ಪುತ್ತೂರು: ಮುಸ್ಲಿಂ ಯುವಕನಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ನಾಗನಕಟ್ಟೆಗೆ ಹಾನಿಯಾಗಿರುವ ಘಟನೆ ನೆಲ್ಲಿಕಟ್ಟೆಯ ನಾಗನಬನದಲ್ಲಿ ನಡೆದಿದೆ.
ಮಹಮ್ಮದ್ ಸಲಾಂ ಎನ್ನುವ ಯುವಕನಿಂದ ಕೃತ್ಯ ನಡೆದಿದ್ದು, ಏಕಾಏಕಿ ನಾಗನಕಟ್ಟೆಗೆ ನುಗ್ಗಿ ಗೇಟ್ ಹಾಗೂ ಇತರ ಸಾಮಾಗ್ರಿಗಳಿಗೆ ಹಾನಿ ಮಾಡಲಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಆರೋಪಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಾಂಜಾ ವ್ಯಸನಿಯಾಗಿರುವ ಆರೋಪ ಕೇಳಿಬಂದಿದೆ. ಮಹಮ್ಮದ್ ಸಲಾಂ ಇಂಥಹ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಗಾಂಜಾ ಸೇವಿಸಿ ಸಮಾಜಕ್ಕೆ ಆರೋಪಿ ಮಹಮ್ಮದ್ ಸಲಾಂ ಕಂಟಕವಾಗಿದ್ದಾನೆ.