News Karnataka Kannada
Wednesday, May 01 2024
ಚಾಮರಾಜನಗರ

ಚಾಮರಾಜನಗರದ ಗಡಿಭಾಗದಲ್ಲಿ ಪೊಲೀಸ್ ಬಂದೋಬಸ್ತ್

Police bandobast at Chamarajanagar border
Photo Credit : By Author

ಚಾಮರಾಜನಗರ: ಕಾವೇರಿ ನೀರು ಹೋರಾಟದ ಕಿಚ್ಚು  ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲೂ  ತಟ್ಟಿದ್ದು,  ಎರಡೂ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಗೆ  ಹೊಂದಿಕೊಂಡಿರುವ ಅಂತರ ರಾಜ್ಯ ಗಡಿಯಲ್ಲಿ ಬಿಗಿ  ಪೊಲೀಸ್  ಬಂದೂಬಸ್ತ್ ಮಾಡಲಾಗಿದೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರ್ನಾಟಕದ ಬೆಂಗಳೂರು ಸೇರಿದಂತೆ ಹಲವೆಡೆ ಬಂದ್ ಮತ್ತು  ಪ್ರತಿಭಟನೆ  ನಡೆಸಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ತಮಿಳುನಾಡು-ಕರ್ನಾಟಕ  ಗಡಿಭಾಗದ  ಹಾಸನೂರು  ಕಾರ್ಯಪಾಳ್ಯ ಚೆಕ್ ಪೋಸ್ಟ್ ಬಳಿ ತಮಿಳುನಾಡು ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ತಮಿಳುನಾಡಿನಿಂದ ಕರ್ನಾಟಕ ರಾಜ್ಯಕ್ಕೆ ತೆರಳುವ ವಾಹನಗಳಿಗೆ ಅನುಮತಿ ನಿರಾಕರಿಸಲಾಗಿದೆ.

ಸತ್ಯಮಂಗಲ ಭಾಗದಿಂದ ತಾಳವಾಡಿಗೆ ಬರುವ ಬಸ್ಸು, ಕಾರು ಸೇರಿದಂತೆ ವಾಹನಗಳು ತಮಿಳುನಾಡು ಕರ್ನಾಟಕ ರಾಜ್ಯ  ಗಡಿಯಲ್ಲಿರುವ ಪುಣಜನೂರು ಚೆಕ್ ಪೋಸ್ಟ್ ಮೂಲಕ ದಿಂಬಂ ತಲಮಲೈ ಸೇರಿದಂತೆ ಅರಣ್ಯ ಪ್ರದೇಶದ ಮೂಲಕ  ಹೋಗುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.  ದಿಂಬಂ ತಲಮಲೈ ಅರಣ್ಯ ಪ್ರದೇಶದ ಮೂಲಕ ಸತ್ಯಮಂಗಲಂ,  ಕೊಯಮತ್ತೂರು, ತಿರುಪುರ್ ಮತ್ತು ಇತರ ಪ್ರದೇಶಗಳಿಗೆ ಸರ್ಕಾರಿ ಬಸ್ ಗಳು ಸಹ ಓಡುತ್ತಿವೆ.  ರಾಜ್ಯದ ಗಡಿಯಲ್ಲಿ  ತಮಿಳುನಾಡು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು