News Karnataka Kannada
Monday, April 29 2024
ಮೈಸೂರು

ಒಂದು ರೂಪಾಯಿಗೆ ಪಾನಿಪುರಿ ಹಿಂದಿನ ಗುಟ್ಟೇನು?

Photo Credit :

ಒಂದು ರೂಪಾಯಿಗೆ ಪಾನಿಪುರಿ ಹಿಂದಿನ ಗುಟ್ಟೇನು?

ಮೈಸೂರು: ಹಳೆ ನೋಟುಗಳನ್ನು ಬ್ಯಾನ್ಮಾಡಿದ್ದು ಹೊಸ ನೋಟ್ ಗಳಿಗೆ ಚಿಲ್ಲರೆ ಸಮಸ್ಯೆಯಾಗಿದ್ದು ಇದರಿಂದ ಜನಸಾಮಾನ್ಯರಿಗೆ ತಿನ್ನಲು ತೊಂದರೆಯಾಗದಿರಲಿ ಎಂದು ಸ್ವೀಟ್ಸ್ ಅಂಗಡಿಯೊಂದು ಹೊಸ ಪ್ಲಾನ್ ಜಾರಿಗೆ ತಂದಿದೆ ಹಾಗಾದರೇ ಆ ಪ್ಲಾನ್ ಏನು ಎಂಬುದಕ್ಕೆ ಈ ಸುದ್ದಿ ಓದಿ.

500 ಮತ್ತು ಸಾವಿರ ಮುಖಬೆಲೆಯ ಹಳೆಯ ನೋಟುಗಳನ್ನು ರದ್ದು ಪಡಿಸಿ 2 ಸಾವಿರ ಮುಖಬೆಲೆಯ ಹೊಸ ನೋಟುಗಳು ಮಾರು ಕಟ್ಟೆಗೆ ಬಂದಿದ್ದು ಈ ನೋಟ್ ಗಳಿಗೆ ಚಿಲ್ಲರೆ ಸಮಸ್ಯೆಯಾಗಿದ್ದು ಇದನ್ನ ಮನಗಂಡ ಕುವೆಂಪುನಗರದ ಪಂಚ ಮಂತ್ರ ರಸ್ತೆಯಲ್ಲಿರುವ ವೈಷ್ಣವಿ ಸ್ವೀಟ್ಸ್ ಅಂಡ್ ಸ್ನಾಕ್ಸ್ ಮಳಿಗೆಯೂ ಒಂದು ರೂಪಾಯಿಗೆ ಪಾನಿಪುರಿ, ಎರಡು ರೂಪಾಯಿಗೆ ಮಸಾಲೆ ಪುರಿ, ಮೂರು ರೂಪಾಯಿಗೆ ಸಮೋಸ, ನಾಲ್ಕು ರೂಪಾಯಿಗೆ ಜಿಲೇಬಿ,  ಐದು ರೂಪಾಯಿಗೆ ಪಾವ್ ಬಜ್ಜಿಯನ್ನು ನವೆಂಬರ್ 23ರಿಂದ 25ರವರೆಗೆ ಸಂಜೆ 6.30ರಿಂದ 9 ಗಂಟೆಯವರೆಗೆ ಜನರಿಗೆ ನೀಡುತ್ತಿದೆ. ಆ ಮೂಲಕ ಮೋದಿ ಅವರ ಕಾರ್ಯಕ್ಕೆ ತಮ್ಮ ತಾವು ಸಹ ಕೈಜೋಡಿಸಿದ್ದು ಈ ಮೂಲಕ ತಮ್ಮಲ್ಲಿರುವ ಕಪ್ಪು ಹಣವನ್ನ ಬಿಳಿ ಮಾಡುವ ಹೊಸ ಉಪಾಯ ಇದಾಗಿದೆ.

ಮುಗಿಬಿದ್ದ ಜನರು:
ಒಂಡು ರೂಪಾಯಿ ಪಾನಿಪುರಿ ಸೇರಿದಂತೆ ಇತರ ಚಾಟ್ಸ್ ಗಳನ್ನ ತಿನ್ನಲು ನಿನ್ನೆ ಸಂಜೆ ಅಂಗಡಿಯ ಮುಂದೆ ಜನಸಾಗರವೇ ಸೇರಿದ್ದು ಒಂದು ಕಿ.ಮೀ ವರೆಗೆ ಸರತಿ ಸಾಲಿನಲ್ಲಿ ನಿಂತು ಜನರು ಚಾಟ್ಸ್ ಸವಿದರು. ಸ್ವೀಟ್ ಅಂಗಡಿಯ ಮಾಲೀಕರು ಚಾಟ್ಸ್ ವಿತರಣೆ ಮಾಡಲು ವಿಳಂಬವಾಗಿ ಕೆಲ ಗೊಂದಲ ಉಂಟಾಗಿದ್ದು, ಸ್ಥಳಕ್ಕೆ ಕುವೆಂಪು ನಗರ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಗೊಂದಲ ಸರಿಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು