ಗುಂಡ್ಲುಪೇಟೆ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಟ್ಟಣದ ಶ್ರೀ ಕೃಷ್ಣ ಬಟ್ಟೆ ಅಂಗಡಿಯಲ್ಲಿ ವಿವಿಧ ಉಡುಪುಗಳಿಗೆ ಕೇವಲ 76 ರೂ ದರ ನಿಗದಿ ಮಾಡಿ ಕೊಡುಗೆ ನೀಡಿರುವ ಹಿನ್ನಲೆಯಲ್ಲಿ ಅದನ್ನು ಪಡೆಯಲು ಮಹಿಳೆಯರು ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಪಟ್ಟಣದಲ್ಲಿ ದೊಡ್ಡ ಬೀದಿಯಲ್ಲಿ ಇರುವ ಶ್ರೀ ಕೃಷ್ಣ ಟೆಕ್ಸ್ಟ್ ಟೈಲ್ಸ್ ತಾಲೂಕಿಗೆ ದೊಡ್ಡ ಮಳಿಗೆಯಾಗಿದ್ದು, ಆಗಾಗ್ಗೆ ಕೊಡುಗೆಗಳನ್ನು ನೀಡಿ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಅದೇ ರೀತಿ ಈ ಬಾರಿ 76ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ 76 ರೂ. ಗೆ ವಿವಿಧ ಉಡುಪುಗಳು ಲಭ್ಯ ಎಂದು ಬೋರ್ಡ್ ಹಾಕಿರುವುದೇ ತಡ ಎಲ್ಲೆಡೆಯಿಂದ ಮಹಿಳೆಯರು ಅಂಗಡಿ ಮುಂದೆ ಜಮಾಯಿಸಿದ್ದಾರೆ.
1299 ರೂಪಾಯಿವುಳ್ಳ ಒಂದು ಬನಾರಸ್ ಸೀರೆ ಕೊಂಡರೆ ಒಂದು ಉಚಿತ ಹಾಗೂ 1499 ಬನಾರಸ್ ಸ್ಟೋನ್ ವರ್ಕ್ ಸೀರೆ ಕೊಂಡರೆ ಒಂದು ಉಚಿತ, ಮಹಿಳೆಯರ ಉಡುಪುಗಳು, ಪುರುಷರ ಉಡುಪುಗಳು ಹಾಗೂ ಮಕ್ಕಳ ಉಡುಪುಗಳಿಗೆ 76 ರೂ ನಲ್ಲಿ ನೀಡುತ್ತಿದ್ದು, ಮಹಿಳೆಯರು ಬಿಸಿಲಿನ ನಡುವೆಯೂ ಕಾದು ತಮಗೆ ಬೇಕಾದ ಉಡುಪನ್ನು ಕೊಂಡುಕೊಳ್ಳುತಿದ್ದ ದೃಶ್ಯ ಕಂಡು ಬಂದಿತು.
ಇದರಿಂದಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಮಳಿಗೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡುವಂತಾಯಿತು ಹಾಗೂ ಕೆಲಹೊತ್ತು ಅಂಗಡಿ ಮುಚ್ಚಿ ಮತ್ತೆ ತೆರಯಲಾಯಿತು ಇದರಿಂದ ಒಬ್ಬ ಪೊಲೀಸ್ ಸಿಬ್ಬಂದಿ ನಿಯೋಜಿಸಿದ್ದು ಎಲ್ಲರನ್ನೂ ಸಾಲಿನಿಂದ ಕಳುಹಿಸಿದ ಘಟನೆಯೂ ನಡೆಯಿತು.