News Karnataka Kannada
Tuesday, April 30 2024
ಚಾಮರಾಜನಗರ

ಕೇರಳ ರಾಜ್ಯಕ್ಕೆ ಅಕ್ರಮವಾಗಿ ಜಾನುವಾರುಗಳಿಗೆ ಮೇವು ಸಾಗಾಟ

ಚಾಮರಾಜನಗರ ಜಿಲ್ಲೆಯು ಬರಪೀಡಿತ ಜಿಲ್ಲೆ ಎಂದು ಘೋಷಣೆಯಾದ ಬಳಿಕ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವುದನ್ನ ಅರಿತ ಸರ್ಕಾರ ಹೊರರಾಜ್ಯಗಳಿಗೆ ಮೇವು ಸಾಗಾಟವನ್ನ ನಿರ್ಬಂಧಿಸಿ ಆದೇಶಿಸಿತ್ತು ಅದರಂತೆ ಜಿಲ್ಲಾಧಿಕಾರಿಗಳು ಸಹ ಕಟ್ಟಪ್ಪಣೆ ಹೊರಡಿಸಿದ್ದು ಕೇವಲ ಬೂಟಾಟಿಕೆಗೆ ಸೀಮಿತವಾಗಿದ್ದು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮೇವು ಸಾಗಿಸಲಾಗ್ತಿದೆ.
Photo Credit : News Kannada

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯು ಬರಪೀಡಿತ ಜಿಲ್ಲೆ ಎಂದು ಘೋಷಣೆಯಾದ ಬಳಿಕ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವುದನ್ನ ಅರಿತ ಸರ್ಕಾರ ಹೊರರಾಜ್ಯಗಳಿಗೆ ಮೇವು ಸಾಗಾಟವನ್ನ ನಿರ್ಬಂಧಿಸಿ ಆದೇಶಿಸಿತ್ತು ಅದರಂತೆ ಜಿಲ್ಲಾಧಿಕಾರಿಗಳು ಸಹ ಕಟ್ಟಪ್ಪಣೆ ಹೊರಡಿಸಿದ್ದು ಕೇವಲ ಬೂಟಾಟಿಕೆಗೆ ಸೀಮಿತವಾಗಿದ್ದು ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮೇವು ಸಾಗಿಸಲಾಗ್ತಿದೆ.

ಸರ್ಕಾರ ಮತ್ತು ಜಿಲ್ಲಾಡಳಿತ ನೆರೆಯ ಕೇರಳ ಮತ್ತು ತಮಿಳುನಾಡಿಗೆ ಮೇವನ್ನ ಸಾಗಣೆ ಮಾಡಬಾರದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದ್ದು ಜೋಳದ ಕಡ್ಡಿ ಇನ್ನಿತರ ಮೇವನ್ನ ಇಲ್ಲಿಯೇ ಬಳಕೆ ಮಾಡಿಕೊಳ್ಳಬೇಕು , ಯಾವುದೇ ಕಾರಣಕ್ಕೂ ಕೇರಳ ಅಥವಾ ತಮಿಳುನಾಡಿಗೆ ಸಾಗಾಟ ಮಾಡಬಾರದು ಅಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಕಾನೂನು ರೀತ್ಯಾ ಕ್ರಮ ಕೈಗೊಳ್ಳಿ , ಚಾಮರಾಜನಗರ ಜಿಲ್ಲೆಯ ಎಲ್ಲಾ ಗಡಿಯಲ್ಲೂ ಕಟ್ಟೆಚ್ಚರವಹಿಸುವಂತೆ ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿತ್ತು ಆದ್ರೆ ಗುಂಡ್ಲುಪೇಟೆಯಿಂದ ನೆರೆಯ ಕೇರಳಕ್ಕೆ ಎಗ್ಗಿಲ್ಲದೆ ಮೇವು ಸಾಗಣೆ ಆಗ್ತಿದೆ, ಟಾಟಾ ಏಸ್ , ಈಚರ್ ವಾಹನಗಳಲ್ಲಿ ಲೋಡ್ ಮಾಡಿ , ಮೇವು ಹೊರಗೆ ಕಾಣಿಸದಂತೆ ಟಾರ್ಪಲ್ ಹೊದಿಸಲಾಗ್ತಿದೆ. ನೆನ್ನೆಯಷ್ಟೇ ಮದ್ದೂರು ಪೊಲೀಸ್ ಚೆಕ್ಪೋಸ್ಟ್ ಬಳಿ ಜೋಳದ ಕಡ್ಡಿ ತುಂಬಿದ್ದ ಈಚರ್ ವಾಹನವನ್ನ ವಾಪಾಸ್ ಕಳುಹಿಸಿದ್ದಾರೆ , ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಾಗಣೆ ಮಾಡ್ತಿದ್ದ ಲಾರಿಯನ್ನ ಜಪ್ತಿ ಮಾಡಿ ಕೇಸ್ ದಾಖಲಿಸಬೇಕಿದ್ದ ಪೊಲೀಸ್ ಇಲಾಖೆ ಸುಮ್ಮನಾಗಿದ್ದೇಕೆ ಎಂಬ ಪ್ರಶ್ನೆ ಕಾಡತೊಡಗಿದೆ. ಒಟ್ಟಾರೆಯಾಗಿ ಅಕ್ರಮ ಮೇವು ಸಾಗಣೆಯಲ್ಲಿ ಅಧಿಕಾರಿಗಳು ಶ್ಯಾಮಿಲಾಗಿದ್ದಾರೆಯೇ ಎಂಬ ಅನುಮಾನಗಳು ಈ ಘಟನೆಯಿಂದ ಹೊರಬರತೊಡಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು