ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯು ಬರಪೀಡಿತ ಜಿಲ್ಲೆ ಎಂದು ಘೋಷಣೆಯಾದ ಬಳಿಕ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವುದನ್ನ ಅರಿತ ಸರ್ಕಾರ ಹೊರರಾಜ್ಯಗಳಿಗೆ ಮೇವು ಸಾಗಾಟವನ್ನ ನಿರ್ಬಂಧಿಸಿ ಆದೇಶಿಸಿತ್ತು ಅದರಂತೆ ಜಿಲ್ಲಾಧಿಕಾರಿಗಳು ಸಹ ಕಟ್ಟಪ್ಪಣೆ ಹೊರಡಿಸಿದ್ದು ಕೇವಲ ಬೂಟಾಟಿಕೆಗೆ ಸೀಮಿತವಾಗಿದ್ದು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮೇವು ಸಾಗಿಸಲಾಗ್ತಿದೆ.
ಸರ್ಕಾರ ಮತ್ತು ಜಿಲ್ಲಾಡಳಿತ ನೆರೆಯ ಕೇರಳ ಮತ್ತು ತಮಿಳುನಾಡಿಗೆ ಮೇವನ್ನ ಸಾಗಣೆ ಮಾಡಬಾರದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಜೋಳದ ಕಡ್ಡಿ ಇನ್ನಿತರ ಮೇವನ್ನ ಇಲ್ಲಿಯೇ ಬಳಕೆ ಮಾಡಿಕೊಳ್ಳಬೇಕು , ಯಾವುದೇ ಕಾರಣಕ್ಕೂ ಕೇರಳ ಅಥವಾ ತಮಿಳುನಾಡಿಗೆ ಸಾಗಾಟ ಮಾಡಬಾರದು ಅಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ , ಚಾಮರಾಜನಗರ ಜಿಲ್ಲೆಯ ಎಲ್ಲಾ ಗಡಿಯಲ್ಲೂ ಕಟ್ಟೆಚ್ಚರವಹಿಸುವಂತೆ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿತ್ತು ಆದ್ರೆ ಗುಂಡ್ಲುಪೇಟೆಯಿಂದ ನೆರೆಯ ಕೇರಳಕ್ಕೆ ಎಗ್ಗಿಲ್ಲದೆ ಮೇವು ಸಾಗಣೆ ಆಗ್ತಿದೆ, ಟಾಟಾ ಏಸ್ , ಈಚರ್ ವಾಹನಗಳಲ್ಲಿ ಲೋಡ್ ಮಾಡಿ , ಮೇವು ಹೊರಗೆ ಕಾಣಿಸದಂತೆ ಟಾರ್ಪಲ್ ಹೊದಿಸಲಾಗ್ತಿದೆ. ನೆನ್ನೆಯಷ್ಟೇ ಮದ್ದೂರು ಪೊಲೀಸ್ ಚೆಕ್ಪೋಸ್ಟ್ ಬಳಿ ಜೋಳದ ಕಡ್ಡಿ ತುಂಬಿದ್ದ ಈಚರ್ ವಾಹನವನ್ನ ವಾಪಾಸ್ ಕಳುಹಿಸಿದ್ದಾರೆ , ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಾಗಣೆ ಮಾಡ್ತಿದ್ದ ಲಾರಿಯನ್ನ ಜಪ್ತಿ ಮಾಡಿ ಕೇಸ್ ದಾಖಲಿಸಬೇಕಿದ್ದ ಪೊಲೀಸ್ ಇಲಾಖೆ ಸುಮ್ಮನಾಗಿದ್ದೇಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಒಟ್ಟಾರೆಯಾಗಿ ಅಕ್ರಮ ಮೇವು ಸಾಗಣೆಯಲ್ಲಿ ಅಧಿಕಾರಿಗಳು ಶ್ಯಾಮಿಲಾಗಿದ್ದಾರೆಯೇ ಎಂಬ ಅನುಮಾನಗಳು ಈ ಘಟನೆಯಿಂದ ಹೊರಬರತೊಡಗಿದೆ.