ಚಾಮರಾಜನಗರ: ಲೋಕಸಭಾ ಚುನಾವಣೆಯ ಮತದಾರರ ರಾಯಭಾರಿಗಳಾಗಿ ಚಿತ್ರನಟ ಟಗರು ಪಲ್ಯ ಖ್ಯಾತಿಯ ನಾಗಭೂಷಣ್ ಮತ್ತು ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಕಾಣಿಸಿಕೊಳ್ಳಲಿದ್ದಾರೆ.
ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಹೆಚ್ಚಳಕ್ಕೆ ಮೂವರನ್ನ ರಾಯಬಾರಿಗಳನ್ನಾಗಿ ನೇಮಕ ಮಾಡಲಾಗಿದೆ, ಟಗರು ಪಲ್ಯ ಚಿತ್ರದ ನಾಗಭೂಷಣ್ , ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮತ್ತು ಲಿಂಗತ್ವ ಅಲ್ಪಸಂಖ್ಯಾತೆ ಹೋರಾಟಗಾರ್ತಿ ದೀಪಾ ಬುದ್ದೆ ಅವರನ್ನ ನೇಮಕ ಮಾಡಲಾಗಿದೆ. ವಿಶೇಷವಾಗಿ ಲಿಂಗತ್ವ ಅಲ್ಪಸಂಖ್ಯಾತೆ ಹೋರಾಟಗಾರ್ತಿ ಹಾಗೂ ಪಿಎಚ್ ಡಿ ಸಂಶೋಧಕಿ ದೀಪಾ ಬುದ್ದೆ ಲಿಂಗತ್ವ ಅಲ್ಪಸಂಖ್ಯಾತೆಯರು ಮತದಾನದಿಂದ ದೂರ ಉಳಿಯದಂತೆ ಕಿವಿ ಮಾತು ಹೇಳುವ ಮೂಲಕ ಪ್ರೇರಣೆ ನೀಡಿದ್ದಾರೆ.