Categories: ಮೈಸೂರು

ತರಾತುರಿಯಲ್ಲಿ ಬಾಂಬ್ ನಿಷ್ಕ್ರೀಯಾ ದಳ ರಚನೆ

ಮೈಸೂರು: ಗುಡ್ಡಕ್ಕೆ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟರು ಎಂಬ ಗಾದೆ ಮಾತು ಮೈಸೂರಿನಲ್ಲಿ ಬಾಂಬ್ ಸ್ಪೋಟವಾದ ನಂತರ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆಗೆ ಅನ್ವಯಿಸುತ್ತದೆ. ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಂತರ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳವನ್ನು ಮೈಸೂರಿನಲ್ಲಿ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ.


ಪ್ರತಿ ವರ್ಷವೂ ದೇಶ ವಿದೇಶಗಳಿಂದ 25 ಲಕ್ಷಕ್ಕೂ ಹೆಚ್ಚು ಜನ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ನಗರದಲ್ಲಿ ಡಿಎಫ್ಆರ್ ಎಲ್, ಸಿಎಫ್ ಟಿಆರ್ ಐ ಹಾಗೂ ಭಾರತೀಯಾ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಘಟಕ ಜೊತೆಗೆ ಸಾಫ್ಟ್ ವೇರ್ ಕಂಪನಿಗಳಾದ ಇನ್ಫೋಸಿಸ್, ಪ್ರವಾಸಿಗರನ್ನು ಆಕರ್ಷಿಸುವ ಅರಮನೆ, ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಮಂಡ್ಯ ಜಿಲ್ಲೆಯಲ್ಲಿರುವ ಕೆ.ಆರ್.ಎಸ್ ನಂತಹ ಸ್ಥಳವಿದ್ದರೂ ಮೈಸೂರಿನಲ್ಲಿ ಬಾಂಬ್ ಪತ್ತೆದಳವಿದೆ. ಆದರೆ ಬಾಂಬ್ ನಿಷ್ಕ್ರೀಯ ದಳ ಇಲ್ಲ.

ಬಾಂಬ್ ನಿಷ್ಕ್ರೀಯಾ ದಳಕ್ಕೆ ಪ್ರಸ್ತಾವನೆ:
ನಗರದ ನ್ಯಾಯಾಲಯದ ಆವರಣದಲ್ಲಿ ಕಳೆದ ವಾರ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ನಂತರ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳವನ್ನು ಮೈಸೂರಿನಲ್ಲಿ ಸ್ಥಾಪನೆ ಮಾಡಬೇಕೆಂಬ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದ್ದು, ಸಾಮಾನ್ಯವಾಗಿ ದಸರಾ ಮಹೋತ್ಸವ ಹಾಗೂ ಇತರ ವಿವಿಐಪಿ ಸಭೆಗಳು ನಡೆಯುವ ಸಂದರ್ಭದಲ್ಲಿ ಮಾತ್ರ ಬೆಂಗಳೂರಿನಿಂದ ಆಗಮಿಸುವ ಬಾಂಬ್ ನಿಷ್ಕ್ರೀಯಾ ದಳ ಕೆಲಸ ಮುಗಿಸಿ ವಾಪಸ್ಸ್ ಆಗುತ್ತಿದ್ದು, ಆದರೆ ಮೈಸೂರಿನಲ್ಲಿ ಬಾಂಬ್ ಪತ್ತೆದಳದ 12 ಸಿಬ್ಬಂದಿಯಿರುವ ಎರಡು ಬಾಂಬ್ ಪತ್ತೆದಳವಿದ್ದು ಜೊತೆಗೆ ಶ್ವಾನದಳವಿದೆ. ಇವು ಬಾಂಬ್ ಪತ್ತೆಹಚ್ಚಲು ನೈಪುಣತೆ ಪಡೆದಿದ್ದು, ಆದರೆ ಬಾಂಬ್ ನಿಷ್ಕ್ರೀಯಗೊಳಿಸುವ ತಂಡವಿಲ್ಲ. ಈ ಬಗ್ಗೆ ಮೊನ್ನೆಯ ಬಾಂಬ್ ಸ್ಫೋಟದ ನಂತರ ಎಚ್ಚೆತ್ತ ನಗರ ಪೊಲೀಸ್ ಕಮಿಷನರ್ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳವನ್ನು ಮಂಜೂರು ಮಾಡಿದ ಕೋರಿದ ಪ್ರಸ್ತಾವನೆಗೆ ಅನುಮೊದನೆ ಸಿಕ್ಕಿದೆ.

ಹುಸಿಬಾಂಬ್ ಕರೆಗಳ ವಿವರ:
ಮೈಸೂರು ನಗರದಲ್ಲಿ 2013ರ ಸೆಪ್ಟಂಬರ್ 26ರಂದು ಅಂಚೆ ಕಛೇರಿಗೆ ಹುಸಿ ಬಾಂಬ್ ಕರೆ. 2014 ಅಕ್ಟೋಬರ್ 2ರಂದು ಕೆ.ಆರ್ ಆಸ್ಪತ್ರೆಗೆ ಹುಸಿ ಬಾಂಬ್ ಕರೆ. 2014 ಸೆಪ್ಟಂಬರ್ 21ರಂದು ದಸರಾ ಮಹೋತ್ಸವ ಸಂದರ್ಭದಲ್ಲಿ ಇ-ಮೇಲ್ ದಾಳಿ ಸಂದೇಶ, 2015 ಜನವರಿ 23ರಂದು ಮೈಸೂರಿನ ಅಂಬಾವಿಲಾಸ್ ಅರಮನೆ ಹುಸಿ ಬಾಂಬ್ ಕರೆ, 2015 ಮಾರ್ಚ್ 5 ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಛೇರಿ ಹುಸಿ ಬಾಂಬ್ ಕರೆ, 2015 ಅಕ್ಟೋಬರ್ 1 ಖಾಸಗಿ ಕಾಲೇಜಿಗೆ ಹುಸಿ ಬಾಂಬ್ ಕರೆ, 2016 ಜನವರಿ 25 ಜಿಲ್ಲಾಧಿಕಾರಿಗಳ ಕಛೇರಿಗೆ ಹುಸಿ ಬಾಂಬ್ ಕರೆ, 2016 ಜುಲೈ 26 ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನ ನೋಟು ಮುದ್ರಣ ಘಟಕಕ್ಕೆ ಹುಸಿ ಬಾಂಬ್ ಕರೆಗಳು ಬಂದಿದ್ದು, ಮೊನ್ನೆ ನಗರದ ನ್ಯಾಯಾಲಯದ ಶೌಚಾಯಲದಲ್ಲಿ ನಡೆದ ಕಚ್ಚಾ ಬಾಂಬ್ ಸ್ಫೋಟ ಶಾಶ್ವತ ಬಾಂಬ್ ನಿಷ್ಕ್ರೀಯಾ ದಳ ರಚನೆಗೆ ನಾಂದಿಯಾಯಿತು.

ಬಾಂಬ್ ನಿಷ್ಕ್ರೀಯ ದಳ ರಚನೆಗೆ ಸಿದ್ದತೆ:
ನ್ಯಾಯಾಲಯದ ಬಾಂಬ್ ಸ್ಫೋಟದ ನಂತರ ಎಚ್ಚೆತ್ತ ಮೈಸೂರು ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರೀಯಾ ದಳದ ರಚನೆಯ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಅದಕ್ಕೆ ಬೇಕಾದ ನುರಿತ ಸಿಬ್ಬಂದಿ ಅಯ್ಕೆ, ಅಗತ್ಯ ಪರಿಕರಗಳ ಹಾಗೂ ಸಿಬ್ಬಂದಿಗಳ ತರಬೇತಿಗೆ ಸಿದ್ದತೆ ನಡೆಸಲಾಗುತ್ತಿದ್ದು, ಬಾಂಬ್ ನಿಸ್ಕ್ರೀಯಾ ದಳ ಮಂಜೂರು ಮಾಡುವಂತೆ ಕೋರಿಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೊದನೆ ಸಿಕ್ಕಿದೆ. ಈಗ ಸದೃಢ ಬಾಂಬ್ ನಿಷ್ಕ್ರೀಯಾ ದಳವನ್ನು ರಚನೆ ಮಾಡಲಾಗುವುದೆಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ತಿಳಿಸಿದ್ದಾರೆ.

Desk

Recent Posts

ಎನ್‌ಡಿಎ ಸರ್ಕಾರ ಬಂದ್ರೆ ಮೆಕ್ಕಾಗೆ ಹೋಗುವ ಮುಸ್ಲಿಮರಿಗೆ 1 ಲಕ್ಷ ರೂ ನೆರವು: ಚಂದ್ರಬಾಬು ನಾಯ್ಡು

ಆಂಧ್ರಪ್ರದೇಶದಲ್ಲಿ ಲೋಕಸಭಾ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತಿದ್ದು, ರಾಜಕೀಯ ಬಿಸಿ ಹೆಚ್ಚಿದೆ.

3 mins ago

ಶ್ರೀನಿವಾಸ ಪ್ರಸಾದ್‌ ನಿಧನ; ಪ್ರಧಾನಿ ಮೋದಿ ಸಂತಾಪ

ಚಾಮರಾಜನಗರ ಕ್ಷೇತ್ರದ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

12 mins ago

ಶ್ರೀನಿವಾಸ ಪ್ರಸಾದ್‌ರಂತಹ ಧೀಮಂತರು ಈಗೆಲ್ಲಿದ್ದಾರೆ: ರಾಜು ಆಲಗೂರ್ ತೀವ್ರ ಕಳವಳ

ವಿ.ಶ್ರೀನಿವಾಸ್ ಪ್ರಸಾದ ಅವರು ಒಬ್ಬ ಧೀಮಂತ ಹಾಗೂ ಜನಾನುರಾಗಿ ನಾಯಕರಾಗಿದ್ದರು ಎಂದು ಕಾಂಗ್ರೆಸ್‌ನ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು…

17 mins ago

ಶಬ್ದ ಮಾಲಿನ್ಯದಿಂದ ನಿದ್ರೆಗೆ ಭಂಗ: ಹೃದಯಾಘಾತದ ಆತಂಕ ಹೆಚ್ಚಳ

ಇಂದು ಶಬ್ದ ಮಾಲಿನ್ಯ ಮಾತ್ರವಲ್ಲದೆ ಪ್ರತಿಯೊಂದು ಮಾಲಿನ್ಯವು ಪರಿಸರದ ಗುಣಮಟ್ಟಕ್ಕೆ ಮಾತ್ರವಲ್ಲದೆ ಮನುಷ್ಯನ ಜೀವನಕ್ಕೂ ಗಂಭೀರ ಅಪಾಯವಾಗಿದೆ. ಶಬ್ದ ಮಾಲಿನ್ಯವು…

44 mins ago

ಮಂಗಳೂರು: ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ !

ಗುದನಾಳದಲ್ಲಿ ಬಚ್ಚಿಟ್ಟು 54 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.…

1 hour ago

ಮತ್ತೊಂದು ದಾಖಲೆ ಬರೆದ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ

ಐಪಿಎಲ್ ಇತಿಹಾಸದಲ್ಲಿ ಕೂಲ್‌ ಕ್ಯಾಪ್ಟನ್ ಎಂ.ಎಸ್​. ಧೋನಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಕಳೆದ ದಿನ (ಏ.28) ಚೆನ್ನೈನ ಎಂ.ಎ. ಚಿದಂಬರಂ…

1 hour ago