ಮೈಸೂರು: ಡೆಮಾನ್ ಸ್ಟೇಷನ್ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಓದಿದ ವಿದ್ಯಾರ್ಥಿಗಳು ತಮ್ಮ ಇಪ್ಪತೈದು ವರ್ಷಗಳ ಸವಿ ನೆನಪಿಗಾಗಿ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗೌರವ ಸಲ್ಲಿಸಿದರು.
1997ರಲ್ಲಿ ಎಸ್ ಎಸ್ ಎಲ್ ಸಿ ಓದಿದ ವಿದ್ಯಾರ್ಥಿಗಳು ಆ ನಂತರ ತಮ್ಮ ವಿದ್ಯಾರ್ಥಿ ಜೀವನವನ್ನು ಬೇರೆ ಬೇರೆ ಕಾಲೇಜುಗಳಲ್ಲಿ ಕಳೆದು ವಿವಿಧ ಉದ್ಯೋಗಗಳನ್ನು ಮಾಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಈ ನಡುವೆ ಭಾರ್ಗವ ಎಂಬುವರು ತಮ್ಮ ಬ್ಯಾಚ್ ನಲ್ಲಿ ಓದಿದವರನ್ನು ಸಂಪರ್ಕಿಸಿ ಎಲ್ಲರೂ ಸೇರಿ ತಮಗೆ ಪಾಠ ಮಾಡಿದ ಗುರುಗಳಿಗೆ ವಂದನೆ ಸಲ್ಲಿಸುವ ತೀರ್ಮಾನ ಮಾಡಿದರು. ಅದರಂತೆ ಕನ್ನಡ ಶಿಕ್ಷಕರಾದ
ಡಾ. ಸೋಮಶೇಖರ್ ಅವರನ್ನು ಭೇಟಿ ಮಾಡಿ ಅವರ ಸಲಹೆಯಂತೆ ಸಹಪಾಠಿಗಳ ಹುಡುಕಾಟದಲ್ಲಿ ತೊಡಗಿದರು. ನಂತರ ಅವತ್ತು ಬೋಧಿಸಿದ ಶಿಕ್ಷಕರನ್ನು ಹುಡುಕಿ ಅವರಿಗೆ ಮಾಹಿತಿ ತಿಳಿಸಿದ ಮೇರೆಗೆ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡರು.
ನಂತರ ಶಾಲಾ ಆವರಣದಲ್ಲಿ ನಡೆದಿದ್ದು ಕಾರ್ಯಕ್ರಮ ಎನ್ನುವುದಕ್ಕಿಂತಲೂ ಗುರು ಮತ್ತು ಶಿಷ್ಯರ ನಡುವೆ ಅವಿನಾಭಾವದ ಸ್ಮರಣೀಯ ಕ್ಷಣವಾಗಿತ್ತು. ಶಿಕ್ಷಕರನ್ನು ನೋಡಿದ ಆ ಕ್ಷಣದಲ್ಲಿ ನೆರೆದಿದ್ದ ಶಿಷ್ಯರ ಕಣ್ಣಂಚಿನಲ್ಲಿ ನೀರು ಜಿನುಗಿತ್ತು,