ಚಾಮರಾಜನಗರ : ಕೈ ಅಭ್ಯರ್ಥಿ ಸುನಿಲ್ ಬೋಸ್ ಪರ ಪ್ರಚಾರ ಮಾಡುವ ವೇಳೆ ಮಕ್ಕಳನ್ನ ಬಳಕೆ ಮಾಡಿದ ಆರೋಪದ ಹಿನ್ನೆಲೆ ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಎಫ್ಎಸ್ ಟಿ ತಂಡ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡಿದೆ.
ಏಪ್ರಿಲ್ 11 ರಂದು ಚಾಮರಾಜನಗರದ ಯರಗನಹಳ್ಳಿಯಲ್ಲಿ ಮಕ್ಕಳನ್ನ ಬಳಸಿ ಸುನಿಲ್ ಬೋಸ್ ಪರ ಪ್ರಚಾರ ಮಾಡಲಾಗಿತ್ತು , ಇದನ್ನ ಗಮನಿಸಿದ ಎಫ್ ಎಸ್ ಟಿ ತಂಡ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದೆ.
ಮೊದಲ ಆರೋಪಿಯಾಗಿ ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಸ್ವಾಮಿ, ಎರಡನೇ ಆರೋಪಿ ಶಾಸಕ ಪುಟ್ಟರಂಗಶೆಟ್ಟಿಯಾಗಿದ್ದಾರೆ.