ಚನ್ನರಾಯಪಟ್ಟಣ: ಪಟ್ಟಣದಲ್ಲಿ ಶ್ರೀರಾಮ ನವಮಿ ದಿವಸ ಮೆರ ವಣಿಗೆಯಲ್ಲಿ ಹಲ್ಲೆಯಾಗಿರುವ ಹಿಂದೂ ಯುವಕರ ಆರೋಗ್ಯ ವಿಚಾರಿಸದೆ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಹಿಂದೂ ವಿರೋಧಿ ನಿಲುವು ತೋರುತ್ತಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಡಿ.ಎಂ.ರವಿ ಕಿಡಿಕಾರಿದರು.
ಪಟ್ಟಣದಲ್ಲಿ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು, ಪಟ್ಟಣದಲ್ಲಿ ಮುಸ್ಲಿಂ ಯುವಕರು ಹಿಂದೂಗಳ ಮೇಲೆ ಹಲ್ಲೆ ಮಾಡು ತ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಶನಿದೇವರ ಉತ್ಸವದಲ್ಲಿಯೂ ಕೋಮು ಗಲಭೆ ಸೃಷ್ಟಿಸಿದ್ದರು ಈ ವೇಳೆಯೂ ಜನಪ್ರತಿನಿಧಿಗಳು ಹಿಂದೂ ವಿರೋಧಿ ನಿಲುವು ತೋರಿದ್ದರು, ಹಿಂದುಗಳ ಮೇಲೆ ಹಲ್ಲೆಯಾದರೂ ಯೋಗ ಕ್ಷೇಮ ವಿಚಾರಿಸದೆ ಮಲತಾಯಿ ದೋರಣೆ ಮಾಡುತ್ತಿದ್ದಾರೆ ಎಂದರು.
ಮತ ಬ್ಯಾಂಕಿಗಾಗಿ ಅಣ್ಣ ತಮ್ಮಂದಿರನ್ನು ಆರೋಗ್ಯ ವಿಚಾರಣೆ ಮಾಡದೆ ಇರುವ ರಾಜಕಾರಣಿಗಳಿಗೆ ತಕ್ಕ ಉತ್ತರ ನೀಡಬೇಕು ಇಂದು ನಮ್ಮ ಅಕ್ಕ ಪಕ್ಕದ ಮನೆವರಿಗೆ ತೊಂದರೆ ಆಗಿದೆ ಮುಂದೆ ನಮ್ಮ ಮನೆಗೂ ತೊಂದರೆ ಆಗ ಬಹುದು ಇದನ್ನು ಮನದಲ್ಲಿ ಇಟ್ಟುಕೊಂಡು ಎಲ್ಲರೂ ಒಗ್ಗೂಡಬೇಕು ಇಲ್ಲದೆ ಹೋದರೆ ಮುಂದೆ ನಮ್ಮ ಉಳಿಗಾಲವಿಲ್ಲ, ಹಲ್ಲೆಯಾದವರ ಮೇಲೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ ಎರಡು ಲಕ್ಷ ಹಿಂದುಗಳು ಇದ್ದೇವೆ ಎಲ್ಲರೂ ಶಾಂತಿಯಿಂದ ನೋಡುತ್ತಿದ್ದಾರೆ, ಇದೇ ಹಾದಿಯಲ್ಲಿ ಮುಂದೆ ಸಾಗದೇ ಹೋದರೆ ಪರಿಣಾಮ ಎದುರಿಸಬೇಕಾಗುತ್ತೆದೆ, ಪೊಲೀಸರು ನಿಸ್ಪಕ್ಷಪಾತವಾಗಿ ತನಿಖೆ ಮಾಡಬೇಕು, ಹಲ್ಲೆಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಪುಸಲಾಯಿಸಿ ಠಾಣೆಗೆ ಕರೆಸಿ ಅಲ್ಲಿಂದ ಜೈಲಿಗೆ ಕಳುಹಿಸಿದ್ದಾರೆ. ಪೊಲೀಸರು ಜನಪ್ರತಿನಿಧಿಗಳ ಕೈಗೊಂಬೆ ಆಗಿದ್ದಾರೆ ಮುಂದಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಸಬೆ ಮಾಜಿ ಸದಸ್ಯ ಧರಣಿ ನಾಗೇಶ್ ಮಾತನಾಡಿ, ಪಟ್ಟಣದಲ್ಲಿ ನಾಲ್ಕೈದು ಬಾರಿ ಈ ರೀತಿ ಹಿಂದೂಗಳ ಯಾತ್ರೆ ವೇಳೆ ಘರ್ಷಣೆ ಆಗಿದೆ, ಅದೇ ಮುಸ್ಲಿಂ ಹಬ್ಬದ ವೇಳೆ ಮೆರವಣಿಗೆ ಮಾಡುವಾಗ ಹಿಂದುಗಳು ಸಹಕಾರ ಮಾಡುತ್ತಾರೆ, ಆದರೆ ಹಿಂದುಗಳು ಯಾತ್ರೆ ಮಾಡುವಾಗ ಅಲ್ಪಸಂಖ್ಯಾತರೂ ಸಹಕಾರ ಮಾಡಬೇಕು ಬದಲಾಗಿ ಘರ್ಷಣೆ ಮಾಡುತ್ತಾರೆ ಇದು ಎಷ್ಟು ಸರಿ, ಪೊಲೀಸರು ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಹೊರತು ಅಮಾಯಕರಿಗೆ ತೊಂದರೆ ಕೊಡುವುದು ತರವಲ್ಲ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಡಿ ಎಂ ರವಿ,ಇದೇ ಸಂದರ್ಭದಲ್ಲಿ ಪುರಸಬೆ ಮಾಜಿ ಸದಸ್ಯ ಧರಣಿ ನಾಗೇಶ್, ಕೆರೆಬೀದಿ ಜಗದೀಶ್, ಹಲ್ಲೆಗೆ ಒಳಗಾದ ರಾಖೇಶ್ ತಂದೆ ವೆಂಕಟೇಶ್, ಹರ್ಷನ ತಂದೆ ಪರಮೇಶ್, ರಾಷ್ಟ್ರ ರಕ್ಷಣಾ ಪಡೆ ಜಿಲ್ಲಾಧ್ಯಕ್ಷ ಸುರೇಶ್ ಸೇರಿದಂತೆ ಇತರರು ಹಾಜರಿದ್ದರು.
ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.
ಪ್ರತಿಷ್ಠಿತ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ತನ್ನ ಮೊದಲ ಎಂ.ಬಿ.ಬಿ. ಎಸ್. ಬ್ಯಾಚ್ 99 ರ ಗುರುವಂದನ ಮತ್ತು 25ನೇ…
ಹಿಂದೂಗಳ ಪವಿತ್ರ ಯಾತ್ರೆ ಆಗಿರುವ ಚಾರ್ ಧಾಮ್ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಿಗ್ಗೆ 7…
ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರು ನಿನ್ನೆ ಜಾಮೀನು ಸಿಗದ ಹಿನ್ನೆಲೆಯಲ್ಲಿ,…
ನೀರಿನ ಟ್ಯಾಂಕ್ನಲ್ಲಿ ಬಿದ್ದು ಮೂವರು ಎಂಜಿನಿಯರ್ಗಳು ಸಾವಿಗೀಡಾದ ಘಟನೆ ಬಳ್ಳಾರಿ ಜಿಲ್ಲೆಯ ಜಿಂದಾಲ್ನ ಎಚ್ಎಸ್ಎಂ ಪ್ಲಾಂಟ್ನಲ್ಲಿ ನಡೆದಿದೆ.
ವಿದ್ಯುತ್ ಹೈಟೆನ್ಷನ್ ವೈರ್ ತಾಕಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.