News Karnataka Kannada
Monday, April 29 2024
ಮೈಸೂರು

ಮೊದಲು ನಿಮ್ಮ ಕ್ಷೇತ್ರ ಹೇಳಿ ಎಂದು ಸಿದ್ದುಗೆ ಸಾರಾ ಟಾಂಗ್

Untitled 199
Photo Credit : News Kannada

ಮೈಸೂರು: ಮಾತೆತ್ತಿದ್ದರೆ ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯನವರೆ ಮೊದಲು ನಿಮ್ಮ ಕ್ಷೇತ್ರ  ಯಾವುದೆಂದು ತಿಳಿಸಿ ಎಂದು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದರು.

ಜೆಡಿಎಸ್ ಮೈಸೂರು ಭಾಗದಲ್ಲಿ ಒಂದು ಸ್ಥಾನ ಗೆಲ್ಲಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ಜೆಡಿಎಸ್ ಒಂದು ಸ್ಥಾನ ಗೆಲ್ಲಲ್ಲ ಅಂತ ನಮ್ಮ ಮೈಸೂರು ನಾಯಕರು ಹೇಳಿzರೆ. ವಿಧಾನಸಭೆ ಚುನಾವಣೆಗೆ ಒಂದು ವರ್ಷವಿದ್ದರೂ ನಿಮ್ಮ ಕ್ಷೇತ್ರ ಯಾವುದೆಂದು ನಿಮಗೆ ಖಾತ್ರಿಯಿಲ್ಲ. ಮೊದಲು ನಿಮ್ಮ ಕ್ಷೇತ್ರ ಯಾವುದು ಹೇಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐದು ವರ್ಷ ಪೂರೈಸಿದ ಸಿಎಂ ಎಂಬ ಹೆಗ್ಗಳಿಕೆ ಪಡೆದ ನೀವು ಚುನಾವಣೆಗೆ ಒಂದು ವರ್ಷ ಇದ್ದರೂ ತಮ್ಮದು ಯಾವ ಕ್ಷೇತ್ರ ಎಂದು ಹೇಳುತ್ತಿಲ್ಲ. ನಿಮ್ಮ ವಿರುದ್ಧ ನಮ್ಮ ಯಾವ ದೊಡ್ಡನಾಯಕರು ಬೇಡ. ಹೆಚ್.ಡಿ.ಕುಮಾರಸ್ವಾಮಿಯವರೂ ಬೇಡ, ನಮ್ಮ ಜಿ.ಟಿ.ದೇವೆಗೌಡರೂ ಬೇಡ. ಸಾಮಾನ್ಯ ಕಾರ್ಯಕರ್ತನನ್ನು ನಿಮ್ಮ ವಿರುದ್ಧ ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದು ಹೇಳಿದರು.

ನೀವು ಈ ಮಟ್ಟಕ್ಕೆ ಬೆಳೆಯಲು ಜೆಡಿಎಸ್ ಪಕ್ಷದ, ಕಾರ್ಯಕರ್ತರ ಶ್ರಮ ಇದೆ ಎಂಬುದನ್ನು ಮರೆಯಬೇಡಿ ಎಂದು ಅಸಮಾಧಾನ ಹೊರಹಾಕಿದರು.

ಜಿಟಿಡಿ ಪುತ್ರನಿಗೆ ಟಿಕೆಟ್ ಕೊಡಿಸುವೆ: ಶಾಸಕ ಜಿ.ಟಿ.ದೇವೆಗೌಡ ಹಾಗೂ ಅವರ ಪುತ್ರ ಹರೀಶ್‌ಗೌಡ ಇಬ್ಬರು ಬೇರೊಂದು ಪಕ್ಷದಲ್ಲಿ ಟಿಕೆಟ್ ಕೆಳಿರುವ ಬಗ್ಗೆ ಪ್ರತಿಕ್ರಿಯಿಸಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರ ಪುತ್ರ ಹುಣಸೂರಿನಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಇಚ್ಚಿಸಿದರೆ ನಾನು ಪಕ್ಷದ ವರಿಷ್ಠರ ಮನವೊಲಿಸಿ ಅವರಿಗೆ ಟಿಕೆಟ್ ಕೊಡಿಸುತ್ತೇನೆ ಎಂದರು.

ಅವರಿಬ್ಬರೂ ಜೆಡಿಎಸ್ ಪPದ ಉಳಿಯುವುದಾದರೆ ನಾನೇ ವರಿಷ್ಠರ ಜೊತೆ ಮಾತನಾಡುತ್ತೇನೆ. ಚಾಮುಂಡೇಶ್ವರಿಯಲ್ಲಿ ಅವರೇ ಶಾಸಕರಿzರೆ. ಹುಣಸೂರಿನಲ್ಲಿ ನಮ್ಮ ಪರಾಜಿತ ಅಭರ್ಥಿ ಸೋಮಶೇಖರ್ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಜಿಟಿಡಿ  ಪುತ್ರ ಹುಣಸೂರಿನಲ್ಲಿ ಸ್ಪರ್ಧಿಸುವುದಾದರೆ ಸೋಮಶೇಖರ್ ಮನವೊಲಿಸಿ, ಹರೀಶ್‌ಗೌಡರಿಗೆ ಹುಣಸೂರಿನಿಂದ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದರು.

ಹಿಂದಿ ಮತ್ತು ಕನ್ನಡ ರಾಷ್ಟ್ರೀಯ ಭಾಷೆ  ವಿಚಾರವಾಗಿ ಪ್ರತಿಕ್ರಿಯಿಸಿ, ಮೊದಲು ನಮ್ಮ ತಾಯಿ. ಆನಂತರ ಬೇರೆಯವರನ್ನು ತಾಯಿ ಅಂತ ಭಾವಿಸಬೇಕು. ಈಗಾಗಲೆ ನಟ ಸುದೀಪ್ ಈ ವಿಚಾರವಾಗಿ ಮಾತನಾಡಿzರೆ. ನಾವು ಯಾವ ಭಾಷೆನೂ ಬೇಡ  ಎನ್ನುವುದಿಲ್ಲ. ಎ ಭಾಷೆಯ ಮೇಲೂ ಪ್ರೀತಿ  ಇದೆ ಎಂದರು.

ಪಿಎಸ್‌ಐ ನೇಮಕಾತಿ ಹಗರಣ ವಿಚಾರವಾಗಿ ಮಾತನಾಡಿ, ಬಿಜೆಪಿ ಸರ್ಕಾರ ಬಂದ ಮೇಲೆ ಒಂದಲ್ಲ ಒಂದು ಹಗರಣ ನಡೆಯುತ್ತಿದೆ. ಮುಖ್ಯಮಂತ್ರಿಗಳು ಇದನ್ನು ಗಮನಿಸಬೇಕು. ಪಿಎಸ್‌ಐ ಮರು ಪರೀಕ್ಷೆ ಮಾಡುವುದರಿಂದ ಆರ್ಥಿಕ  ಹೊರೆಯಾಗಲಿದೆ. ಜೊತೆಗೆ ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಪರಿಸ್ಥಿತಿ ಏನು. ಇದನ್ನು ಸರ್ಕಾರ ಗಮನಿಸಿಬೇಕು ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು