಕೆಯಾಗದೆ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ…

40 mins ago

ಮಠದ ಆಸ್ತಿ ಹೊಡೆದವರು ಶಾಸಕರಾಗಲು ಯೋಗ್ಯರೇ?: ಸಚಿವ ಭಗವಂತ ಖೂಬಾ

ಭಾಲ್ಕಿ ಹಿರೇಮಠದ ಪೂಜ್ಯರು, ಈ ಭಾಗದ ನಡೆದಾಡುವ ದೇವರೆಂಬ ಗೌರವಕ್ಕೆ ಪಾತ್ರರಾಗಿರುವ ಚನ್ನಬಸವ ಪಟ್ಟದ್ದೇವರು ಬೆವರು ಸುರಿಸಿ ಕಟ್ಟಿದ ಶಾಂತಿವರ್ಧಕ…

57 mins ago

ಲೋಕಸಭಾ ಚುನಾವಣೆ: ರಾಯ್‌ ಬರೇಲಿಯಲ್ಲಿ ರಾಹುಲ್, ಅಮೇಥಿಯಿಂದ ಕಿಶೋರಿ ಲಾಲ್‌ ಶರ್ಮಾ ಸ್ಪರ್ಧೆ

ಲೋಕಸಭಾ ಚುನಾವಣೆಯಲ್ಲಿ ರಾಯ್‌ ಬರೇಲಿ ಹಾಗೂ ಅಮೇಥಿ ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ನೇಮಕ ಮಾಡಿದೆ. ಕಾಂಗ್ರೆಸ್‌ ನಾಯಕ ರಾಹುಲ್…

1 hour ago