Categories: ಮೈಸೂರು

ಪಿಯು ಬೋರ್ಡ್ ಯಡವಟ್ಟು:10 ಅಂಕ ಪಡೆದು ಫೇಲಾಗಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ 85 ಅಂಕ

ಮೈಸೂರು: ಪಿಯು ಬೋರ್ಡ್ ಎಡವಟ್ಟಿನಿಂದ 10 ಅಂಕ ಪಡೆದು ಫೇಲಾಗಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನದಲ್ಲಿ 85 ಅಂಕಗಳಿಸಿರುವ ಆಶ್ಚರ್ಯಕರವಾದ ಘಟನೆಯೊಂದು ನಗರದ ಟೆರಿಷಿಯನ್ ಕಾಲೇಜಿನಲ್ಲಿ ನಡೆದಿದೆ.

ಮೈಸೂರಿನ ರಾಜೀವ್ ನಗರದ ಅಬ್ದುಲ್ ಖಲೀಲ್ ಅವರ ಪುತ್ರಿ ಆರ್ಷಿಯಾ ಸಮ್ರಿನ್ ಸಿದ್ದಾರ್ಥನಗರದ ಟೆರಿಷಿಯನ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಈ ಸಾಧನೆ ಮಾಡಿರುವಾಕೆ. ಈಕೆ ಇಂಗ್ಲಿಷ್ ನಲ್ಲಿ 80, ಹಿಂದಿ 91, ಅರ್ಥಶಾಸ್ತ್ರ 93, ವಾಣಿಜ್ಯ ಶಾಸ್ತ್ರ 95, ಅಕೌಂಟ್ಸ್ ನಲ್ಲಿ 85 ಅಂಕ ಗಳಿಸಿದ್ದಳು. ಆದರೆ, ಇತಿಹಾಸದಲ್ಲಿ ಮಾತ್ರ ಕೇವಲ 10 ಅಂಕ ಪಡೆದು ಅನುತೀರ್ಣಗೊಂಡಿದ್ದಳು. ಇದರಿಂದಾಗಿ ಖಿನ್ನತೆ ಗೊಳಗಾಗಿದ್ದಳು.

ಪೋಷಕರು, ಶಿಕ್ಷಕರು ಧೈರ್ಯ ತುಂಬಿ ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಕಾಫಿ ಪಡೆದು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ಈಕೆ ಇತಿಹಾಸ ವಿಷಯದಲ್ಲಿ 10 ಅಂಕ ಪಡೆದು ಪೇಲಾಗಿದ್ದಾಕೆ ಮರು ಮೌಲ್ಯಮಾಪನದಲ್ಲಿ 85 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

ಹಾಸಿಗೆ ಹಿಡಿದಿದ್ದ ವಿದ್ಯಾರ್ಥಿನಿ:
ಬೇರೆ ಎಲ್ಲಾ ಎಲ್ಲಾ ವಿಷಯಗಳಲ್ಲೂ ಉನ್ನತ ದರ್ಜೆಯಲ್ಲಿ ಪಾಸಾಗಿದ್ದ ವಿದ್ಯಾರ್ಥಿನಿ ಇತಿಹಾಸ ವಿಷಯದಲ್ಲಿ 10 ಅಂಕ ಪಡೆದು ಆಶ್ಚರ್ಯರೀತಿಯಲ್ಲಿ ಫೇಲಾಗಿದ್ದು ಇದರ ಖಿನ್ನತೆಗೊಳಗಾಗಿ ಹಾಸಿಗೆ ಹಿಡಿದಿದ್ದ ಈಕೆ ಶಿಕ್ಷಕರು ಹಾಗೂ ಪೋಷಕರು ಧೈರ್ಯ ತುಂಬಿ ಮರು ಮಲ್ಯಮಾಪನ ಮಾಡಿಸಿದ್ದರಿಂದ ಉನ್ನತ ದರ್ಜೆಯಲ್ಲಿ ಪಾಸಾಗಿದರಿಂದ ಚೇತರಿಸಿಕೊಂಡಿದ್ದಾಳೆ.

Desk

Recent Posts

ಹಜ್ ಯಾತ್ರಾರ್ಥಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ

ಪ್ರಸಕ್ತ ಸಾಲಿನಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಜಿಲ್ಲಾ ವಕ್ಫ್ ಮಂಡಳಿ, ಜಿಲ್ಲಾಸ್ಪತ್ರೆ ಹಾಗೂ ತಾಜಿರಾನ್ ಮಸೀದಿ ಸಹಯೋಗದಲ್ಲಿ ನಗರದ…

20 seconds ago

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಹಿಳೆಯರಿಂದ ವಿಶೇಷ ಪೂಜೆ, ಪ್ರಾರ್ಥನೆ

ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ…

12 mins ago

ಅವರಿಗೆ ನೀವು ಆತ್ಮನಿರ್ಭರರಾಗಿರುವುದು ಇಷ್ಟವಿಲ್ಲ: ಪ್ರಿಯಾಂಕಾ ಗಾಂಧಿ

ಬಿಜೆಪಿ ನಿಮ್ಮನ್ನು ೫ಕೆಜಿ ರೇಷನ್ನಿನ ಮೇಲೆ ಅವಲಂಬಿತರನ್ನಾಗಿಸಲು ನೋಡುತ್ತಿದೆ. ನೀವು ಆತ್ಮನಿರ್ಭರರಾಗುವುದನ್ನು ಅವರು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ…

13 mins ago

ಚಾಮರಾಜನಗರ: ಸಿಡಿಲು ಬಡಿದು ಮೂರು ಜಾನುವಾರುಗಳು ಸಾವು

ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.

35 mins ago

ರಾಯ್‌ಬರೇರಿಯಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ; ಕಿಶೋರಿ ಶರ್ಮಾ ಪಾಲಾದ ಅಮೇಥಿ

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರು ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಕಡೆಗೂ ತೆರೆ ಬಿದ್ದಿದ್ದು, ರಾಹುಲ್‌ ಗಾಂಧಿ ತಮ್ಮ…

41 mins ago

ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ ಉಳಿದ…

1 hour ago